ಗೌರವ ಡಾಕ್ಟರೇಟ್ ಪದವಿ ಭಾಜನರಾದ ಸದಾಶಿವ ಶ್ರೀಗಳು ಹಾಗೂ ಸತೀಶ್ ಕುಲಕರ್ಣಿ
ಹಾವೇರಿ: ಇತ್ತೀಚೆಗೆ ನಡೆದ ಹಾವೇರಿ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವ ಸಮಾರಂಭದಲ್ಲಿ ವಿಶ್ವ ವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿಗೆ ಭಾಜನರಾದ ಶ್ರೀ ಹುಕ್ಕೇರಿಮಠದ ಸದಾಶಿವ ಶ್ರೀಗಳು ಹಾಗೂ ಹಿರಿಯ ಸಾಹಿತಿಗಳಾದ ಶ್ರೀ ಸತೀಶ ಕುಲಕರ್ಣಿ ಅವರನ್ನು ಬುಧವಾರ ಅಭಿಮಾನಿಗಳು ಗೌರವಿಸಿ ಸನ್ಮಾನಿಸಿದರು.
ಇದೇ ಸಂದರ್ಭದಲ್ಲಿ ಕೃತಕ ಬುದ್ದಿಮತ್ತೆ (Artificial Inteligence) ವಿಷಯವಾಗಿ ಶಾಲೆಗಳಲ್ಲಿ ಜಾಗೃತಿ ಮೂಡಿಸಿದ ಕೋಣನತಂಬಿಗಿ ಗ್ರಾಮದ ಡಿಪ್ಲೋಮಾ ವಿದ್ಯಾರ್ಥಿ ಕು. ಶಾಂತಯ್ಯ ವೀ. ಕುಲಕರ್ಣಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ ವಿಜೇತರಾಗಿರುವುದಕ್ಕೆ ಶ್ರೀ ಹುಕ್ಕೇರಿಮಠದ ಸದಾಶಿವ ಶ್ರೀಗಳು ಹಾಗೂ ಹಿರಿಯ ಸಾಹಿತಿಗಳಾದ ಶ್ರೀ ಸತೀಶ ಕುಲಕರ್ಣಿ ಅವರು ಕು.ಶಾಂತಯ್ಯ ವೀ.ಕುಲಕರ್ಣಿ ಅವರನ್ನು ಸನ್ಮಾನಿಸಿ ಅಭಿನಂದಿಸಿದರಲ್ಲದೇ, ಸಮಾಜಮುಖಿಯಾಗಿ ಬೆಳೆದು ರಾಷ್ಟ್ರಮಟ್ಟದಲ್ಲಿ ಇನ್ನಷ್ಟು ಸಾಧನೆ ಮಾಡುವಂತಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ, ಹಾನಗಲ್ ತಾಲೂಕಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ವಿಜಯಕುಮಾರ ದೊಡ್ಡಮನಿ, ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಕಾರ್ಯದರ್ಶಿ ಗಂಗಯ್ಯ ಎಸ್ ಕುಲಕರ್ಣಿ, ವಕೀಲರಾದ ಉಮೇಶ ಗವಳಿ,ನಾರಾಯಣ ಕಾಳೆ, ಅಣ್ಣಪ್ಪ ಚಿಕ್ಕಣ್ಣನವರ, ಸುರೇಶ ನಾಗಣ್ಣನವರ, ಸಿಕಂದರ್ ಹಾನಗಲ್, ಬಸಯ್ಯ ಬಳ್ಳಾರಿಮಠ, ಕು. ಶಾಂತಯ್ಯ ವೀ.ಕುಲಕರ್ಣಿ, ಪ್ರಮೀಳಾ ಜಿ. ಕುಲಕರ್ಣಿ, ರೇಣುಕಾ ಕಹಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
