ಸಾರ್ವಜನಿಕ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಿ ಪರಿಸರ ಉಳಿಸಿ: ನಗರಸಭೆ ಸದಸ್ಯ ಛತ್ರಪ್ಪ

Nov 10, 2025 - 16:16
 0  17
ಸಾರ್ವಜನಿಕ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಿ ಪರಿಸರ ಉಳಿಸಿ: ನಗರಸಭೆ ಸದಸ್ಯ ಛತ್ರಪ್ಪ

  ಸಿಂಧನೂರು: ಸಾರ್ವಜನಿಕ ಪ್ರದೇಶಗಳು ನಮ್ಮದೇ ಅಸ್ತಿಗಳಾಗಿದ್ದು ಅವುಗಳನ್ನು ಸ್ವಚ್ಛತೆಯಿಂದ ಕಾಪಾಡಿಕೊಂಡು ಹೋಗುವುದು ಪ್ರತಿಯೊಬ್ಬರ ಕರ್ತವ್ಯ ಎಂದು 13 ನೇ ವಾರ್ಡ್ ನಗರಸಭೆ ಸದಸ್ಯ ಛತ್ರಪ್ಪ ಅವರು ಹೇಳಿದರು.

ನಗರದ ನಗರಸಭೆ ಸಮುದಾಯ ಸಂಚಾಲಕರು ಹಾಗೂ ವನಸಿರಿ ಫೌಂಡೇಶನ್ (ರಿ)ರಾಯಚೂರು
ವತಿಯಿಂದ ಸಿಂಧನೂರಿನ ಇಲಾಹಿ ಸರ್ಕಲ್ ಟಿಪ್ಪುಸುಲ್ತಾನ ರಸ್ತೆ ಇಂದಿರಾನಗರ (ಬಪ್ಪುರ ರೋಡ್) ವಾರ್ಡ್ no 12 ಮತ್ತು 13 ವಾರ್ಡ್ ನಲ್ಲಿ ಕಸ ಹಾಕಿದ ಜಾಗದಲ್ಲಿ ಸ್ವಚ್ಛಗೊಳಿಸಿ, ರಂಗೋಲಿ ಹಾಕಿ,ಅದೇ ಸ್ಥಳದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಸಸಿ ನೆಟ್ಟು ನಿರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಸಾರ್ವಜನಿಕರು ವಾರದಲ್ಲಿ ಒಂದು ದಿನವನ್ನು ಸ್ವಚ್ಛತೆಗೆ ಆದ್ಯತೆ ನೀಡಬೇಕು.ಪ್ರತಿ ವಾರವು ಒಂದೊಂದು ಪ್ರದೇಶವನ್ನು ಆಯ್ಕೆ ಮಾಡಿಕೊಂಡು ಅಲ್ಲಿ ಸ್ವಚ್ಛತೆ ಮಾಡಿ ಸಸಿ ನೆಟ್ಟು ಪರಿಸರ ಜಾಗೃತಿ ಮೂಡಿಸುವ ವನಸಿರಿ ಪೌಂಡೇಷನ್ ಕಾರ್ಯದ ಜೊತೆಗೆ ನಗರದ ವಿವಿಧ ಸಂಘ ಸಂಸ್ಥೆಗಳು ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ: ವನಸಿರಿ ಅಮರೇಗೌಡ ಮಲ್ಲಾಪುರ ಕರ್ನಾಟಕ ಸರಕಾರ ರಾಜ್ಯ ಪ್ರಶಸ್ತಿ ಪುರಸ್ಕೃತರು,   12 ವಾರ್ಡ್ ನಗರಸಭೆ ಸದಸ್ಯರಾದ ಏಲಿಯಷ್,ಉಮೇಶ ಗೌಡ ಹರಳಹಳ್ಳಿ, ಆದೇಶ ಶಿಕ್ಷಕರು,ಹುಸೇನ್ ಬಾಷಾ, ಮಲ್ಲಿಕಾರ್ಜುನ್ ಕುನಟಗಿ,ಮುದುಕಪ್ಪ ಹೊಸಳ್ಳಿ ಕ್ಯಾಂಪ್,ರಘು ಸಿಂಧನೂರು, ನಗರಸಭೆ ಸಮುದಾಯ ಸಂಚಾಲಕರಾದ ಅಕ್ಷತಾ ಹಿರೇಮಠ, ಗೌರಮ್ಮ,ಬಸಮ್ಮ ಹಿರೇಮಠ, ಶಕುಂತಲಾ ಹಾಗೂ ನಗರಸಭೆ,ಮತ್ತು ವನಸಿರಿ ಪೌಂಡೇಷನ್ ಸದಸ್ಯರು, ಮುಂತಾದ ಪರಿಸರ ಪ್ರೇಮಿಗಳಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456