ಹಿರೇಮುರಾಳದಲ್ಲಿ ಸಂಭ್ರಮದ ಶ್ರೀ ಸಂಗಮೇಶ್ವರ ಮಹಾರಥೋತ್ಸವ
ಮುದ್ದೇಬಿಹಾಳ: ತಾಲ್ಲೂಕಿನ ಹಿರೇಮುರಾಳ ಗ್ರಾಮದಲ್ಲಿ ಪಾರ್ವತಿ ಸಮೇತ ಶ್ರೀ ಸಂಗಮೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಶ್ರೀ ಸಂಗಮೇಶ್ವರ ಮಹಾರಥೋತ್ಸವವು ಅತ್ಯಂತ ಸಡಗರ ಮತ್ತು ವಿಜೃಂಭಣೆಯಿಂದ ಜರುಗಿತು.
ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಜರುಗಿದ ರಥೋತ್ಸವಕ್ಕೆ ಕುಂಟೋಜಿ ಭಾವೈಕ್ಯತೆ ಹಿರೇಮಠದ ಷಟ್ಸ್ಥಲ ಬ್ರಹ್ಮ ಡಾ. ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಅವರು ಚಾಲನೆ ನೀಡಿದರು. ಸಾವಿರಾರು ಭಕ್ತಾದಿಗಳು ರಥಕ್ಕೆ ಉತ್ತತ್ತಿ, ಹಣ್ಣು-ಜವನ ಎಸೆದು ಭಕ್ತಿ ಸಮರ್ಪಿಸಿದರು.
ಜಾತ್ರಾ ಮಹೋತ್ಸವದ ನೇತೃತ್ವವನ್ನು ಗ್ರಾಮದ ಗಣ್ಯರಾದ ಬಸನಗೌಡ ಪಾಟೀಲ, ಸಂಗಣ್ಣ ಹಿರೇಗೌಡರ, ಪೀರಸಾಬ ಮುಲ್ಲಾ, ರಮೇಶ ಜೋಶಿ, ವೀರೇಶ ಬಾಗೇವಾಡಿ, ಕಾಶಿನಾಥ ನಾಗರಬೆಟ್ಟ, ಬಸವಂತ್ರಾಯ ನಾಗರತ್ತಿ, ಸಚಿನ ಇಂಗಳೇಶ್ವರ, ಮಲ್ಲನಗೌಡ ಬಿ. ಪಾಟೀಲ, ಶಿವು ಮುಳವಾಡ ಹಾಗೂ ಆದೇಶ ನಾಗರತ್ತಿ, ಮುಖಂಡರಾದ ಮಲ್ಲಿಕಾರ್ಜುನ ವಗ್ಗರ, ಶೇಖರ ಗುಡುಗುಂಟೆ, ಅಶೋಕ ಭೀ. ಭೋವಿ, ನಾರಾಯಣ ಗೊಂಬಿ ಸೇರಿದಂತೆ ಗ್ರಾಮದ ನೂರಾರು ಯುವಕರು, ಮಹಿಳೆಯರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳು ಪಾಲ್ಗೊಂಡು ಸಂಗಮೇಶ್ವರನ ಕೃಪೆಗೆ ಪಾತ್ರರಾದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
