ಸತ್ಯ ಸಾಯಿ ಬಾಬಾ ಅವರ ಆರಾಧನಾ ಮಹೋತ್ಸವ ಮತ್ತು ಅನ್ನದಾನ

Apr 25, 2026 - 16:15
 0  2
ಸತ್ಯ ಸಾಯಿ ಬಾಬಾ ಅವರ ಆರಾಧನಾ ಮಹೋತ್ಸವ ಮತ್ತು ಅನ್ನದಾನ

     ಭಾಗ್ಯನಗರ: ಸತ್ಯ ಸಾಯಿ ಬಾಬಾ ಅವರ ಆರಾಧನಾ ಮಹೋತ್ಸವವನ್ನು ಪ್ರತಿವರ್ಷ ಏಪ್ರಿಲ್ 24 ರಂದು ಭಕ್ತಿ ಮತ್ತು ಕೃತಜ್ಞತೆಯಿಂದ ಆಚರಿಸಲಾಗುತ್ತದೆ. ಈ ದಿನದಂದು ಜಗತ್ತಿನಾದ್ಯಂತ ಭಕ್ತರು ವಿಶೇಷ ಭಜನೆ, ಸಾಯಿ ಆರಾಧನೆ, ಮತ್ತು ಸೇವಾ ಚಟುವಟಿಕೆಗಳನ್ನು ನಡೆಸುತ್ತಾರೆ. ಸತ್ಯ ಸಾಯಿ ಬಾಬಾ ಅವರ ಬೋಧನೆಗಳನ್ನು ಸ್ಮರಿಸುವುದು, ದಿವ್ಯ ಪ್ರೀತಿ ಮತ್ತು ಕರುಣೆಯನ್ನು ಆರಾಧಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ ಎಂದು ಶ್ರೀ ಸತ್ಯ ಸಾಯಿ ಸೇವಾ ಟ್ರಸ್ಟ್ ಅಧ್ಯಕ್ಷ ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ.

ಪಟ್ಟಣದ ಡಾ ಎಚ್ ಎನ್ ವೃತ್ತದಲ್ಲಿ ಶ್ರೀ ಸತ್ಯ ಸಾಯಿ ಬಾಬಾ ಅವರು ಭೌತಿಕ ದೇಹವನ್ನು ತ್ಯಜಿಸಿದ ದಿನದ ಅಂಗವಾಗಿ ಬಾಗೇಪಲ್ಲಿ ಶ್ರೀ ಸತ್ಯಸಾಯಿ ಸೇವಾ ಟ್ರಸ್ಟ್ ವತಿಯಿಂದ ಆಯೋಜನೆ ಮಾಡಲಾಗಿದ್ದ ಅನ್ನದಾನ  ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶ್ರೀ ಸತ್ಯ ಸಾಯಿ ಸೇವಾ ಟ್ರಸ್ಟ್ ಅಧ್ಯಕ್ಷ ಶ್ರೀನಿವಾಸರೆಡ್ಡಿ ಪ್ರತಿ ವರ್ಷ ಏಪ್ರಿಲ್ 24 ರಂದು, ಸತ್ಯ ಸಾಯಿ ಬಾಬಾ ಅವರಿಗೆ ಸಮರ್ಪಿತವಾದ ಭಕ್ತರು ಮತ್ತು ಕೇಂದ್ರಗಳು ಸತ್ಯ ಸಾಯಿ ಆರಾಧನಾ ದಿನವನ್ನು ಆಚರಿಸುತ್ತವೆ. ಈ ದಿನವು ಅವರು ಭೌತಿಕ ಕ್ಷೇತ್ರದಿಂದ ಆಧ್ಯಾತ್ಮಿಕಕ್ಕೆ ಕಾಲಿಟ್ಟ ವಾರ್ಷಿಕೋತ್ಸವವನ್ನು ಸೂಚಿಸುತ್ತದೆ, ಆದರೆ ಇದು ಶೋಕದ ದಿನವಲ್ಲ; ಬದಲಿಗೆ, ಇದು ಅವರ ಜೀವನ, ಬೋಧನೆಗಳು ಮತ್ತು ಲಕ್ಷಾಂತರ ಜನರ ಹೃದಯಗಳಲ್ಲಿ ಶಾಶ್ವತ ಉಪಸ್ಥಿತಿಯನ್ನು ಆಚರಿಸುವ ದಿನವಾಗಿದೆ ಹಾಗೂ ಸತ್ಯ ಸಾಯಿ ಬಾಬಾ ಆರಾಧನಾ ಮಹೋತ್ಸವವು ಪ್ರತಿವರ್ಷ ಏಪ್ರಿಲ್ 24 ರಂದು ನಡೆಯುತ್ತದೆ, ಇದು ಬಾಬಾರವರ ಭೌತಿಕ ನಿರ್ಗಮನದ 2011 ನೆನಪಿಗಾಗಿ ಆಚರಿಸಲಾಗುವ ವಿಶೇಷ ದಿನವಾಗಿದೆ. ಪ್ರಪಂಚದಾದ್ಯಂತದ ಭಕ್ತರು ಈ ದಿನದಂದು ಭಜನೆ, ನಾಮಸ್ಮರಣೆ, ಸೇವಾ ಕಾರ್ಯಗಳು ಮತ್ತು ಬಾಬಾರವರ ಬೋಧನೆಗಳನ್ನು ಸ್ಮರಿಸುವ ಮೂಲಕ ಅವರಿಗೆ ಪ್ರೀತಿ ಮತ್ತು ಕೃತಜ್ಞತೆಯನ್ನು ಸಲ್ಲಿಸಲಾಗುತ್ತಿದೆ ಎಂದರು.

ಈ ಸಂಧರ್ಭದಲ್ಲಿ ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಲಾಯರ್ ನಂಜುಂಡಪ್ಪ,ಸ್ವಯಂ ಸೇವಾ ಕರ್ತರಾದ ಶ್ರೀ ಸಾಯಿ ಮನೋಹರ್,ಸ್ವರ್ಣಗೌರಿ, ಸಾಯಿ ಪಾವನಿ, ಪ್ರಜಾಲ್, ಮಂಜುನಾಥ್, ವಿಜಯ್, ಕೃಷ್ಣಾ ರೆಡ್ಡಿ,ಸೇರಿದಂತೆ ಮತ್ತಿತರರು ಇದ್ದರು... ವರದಿ ಸುಬ್ಬು ಭಾಗ್ಯನಗರ

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456