ಮೆಕ್ಕೆಜೋಳ ಬಣವೆಗೆ ಆಕಸ್ಮಿಕ ಬೆಂಕಿ-70 ಕ್ವೀoಟಲ್ ಜೋಳ ಭಸ್ಮ

Apr 8, 2026 - 19:22
 0  1
ಮೆಕ್ಕೆಜೋಳ ಬಣವೆಗೆ ಆಕಸ್ಮಿಕ ಬೆಂಕಿ-70 ಕ್ವೀoಟಲ್ ಜೋಳ ಭಸ್ಮ

ಭಾಗ್ಯನಗರ: ಪರಗೋಡು ಗ್ರಾಮದ ರೈತ ಹಗಲು ರಾತ್ರಿ ಎನ್ನದೆ ಸುಮಾರು ನಾಲ್ಕು ತಿಂಗಳು ಕಾಲ ಪುಟ್ಟ ಮಗುವಿನಂತೆ ಹಾರೈಕೆ ಮಾಡಿ ಬೆಳೆದ ಮೆಕ್ಕೆಜೋಳ ಅಸನು ಮಾಡಲು ಬಂಡೆ ಮೇಲೆ ಬಣವೆ ಮಾಡಿದ್ದು ಆಕಸ್ಮಿಕವಾಗಿ ಬೆಂಕಿ ತಗುಲಿ ಸುಮಾರು 70 ಕ್ವೀoಟಲ್ ಮೆಕ್ಕೆಜೋಳ ಸುಟ್ಟು ಭಸ್ಮಮವಾಗಿರುವ ಘಟನೆ ಬಾಗೇಪಲ್ಲಿ ತಾಲೂಕಿನ ಪರಗೋಡು ಗ್ರಾಮದ ಜಮೀನಿನಲ್ಲಿ ನಡೆದಿದೆ.

ಮೆಕ್ಕೆಜೋಳ ಬಣವೆಗೆ ಆಕಸ್ಮಿಕ ಬೆಂಕಿ ಅವಘಡ ನಡೆದಿದ್ದು, ಸುಮಾರು ನಾಲ್ಕು ತಿಂಗಳು ಕಾಲ ಮಗುವಂತೆ ಆರೈಕೆ ಮಾಡಿದ ಬೇಳೆ ಈಗ ಬೆಂಕಿ ಪಲಾಗಿದ್ದು, ದಿಕ್ಕು ತೋಚದ ಪರಸ್ಥಿತಿಯಲ್ಲಿ ರೈತ ಕಂಗಾಲು, ಸುಮಾರು ಎರಡು ಲಕ್ಷ ರೂಪಾಯಿ ಬೆಲೆ ಬಾಳುವ ಮೆಕ್ಕೆಜೋದ ರಾಶಿ ಬೆಂಕಿಗೆ ಅಹುತಿಯಾಗಿದ್ದು ಅಕ್ಕ ಪಕ್ಕದವರು ಬೆಂಕಿ ನಂದಿಸಲು ಅರಸಾಹಸ ಪಟ್ಟರು ಸಹ ಯಾವುದೇ ಪ್ರಯೋಜನೆ ಇಲ್ಲದಂತಾಗಿದೆ.

ರೈತ ಗಂಗಾಧರ್ ಮಾತನಾಡಿ ನಾನು ಸಾಲ ಸುಲಾ ಮಾಡಿ ಮೆಕ್ಕೆಜೋಳ ಬೆಳೆ ಹಾಕಿದ್ದೆ ಈಗ ಎಲ್ಲಾ ಸುಟ್ಟು ಕಾರಕಲಗಿದೆ ಇನ್ನೇನು ಮೂರು ನಾಲ್ಕು ದಿನಗಳಲ್ಲಿ ಅಸನುಮಾಡಿ ಮಾರ್ಕೆಟ್ ಹೋಗಿ ಮಾರಾಟ ಮಾಡಬೇಕು ಅನ್ಕೊಂಡೆ ಆದರೆ ಈ ದುರಂತದಿಂತ ದಿಕ್ಕುತೋಚದಂತೆ ಆಗಿದೆ ಸುಮಾರು 2 ಲಕ್ಷ ರೂಪಾಯಿ ನಷ್ಟವಾಗಿದೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಹಾಗಾಗಿ ಸರ್ಕಾರದಿಂದ ಪರಿಹಾರ ಕೊಡಿಸುವಂತೆ ಅನ್ನದಾತ ತನ್ನ ಅಲಳನ್ನು ತೋಡಿಕೊಂಡಿದ್ದಾನೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳು ಆಕಸ್ಮಿಕ ಬೆಂಕಿ ಅವಘಡಕ್ಕೆ ಸಂಬಂಧಿಸಿದಂತೆ ವರದಿ ಸಿದ್ದಪಡಿಸಿ ಶೀಘ್ರ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.

ಈ ಸಂಧರ್ಭದಲ್ಲಿ ಕಂದಾಯ ನಿರೀಕ್ಷಕ ಪ್ರಶಾಂತ್,ಕಾರ್ಯದರ್ಶಿ ಮಂಜುನಾಥ್, ಪರಗೋಡು ಪಂಚಾಯಿತಿ ಗೆಂಗಿರೆಡ್ಡಿ, ಗೋವಿಂದರೆಡ್ಡಿ, ರೈತ ಗಂಗಾಧರ, ಸ್ವೆತಾ, ಸಿ.ಪರಗೋಡು ವೆಂಕಟೇಶ್,ವಿ ಎಸ್ ಎಸ್ ಎನ್ ನಿರ್ದೇಶಕ ನರೇಶ್ ರಾಯಲ್, ಪಿ.ಎನ್.ವೆಂಕಟೇಶ್, ಅಶೋಕ್, ಇದ್ದರು..

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456