ಶ್ರೀ ಕ್ಷೇತ್ರದಿಂದ ನೂತನ ಸಮುದಾಯ ಭವನಕ್ಕೆ 3,00,000ರೂ ಸಹಾಯ ಹಸ್ತ

ಶ್ರೀ ಕ್ಷೇತ್ರದಿಂದ ನೂತನ ಸಮುದಾಯ ಭವನಕ್ಕೆ 3,00,000ರೂ ಸಹಾಯ ಹಸ್ತ

ಶ್ರೀ ಕ್ಷೇತ್ರದಿಂದ ನೂತನ ಸಮುದಾಯ ಭವನಕ್ಕೆ 3,00,000ರೂ ಸಹಾಯ ಹಸ್ತ

ಹೊಸಹಳ್ಳಿ ತಾಲೂಕಿನ ಬೂದನೂರು ವಲಯದ ಮಲ್ಲಯ್ಯನ ದೊಡ್ಡಿ ಕಾರ್ಯಕ್ಷೇತ್ರದ  ನೂತನ ಸಮುದಾಯ ಭವನದ ಜೀರ್ಣೋದ್ಧಾರಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ರೂ 3,00,000  ಮೊತ್ತದ ಸಹಾಯ ಧನದ ಮಂಜೂರಾತಿ ಪತ್ರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ  ಮಂಡ್ಯ ಜಿಲ್ಲೆಯ ಗೌರವಾನ್ವಿತ ನಿರ್ದೇಶಕರಾದ ಶ್ರೀಮತಿ ಚೇತನಾ  ಎಂ.ಹಾಗೂ ತಾಲೂಕು ಯೋಜನಾಧಿಕಾರಿ ರವಿ ರವರು  ಸಮುದಾಯ ಭವನದ ಸಮಿತಿಯವರಿಗೆ  ಹಸ್ತಾoತರ ಮಾಡಿದರು. ಇದೆ ಸಂದರ್ಭದಲ್ಲಿ  ಸಮುದಾಯ ಭವನಕ್ಕೆ ಬಹುದೊಡ್ಡ  ಅನುದಾನ  ನೀಡಿದ  ಪರಮ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಯವರಿಗೆ ಸಮುದಾಯ ಭವನದ ಸಮಿತಿಯವರು ಹಾಗೂ ಊರಿನವರು  ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ  ಹೊಸಹಳ್ಳಿ ತಾಲೂಕಿನ ಮಾನ್ಯ  ಯೋಜನಾಧಿಕಾರಿಗಳಾದ  ರವಿಯವರು,ಸಮುದಾಯ ಭವನದ ಆಡಳಿತ ಮಂಡಳಿಯವರು,ಒಕ್ಕೂಟದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಊರಿನ ಗಣ್ಯರು,  ವಲಯ   ಮೇಲ್ವಿಚಾರಕರು ಅಶೋಕ್ , ಸೇವಾ ಪ್ರತಿನಿಧಿ ಶ್ವೇತಾ , ಸ್ವಸಹಾಯ  ಮತ್ತು  ಸಂಘದ ಸದಸ್ಯರು ಉಪಸ್ಥಿತರಿದ್ದರು.