ರಾಸಾಯನಮುಕ್ತ ಕೃಷಿ ಮಾಡಿ, ಭೂಮಿ ಉಳಿಸಿ: ಜಗದೀಶ ದಾಸಣ್ಣನವರ
ಹಾವೇರಿ: ಅತಿಯಾದ ರಾಸಾಯನಿಕ ಬಳಕೆಯಿಂದ ಭೂಮಿಯಲ್ಲಿರುವ ಸೂಕ್ಷ್ಮ ಜೀವಿಗಳು ನಾಶವಾಗಿ ರೈತನ ಆದಾಯವು ಕಡಿಮೆಯಾಗುತ್ತಿದೆ. ಆದ್ದರಿಂದ ರೈತರು ರಾಸಾಯನಿಕ ಮುಕ್ತ ಕೃಷಿ ಮಾಡಿ ಭೂಮಿ ಉಳಿಸಲು ಮುಂದಾಗಬೇಕೆಂದು ಪ್ರಗತಿಪರ ಕೃಷಿಕ ಜಗದೀಶ ದಾಸಣ್ಣನವರ ಹೇಳಿದರು.
ತಾಲೂಕಿನ ತಿಮ್ಮೆನಹಳ್ಳಿ ಗ್ರಾಮದ ಪ್ರಗತಿಪರ ಕೃಷಿಕ ಶ್ರೀ ಶಂಕ್ರಪ್ಪ ದಾಸಣ್ಣನವರ ಅವರ ರೇಷ್ಮೆ ತೋಟದಲ್ಲಿ ಕಚುಸಾಪ ಹಾಗೂ ವೇದಾಂತ ಸಂಸ್ಥೆ ಆಯೋಜಿಸಿದ್ದರೈತ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ರೈತರು ಭೂಮಿಗೆ ಕೊಟ್ಟಿಗೆ ಗೊಬ್ಬರ, ಕುರಿ -ಕೋಳಿ ಗೊಬ್ಬರ ಹಾಗೂ ಸಿಲಿಕಾನ್ ಮತ್ತು ಕಾರ್ಬನ್ ಇಂಗಾಲದಂತ ಉತ್ಪನ್ನಗಳನ್ನು ಉಪಯೋಗಿಸುವ ಮೂಲಕ ಸಾವಯವ ಕೃಷಿ ಮಾಡಿ ಉತ್ತಮ ಇಳುವರಿ ಪಡೆಯಬೇಕು ಎಂದರು.
ಕೃಷಿ ಸಲಹೆಗಾರ ಡಾ. ಗಂಗಯ್ಯ ಕುಲಕರ್ಣಿ ಮಾತನಾಡಿ ಗುಣಮಟ್ಟದ ಇಳುವರಿಗೆ ಶುದ್ಧ ನೀರು ಹಾಗೂ ಫಲವತ್ತಾದ ಮಣ್ಣು ಬೇಕು.ಜವಳು ಮತ್ತು ಸವಳಿನಿಂದ ಮುಕ್ತವಾದ ಭೂಮಿ ಬೇಕು. ಭೂಮಿಯಲ್ಲಿ ಅಡಕವಾಗಿರುವ ಅನುಪಯುಕ್ತ ಪದಾರ್ಥವನ್ನು ಹೊರ ಹಾಕಿ ಇಳುವರಿ ಹೆಚ್ಚಿಸುವ ಸಿಲಿಕಾನ್ ಅಂಶವಿರುವ ಅಗ್ರೋಸಿಲ್, ಕಾರ್ಬನ್ ಇಂಗಾಲ್ ಇರುವ ಕಾರ್ಬೋಸಿಲ್ ಉತ್ಪನ್ ಉಪಯೋಗಿಸಿ ಉತ್ತಮ ಪಸಲು ಪಡೆಯಬೇಕು ಎಂದ ಅವರು ರೇಷ್ಮೆ ಬೆಳೆ ನಿರ್ವಹಣೆ ಕುರಿತಾದ ಮಾಹಿತಿ ನೀಡಿದರು.
ವೇದಾಂತ ಉತ್ಪನ್ ಗಳಾದ ಆಗ್ರೋಸಿಲ್, ಕಾರ್ಬೋಸಿಲ್, ಕಾಂಬಿ ಕಿಟ್, ನೀಮ್ಉರ್ಜಾ, ನುಟ್ರಾಸಿಲ್ ಇತ್ಯಾದಿ ಉತ್ಪನ್ ಉಪಯೋಗಿಸಿ ಹುಲೂಸಾಗಿ ಬೆಳೆದ ರೇಷ್ಮೆ ತೋಟ ನೋಡಿ ಎಲ್ಲ ರೈತರು ಸಂತಸಪಟ್ಟರು.
ಬ್ಯಾಡಗಿ, ಕೆರೂಡಿ, ಕುಡ್ಲಾ, ಹೊಸರಿತ್ತಿ, ಚನ್ನೂರ, ಅಗಡಿ, ಕಲ್ಲೇದೇವರ, ಬರಡಿ, ಹನುಮನಹಳ್ಳಿ, ಕನವಳ್ಳಿ, ಬೂದಗಟ್ಟಿ ಇತ್ಯಾದಿ ಹಳ್ಳಿಗಳಿಂದ ರೇಷ್ಮೆ ರೈತರು ಪಾಲ್ಗೊಂಡಿದ್ದರು.
ಹಿರಿಯ ಪ್ರಗತಿಪರ ಕೃಷಿಕ ಶ್ರೀ ಶಂಕ್ರಪ್ಪ ದಾಸಣ್ಣನವರ ದಂಪತಿಗಳಿಗೆ ಹಾಗೂ ಔಷಧಿ ವಿತರಕರಾದ ಕೊಟ್ರಯ್ಯ ಹಾವೇರಿಮಠ ಹಾಗೂ ಉಮೇಶ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು.
What's Your Reaction?
Like
2
Dislike
0
Love
0
Funny
0
Angry
0
Sad
0
Wow
0
