ರಾಯರಿಗೆ ಗಂಧ ಲೇಪನ ಅಲಂಕಾರ ಮತ್ತು ಸುದರ್ಶನ ಹೋಮ
ಶ್ರೀಗಂಧಲೇಪನದ ಅಲಂಕಾರ
ಬೆಂಗಳೂರು : ಪವಮಾನಪುರ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಶ್ರೀಮಠದ ವಿಚಾರಣಾಕರ್ತರಾದ ಹಾವೇರಿ ಶ್ರೀ ಗಿರಿರಾಜಾಚಾರ್ ಮತ್ತು ನೂತನ ವ್ಯವಸ್ಥಾಪಕರಾದ ಶ್ರೀ ನಂದಕಿಶೋರಾಚಾರ್ಯರ ನೇತೃತ್ವದಲ್ಲಿ "ಅಕ್ಷಯ ತೃತೀಯ" ಪ್ರಯುಕ್ತ ಬೆಳಗ್ಗೆ 7:30ಕ್ಕೆ ಶ್ರೀ ಶ್ರೀನಿವಾಸದೇವರ ವಿಗ್ರಹಕ್ಕೂ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಅಷ್ಟೋತ್ತರ ಸಹಿತ ಫಲ ಪಂಚಾಮೃತ ಅಭಿಷೇಕ ನೆರವೇರಿತು. ನಂತರ ಅರ್ಚಕರಾದ ಇಂದಿರೇಶ ಆಚಾರ್ ಮತ್ತು ಶ್ರೀನಿವಾಸ್ ಆಚಾರ್ಯರಿಂದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ವಿಶೇಷವಾಗಿ ಸಂಪೂರ್ಣ ಶ್ರೀಗಂಧ ಲೇಪನದ ಅಲಂಕಾರದೊಂದಿಗೆ ಮಹಾಮಂಗಳಾರತಿಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಜಾನಕಿ ಭಜನಾ ಮಂಡಳಿಯೊಂದಿಗೆ ಶ್ರೀಹರಿ ಭಜನೆ, ಮಹಾರಥೋತ್ಸವ ಮತ್ತು ಕನಕಾಭಿಷೇಕವು ನೆರವೇರಿತು. ಈ ಸಂದರ್ಭದಲ್ಲಿ ಸೇವಾಕರ್ತೃಗಳು, ಶ್ರೀಮಠದ ಶಿಷ್ಯರು, ಭಕ್ತರು, ಶ್ರೀಮಠದ ಸಿಬ್ಬಂದಿಗಳು ಸ್ವಯಂ ಸೇವಕರು ಭಾಗವಹಿಸಿ ತೀರ್ಥ ಫಲಮಂತ್ರಾಕ್ಷತೆ ಪ್ರಸಾದವನ್ನು ಸ್ವೀಕರಿಸಿ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನ ದರ್ಶನ ಪಡೆದು ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
