ಶ್ರೀ ಪತಂಜಲಿ ವತಿಯಿಂದ ಅಗ್ನಿಹೋತ್ರ ಪೂಜಾ ಕಾರ್ಯಕ್ರಮ

ಶ್ರೀ ಪತಂಜಲಿ ವತಿಯಿಂದ ಅಗ್ನಿಹೋತ್ರ ಪೂಜಾ ಕಾರ್ಯಕ್ರಮ

ಶ್ರೀ ಪತಂಜಲಿ ವತಿಯಿಂದ ಅಗ್ನಿಹೋತ್ರ ಪೂಜಾ ಕಾರ್ಯಕ್ರಮ

ಕೋಲಾರ : ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವಕೀಲರ ಭವನ ಶಾಖೆ ವತಿಯಿಂದ ಲೋಕ ಕಲ್ಯಾಣಾರ್ಥವಾಗಿ ಸೋಮವಾರ ಮುಂಜಾನೆ 5.00 ಗಂಟೆಗೆ ಅಗ್ನಿಹೋತ್ರ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಯೋಗಶಿಕ್ಷಕರಾದ ಮಾರ್ಕೋಂಡಣ್ಣನವರು ಅಗ್ನಿಹೋತ್ರ ಪೂಜಾ ಕಾರ್ಯಕ್ರಮ ವಿಧಾನ ಹಾಗೂ ಅದರ ಮಹತ್ವವನ್ನು ತಿಳಿಸಿದರು. ಅಗ್ನಿಹೋತ್ರ ಮಂತ್ರ ಪಠಿಸುವುದರಿಂದ ನಮ್ಮಲ್ಲಿರುವ ನಕರಾತ್ಮಕ ಚಿಂತನೆಗಳು ದೂರವಾಗಿ ಧನಾತ್ಮಕ ಚಿಂತನೆಗಳು ಹೆಚ್ಚಾಗುವುದು, ಹೋಮ ಹವನ ಮಾಡುವುದರಿಂದ ನಮ್ಮ ಶ್ವಾಸಕೋಶದ ಸಮಸ್ಯೆ ಹಾಗೂ ಉಸಿರಾಟ ತೊಂದರೆ ನಿವಾರಣೆಯಾಗುವುದು, ರೋಗ ಹರಡುವ ಬ್ಯಾಕ್ಟೀರಿಯಾ, ವೈರಸ್ ನಾಶವಾಗುವುದಾಗಿ ತಿಳಿಸಿದರು. ಯೋಗಾಭ್ಯಾಸದಲ್ಲಿ ಯೋಗಶಿಕ್ಷಕರಾದ ರವಿಕುಮಾರ್, ಶ್ರೀನಿವಾಸ್, ಯೋಗ ಬಂಧುಗಳಾದ ಅಶೋಕ್, ಚಂದ್ರು, ಉಮಾಶಂಕರ್, ಶ್ರೀನಾಥ್, ರಾಮಮೂರ್ತಿ, ವೆಂಕಟೇಶ, ಅನಿತ, ವಿಜಯಲಕ್ಷ್ಮಿ, ಮಮತ, ವೆಂಕಟೇಶ್, ರಾಜೇಶ್, ಸಾಯಿಋಷಿಲ್, ಲತಾ, ವಿಜಯಕ್ಕ, ರಮ್ಯಾ, ಲಕ್ಷ್ಮಿ, ಅನಿತಾ, ಸತೀನಾ , ಮಮತ, ಸುನೀತಾ ಮುಂತಾದರವರು ಭಾಗವಹಿಸಿದ್ದರು.