ಅತ್ಯಾಪ್ತ ಗೆಳತಿ ಜಿ.ಎಸ್.ಸುಶೀಲಾದೇವಿ ಆರ್ ರಾವ್ ಬರೆದಿರುವ ಕವನ

Jan 12, 2026 - 22:19
 0  13
ಅತ್ಯಾಪ್ತ ಗೆಳತಿ ಜಿ.ಎಸ್.ಸುಶೀಲಾದೇವಿ ಆರ್ ರಾವ್ ಬರೆದಿರುವ ಕವನ

ಅಗಲಿದ ಹಿರಿಯ ಸಾಹಿತಿ ಅರುಂಧತಿ ರಮೇಶ್ ಅವರ ಕುರಿತಾಗಿ ಅವರ ಅತ್ಯಾಪ್ತ ಗೆಳತಿ ಜಿ.ಎಸ್.ಸುಶೀಲಾದೇವಿ ಆರ್ ರಾವ್ ಬರೆದಿರುವ ಕವನ:

ಅರುಂಧತಿ ರಮೇಶ್

ಈಕೆ ಅಮಿತ ಜೀವನೋತ್ಸಾಹಿ 

ಒಂದಿನಿಸೂ ಇಲ್ಲ ಮುನಿಸು

ಸದಾ ಹಸನ್ಮುಖಿ ಸ್ನೇಹಜೀವಿ

ಹಿರಿಯರಿಗೆ ತಲೆಬಾಗಿ ಕಿರಿಯರನು ಎದೆಗವಿಚಿ

ಸದಾ ಪ್ರೋತ್ಸಾಹಿಸುವ ಮಮತಾಮಯಿ

ಎತ್ತರ ನಾಲ್ಕೇ ಅಡಿ ಕಾವ್ಯದಲಿ

ಬೆಳೆದಿದ್ದೋ ಎತ್ತರೆತ್ತರಕೆ

ಕಡೆಂಗೋಡ್ಲು, ಬೇಂದ್ರೆ, ಅಡಿಗ,

ಮಹಾಲಕ್ಷ್ಮಿ, ಅತ್ತಿಮಬ್ಬೆ

ಸುಶೀಲಾ ಆರ್ ಶೆಟ್ಟಿ ಕಾವ್ಯಪ್ರಶಸ್ತಿ

ಪಡೆದಿದ್ದರೂ ಇಲ್ಲ ಅಹಂಕಾರ

ತಾಲ್ಲೂಕು ಕಸಾಪ ಅಧ್ಯಕ್ಷೆಯಾಗಿ

ಅಧಿಕಾರ ನಿಭಾಯಿಸಿದ್ದರೂ

ಅತ್ಯಂತ ವಿನಯಶೀಲೆ

ಸಾಹಿತ್ಯ ಕಾರ್ಯಕ್ರಮಗಳ

ಹೊಣೆಯ ಹೊತ್ತಾಕೆ ಅದಕಾಗಿ

ಹಗಲಿರುಳೂ ಶ್ರಮಿಸಿದಾಕೆ

ವೇದಿಕೆಯನೇರಿ ಕನ್ನಡಕದ

ಮರೆಯಲ್ಲೇ ಕಣ್ಣುಮುಚ್ಚಿ

ತೂಕಡಿಸಿದರೂ ತಟ್ಟನೆದ್ದು

ಭಾಷಣವ ಬಿಗಿದಾಕೆ

ರಾಜಧಾನಿ ಸೇರಿದರೂ ಸದಾ

ಪಂಪ ಬನವಾಸಿಗೆ ಹಂಬಲಿಸಿದಂತೆ

ಹುಟ್ಟೂರಿಗಾಗಿ ಹಂಬಲಿಸಿದಾಕೆ 

ಮನಸ್ಸನ್ನೆಲ್ಲಾ ಇಲ್ಲೇ ಇಟ್ಟು ಕೊರಗಿದಾಕೆ

ಕಾವ್ಯದಾಗಸದಲ್ಲಿ ತಲೆಯೆತ್ತಿ ನೋಡಿ 

ಅದೋ ಅಲ್ಲಿ ಕಾಣುತ್ತಿದೆ

ನಕ್ಷತ್ರ ಅರುಂಧತಿ.

ಜಿ.ಎಸ್.ಸುಶೀಲಾದೇವಿ ಆರ್ ರಾವ್

ದಾವಣಗೆರೆ

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456