13ನೇ ವರ್ಷದ ವಿನಾಯಕ ಪಬ್ಲಿಕ್ ಸ್ಕೂಲ್ ವಾರ್ಷಿಕೋತ್ಸವದ ಸ್ನೇಹ ಸಮ್ಮೇಳನ ಸಮಾರಂಭ ಜರಗಿತು
ಕೊಪ್ಪಳದ ಕುಕನೂರು ತಾಲೂಕಿನ ಯೆರೇಹಂಚಿನಾಳ ಗ್ರಾಮದ ಹೊರ ವಲಯದಲ್ಲಿ ಇರುವ ಶ್ರೀ ಪತ್ರೇಶ್ವರ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾದ ವಿನಾಯಕ ಪಬ್ಲಿಕ್ ಸ್ಕೂಲ್ 13ನೇ ವರ್ಷದ ಶಾಲಾ ವಾರ್ಷಿಕೋತ್ಸವದ ಸ್ನೇಹ ಸಮ್ಮೇಳನ ಮಕ್ಕಳ ಬಿಳ್ಕೊಡುವ ಸಮಾರಂಭ
ಅದ್ದೂರಿಯಾಗಿ ಜರುಗಿತು
2025-26.ನೇ ಸಾಲಿನಲ್ಲಿ 13ನೇ ವರ್ಷದ ಶಾಲಾ ವಾರ್ಷಿಕೋತ್ಸವದ ಬಿಳ್ಕೊಡುವ ಸಮಾರಂಭದಲ್ಲಿ
ಶ್ರೀ ಮ.ನಿ.ಪ್ರ. ಸ್ವ ಡಾ|| ಹಿರಿಶಾಂತವೀರ ಮಹಾಸ್ವಾಮಿಗಳು ಶ್ರೀ ಗವಿಸಿದೇಶ್ವರ ಶಾಖಾಮಠ ಹೂವಿನಹಡಗಲಿ. ಹಾಗೂ ವೇ. ಮೂ. ಶ್ರೀ ಸಿದ್ದಯ್ಯ ಹಿರೇಮಠ ಇನ್ನೊಬ್ಬ ವೇ. ಮೂ.ಶ್ರೀ ಶಿವಾನಂದಯ್ಯ ಕೊಪ್ಪಳಮಠ ಇವರು ಈ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು.
ಈ ಸಂಸ್ಥೆಯ ಅಧ್ಯಕ್ಷರಾದ ರಾಜಶೇಖರ್ ಕಟ್ಟಿ. ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡರೆ
ಸೋಂಪ್ರದ ಮುಖ್ಯ ನಿವೃತ್ತ ಶಿಕ್ಷಕರಾದ. ಬಾಸ್ಕರ್ ಎಮ್. ಪತ್ತಾರ ಹಾಗೂ ಕನ್ನಡ ಸರ್ಕಾರಿ ಉಪನ್ಯಾಸಕರಾದ ಡಾ|| ಮಹಾಂತೇಶ ಬಿ. ನೇಲಾಗಣಿ ಈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಅಂದಪ್ಪ ರುದ್ರಪ್ಪ ಕೋಳೂರ ವೇದಿಕೆ ಮೇಲಿದ್ದ ಎಲ್ಲಾ ಗಣ್ಯರು ಜ್ಯೋತಿ ಬೆಳಗಿಸಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂಸ್ಥೆ ಅಧ್ಯಕ್ಷರಾದ ರಾಜಶೇಖರ್ ಕಟ್ಟಿ. ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ಪೂಜ್ಯರಿಗೆ,ಗಣ್ಯರಿಗೆ ಸ್ವಾಗತಿಸಿಕೊಂಡು ಗೌರವಾನ್ವಿತರಿಗೆ ಸನ್ಮಾನಿಸಿದರು.
ರಾಜ್ಯದಲ್ಲಿ ಬಾಲ್ಯ ವಿವಾಹ ಮಾಡುವುದನ್ನು ನಿಲ್ಲಿಸಲು ನಾಟಕ ಪ್ರದೇಶಿಸಿದ ಮಕ್ಕಳು ಈ ಮನರಂಜನೆ ಮೂಲಕ ರಾಜ್ಯದಕ್ಕೆ ಸಂದೇಶ ನೀಡಿದರು
ಶಿಕ್ಷಕಿಯರಾದ ಕಾವೇರಿ ಪತ್ತಾರ ಹಾಗೂ ಮೈತ್ರಿ. ಪ್ರತಿಮಾ. ರತ್ನ ಇವರು ಈ ಕಾರ್ಯಕ್ರಮ ನಿರುಪಿಸಿದರು.
1.ರಿಂದ.5ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಹಾಗೂ ದ್ವೀತಿಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಗಣ್ಯರಿಂದ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ.ಕೊಪ್ಪಳ ಜಿಲ್ಲೆ ನಮ್ಮ ಕರ್ನಾಟಕ ಸೇನೆ, ಜಿಲ್ಲಾಧ್ಯಕ್ಷ ರಮೇಶ ಮೈನಹಳ್ಳಿ.ವಿನಾಯಕ ಶಿಕ್ಷಣ ಸಂಸ್ಥೆ ಕಾರ್ಯದರ್ಶಿಗಳಾದ ಮಂಜುಳಾ ಹನುಮಪ್ಪ ಹನಸಿ. ಎಚ್. ಎ. ನದಾಫ್. ಪ್ರೌಢ ಶಾಲೆ ನೌಕರರ ಸಂಘದ ತಾಲೂಕ ಅಧ್ಯಕ್ಷ ಹನಮಂತಪ್ಪ ಸಿ. ಸಿದ್ದರಡ್ಡಿ. ಶಿವಪ್ಪ ದಳವಾಯಿ.ಶಿವಕುಮಾರ ಹೊಂಬಳ. ಸತ್ಯನಾರಾಯಣ ಪತ್ತಾರ.ಅಣ್ಣಪ್ಪ ನರೇಗಲ್ಲ.ಈರಣ್ಣ ಇಟಗಿ.ಮುದಿಯಪ್ಪ ನಾಗರಡ್ಡಿ.ಮಂಜುಳಾ ತೊಪಲಕಟ್ಟಿ.ರೇಖಾ ಪಾರಿಗೊಂಡ. ಸೇರಿದಂತೆ. ಶಾಲೆ ಸಿಬ್ಬಂದಿ ವಿದ್ಯಾರ್ಥಿನಿ ವಿದ್ಯಾರ್ಥಿ ಪಾಲಕರು ಪೋಷಕರು ಯುವಕರು ಈ ಕಾರ್ಯಕ್ರಮದಲ್ಲಿ. ಉಪಸ್ಥಿತರಿದ್ದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
