ಮಹಿಳಾ ಸಬಲೀಕರಣವಾಗಲಿ: ಡಾ: ತುಕಾರಾಂ
ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಮಲ್ಲತಹಳ್ಳಿಯ ಗಾನಪಲ್ಲವಿ ಆಡಿಟೋರಿಯಂ ನಲ್ಲಿ ಅಕ್ಸೆಂಚರ್ ಭಾರತೀಯ ಉದ್ಯಮಶೀಲತೆ ಅಭಿವೃದ್ಧಿ ಸಂಸ್ಥೆ (EDII) ಇವರ *ಸ್ಕಿಲ್ ಟು ಸಕ್ಸೀಡ್* ಯೋಜನೆಯಡಿ 55 ಮಹಿಳೆಯರ ಕೈಕಸೂತಿ ತರಬೇತಿ ಪಡೆದವರಿಗೆ ಸಮಾರೋಪ ಸಮಾರಂಭ ಮತ್ತು ಪ್ರಮಾಣ ಪತ್ರ ವಿತರಿಸುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕನ್ಯಾಕುಮಾರಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಡಾ. ಎಚ್.ತುಕಾಕಾರಾಂ ಮಾತನಾಡಿ, ಕುಟುಂಬ ಮತ್ತು ಸಮಾಜದಲ್ಲಿ ಹೆಣ್ಣಿನ ಸ್ಥಾನ ಮಹತ್ವವಾದುದು. ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ಗಂಡಿನಂತೆ ಸಮಾನವಾಗಿ ಮಹಿಳೆ ದುಡಿಯುತ್ತಿದ್ದಾರೆ. ಒಂದು ಮಹಿಳೆ ಕಲಿತರೆ ಇಡೀ ಕುಟುಂಬ ಚೆನ್ನಾಗಿರುತ್ತದೆ. ಮಹಿಳೆ ಆರ್ಥಿಕವಾಗಿ ಸಬಲರಾಗಬೇಕು. ಈ ರೀತಿಯ ತರಬೇತಿಗಳು ಹೆಣ್ಣುಮಕ್ಕಳಿಗೆ ಆರ್ಥಿಕ ಸ್ವಾತಂತ್ರ್ಯ ಮತ್ತು ಭದ್ರತೆಯನ್ನು ಒದಗಿಸುತ್ತದೆ. ತರಬೇತಿಯಲ್ಲಿ ಕಲಿತ ವಿದ್ಯೆಯನ್ನು ಮುಂದುವರಿಸಿ ಆದಾಯದ ಮೂಲವನ್ನಾಗಿ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ಯೋಜನಾಧಿಕಾರಿ ಎಡ್ಮಂಡ್ ಭೂಪತಿಯವರು ಮಹಿಳೆಯ ಆರ್ಥಿಕ ಶಕ್ತಿಕರಣವು ಕುಟುಂಬ ಮತ್ತು ಸಮುದಾಯದ ದೀರ್ಘಕಾಲಿನ ಅಭಿವೃದ್ಧಿಗೆ ಅಗತ್ಯವೆಂದು ತಿಳಿಸಿದರು.
ಎಂ. ಗಿರಿಯಪ್ಪ, ವ್ಯವಸ್ಥಾಪಕರು ಕೆನರಾ ಬ್ಯಾಂಕ್ ಇವರು ಬ್ಯಾಂಕಿನಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣಪ್ಪ ಸಮುದಾಯ ವ್ಯವಹಾರಗಳ ಅಧಿಕಾರಿ, ಬೆಂಗಳೂರು ಪಶ್ಚಿಮ ಮತ್ತು ಶ್ರೀ ವೆಂಕಟೇಶಮೂರ್ತಿ ಸಮುದಾಯ ಸಂಘಟಕರು ಮತ್ತು ಶ್ರೀಮತಿ ಲಲಿತ,ರಮ್ಯ,ಬಸ್ತ್ಯಾಂವ್ ಸೋಜ ಉಪಸ್ಥಿತರಿದ್ದರು.
What's Your Reaction?
Like
2
Dislike
0
Love
0
Funny
0
Angry
0
Sad
0
Wow
0
