ತಾಲೂಕಿಗೆ ಕೀರ್ತಿ ತಂದ ಸಾಧಕ ವಿದ್ಯಾರ್ಥಿಗಳಿಗೆ ಶಾಸಕರಿಂದ ಸನ್ಮಾನ-ಪೋಷಕರಲ್ಲಿ ಸಂತಸ
ಭಾಗ್ಯನಗರ: 2025-26ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ 6 ರ್ಯoಕ್ ಗಳನ್ನು ಪಡೆಯುವ ಮೂಲಕ ತಾಲೂಕಿಗೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಸುಬ್ಬಾರೆಡ್ಡಿ ಅವರು ಸನ್ಮಾನಿಸಿ ಗೌರವಿಸಿ ಶುಭಾಶಯಗಳು ತಿಳಿಸಿದ್ದಾರೆ.
ಪಟ್ಟಣದ ಬಿಜಿಎಸ್ ಪಬ್ಲಿಕ್ ಶಾಲೆ ವಿದ್ಯಾರ್ಥಿನಿ ಯಶಸ್ವಿನಿ. ಆರ್ 622 ಅಂಕ, ಸತ್ಯಸಾಯಿ ವಿದ್ಯಾನಿಕೇತನ್ ಶಾಲೆ ತೀಮಾಕಲಪಲ್ಲಿ ವಿದ್ಯಾರ್ಥಿನಿ ಆರ್.ಯಾಮಿನಿ. 622 ಅಂಕ ಯಂಗ್ ಇಂಡಿಯಾ ಶಾಲೆ ವಿದ್ಯಾರ್ಥಿನಿ ಸಿ. ಆರ್.ಐಶ್ವರ್ಯ 619 ಅಂಕ, ಬಿಜಿಎಸ್ ಪಬ್ಲಿಕ್ ಶಾಲೆ ವಿದ್ಯಾರ್ಥಿನಿ ಆರ್.ಶ್ರೀನಿಧಿ.619 ಅಂಕ, ಆದರ್ಶ ವಿದ್ಯಾಲಯ ದೇವರಗುಡಿಪಲ್ಲಿ ವಿದ್ಯಾರ್ಥಿನಿ ಕೆ. ವಿ.ಕವನ 610 ಅಂಕ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಮಿಟ್ಟೇಮರಿ ಎಸ್. ಮೇನಕಾ 610 ಅಂಕ ಪಡೆದಿದ್ದಾರೆ.
ಈ ಉತ್ತಮ ಅಂಕಗಳು ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ, ತಹಶೀಲ್ದಾರ್ ಮನೀಷಾ ಮಹೇಶ್ ಪತ್ರಿ, ಕಾರ್ಯ ನಿರ್ವಹಣಾಧಿಕಾರಿ ಜಿ.ವಿ. ರಮೇಶ್, ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ವೆಂಕಟೇಶಪ್ಪ ಗೌರವಿಸಿದರು.
ಈ ಸಂಧರ್ಭದಲ್ಲಿ ತಾಲ್ಲೂಕು ಶಿಕ್ಷಣ ಸಮನ್ವಯಾಧಿಕಾರಿ ಆರ್. ವೆಂಕಟರಾಮ್, ಕ್ಷೇತ್ರ ಪರಿವಿಕ್ಷಣಾಧಿಕಾರಿ ರಂಗನಾಥ,ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್. ಹನುಮಂತರೆಡ್ಡಿ, ಸತ್ಯಸಾಯಿ ವಿದ್ಯಾಸಂಸ್ಥೆ ಸಂಸ್ಥಾಪಕ ವೈ. ಶ್ರೀನಿವಾಸ್ ರೆಡ್ಡಿ, ಶಾಂತಿ ನಿಕೇತನ್ ಶಾಲೆ ಶಿಕ್ಷಕ ಡಿ.ಎನ್. ರಘುನಾಥ್, ಎಸ್ಎಸ್ಎಲ್ಸಿ ಪರೀಕ್ಷೆಯ ನೋಡಲ್ ಅಧಿಕಾರಿ ಲಕ್ಷ್ಮಿನರಸಿಂಹಪ್ಪ,ಶಾಂತಿನಿ ಕೇತನ್ ವ್ಯವಸ್ಥಾಪಕ ಡಿ. ಎನ್. ರಘು,ಶಿವರಾಮಡ್ಡಿ, ಮಂಜುನಾಥ್, ಸಾಯಿ ಮನೋಹರ್ ಸೇರಿದಂತೆ ವಿದ್ಯಾರ್ಥಿಗಳು ಮತ್ತು ಪೋಷಕರು ಇದ್ದರು... ವರದಿ ಸುಬ್ಬು ಭಾಗ್ಯನಗರ
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
