ಕನ್ನಡ ಭಾಷೆಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಕಮಲ್ ಹಾಸನ್ ವಿರುದ್ಧ ಪ್ರತಿಭಟನೆ ಧರಣಿ
ಕೋಲಾರ: ಇತ್ತೀಚೆಗೆ ಚಲನಚಿತ್ರ ನಟ ತಮಿಳು ಭಾಷೆಗೆ ಕಮಲ ಹಾಸನ್ ಕನ್ನಡದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಇದನ್ನು ಖಂಡಿಸಿ ರಾಜ್ಯಾದ್ಯಂತ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಏಕ ಕಾಲದಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿತ್ತು.
ಕೋಲಾರದ ರಾಜಕುಮಾರ್ ಸರ್ಕಲ್ ನಲ್ಲಿ ಕರವೇ ಜಿಲ್ಲಾ ಅಧ್ಯಕ್ಷ ಮೇಡಿಹಾಳ ರಾಘವೇಂದ್ರ ನೇತೃತ್ವದಲ್ಲಿ ಕಮಲ್ ಹಾಸನ್ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ನಂತರ ಮಾತನಾಡಿದ ರಾಘವೇಂದ್ರರವರು. ತಮಿಳುನಾಡು ಕಮಲಹಾಸನ್ ಕನ್ನಡಿಗರನ್ನು ಕ್ಷಮೆಯಾಚಿಸಬೇಕು. ಕನ್ನಡ ಭಾಷೆ ಯಾವ ಭಾಷೆಯಿಂದ ಹುಟ್ಟಿದ್ದು ಅಲ್ಲ ಇದು ದ್ರಾವಿಡ ಭಾಷೆ. ತೆಲುಗು. ತಮಿಳು. ಕನ್ನಡ. ಇದನ್ನು ಅರಿತುಕೊಂಡು ಮಾತನಾಡಬೇಕು. ನಿಮ್ಮ ತಮಿಳು ಭಾಷೆಗಳನ್ನು ಮೆಚ್ಚಿಸುವುದಕ್ಕೆ. ಸುಮ್ಮನೆ ಕನ್ನಡಿಗನ್ನು ಕೆಣಕಿದರೆ. ಉಷರ್ ಎಂದು ಎಚ್ಚರಿಸಿದರು. 5ನೇ ತಾರೀಕು ತೆರೆಕಾನಲ್ಲಿರುವ ನಿಮ್ಮ ಚಲನಚಿತ್ರವನ್ನು ತೆರೆ ಕಾಣದ ಬಿಡುವುದಿಲ್ಲ . ನೀವು ನಮ್ಮ ಕನ್ನಡಿಗರನ್ನು ಕ್ಷಮೆಯಾಚಿಸಬೇಕು. ಕ್ಷಮೆ ಯಾಚಿಸಿದ ಪಕ್ಷದಲ್ಲಿ ಐದನೇ ತಾರೀಕು ನಿಮ್ಮ ಚಲನಚಿತ್ರವನ್ನು ಚಿತ್ರಮಂದಿರದಲ್ಲಿ ನುಗ್ಗಿ ನಿಲ್ಲಿಸುತ್ತೇವೆ ಎಂದು ಎಚ್ಚರಿಸಿದರು. ಕನ್ನಡದ ಬಗ್ಗೆ ಮಾತನಾಡುವಾಗ ಪ್ರತಿಯೊಬ್ಬರು. ಸಿನಿ ಚಿತ್ರರಂಗದಲ್ಲಿರುವವರು. ಎಚ್ಚರಿಕೆಯಿಂದ ಮಾತನಾಡಬೇಕು. ನಾನು ಹೀರೋ ಎಂದು ಅಹಂಕಾರದಿಂದ ಮಾತನಾಡಬಾರದು ಎಂದು ಎಲ್ಲಾ ಚಿತ್ರರಂಗದ ಕಲಾವಿದರು ಎಚ್ಚರಿಕೆ ಇಂದ ಇರಬೇಕು ಎಂದರು. ಈ ಹೋರಾಟ ಈಗ ಪ್ರಾರಂಭ ಮಾತ್ರ ಮುಂದಿನ ದಿನಗಳಲ್ಲಿ ಇನ್ನೂ ಉಗ್ರವಾಗಿ ಹೋರಾಟ ಮಾಡುತ್ತೇವೆ. ಜೈಲಿಗೆ ಹೋಗಲು ನಾವು ಸಿದ್ಧ ಕರ್ನಾಟಕ ರಕ್ಷಣಾ ವೇದಿಕೆ ಎಂದರೆ ಏನು ಎಂದು ಎಲ್ಲರೂ ತಿಳಿದಿದೆ. ಎಂದು ಈ ಸಂದರ್ಭದಲ್ಲಿ ಕರವೇ ತಾಲೂಕು ಮಟ್ಟದ ಅಧ್ಯಕ್ಷರು. ಪದಾಧಿಕಾರಿಗಳು. ಸದಸ್ಯರುಗಳು. ಕಾರ್ಯಕರ್ತರು ಭಾಗವಹಿಸಿದ್ದರು
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
