ಜುಮ್ಕಾನ ಫುಟ್ಬಾಲ್ ಗ್ರೌಂಡ್ ಕ್ರೀಡೆಗೆ ಚಟುವಟಿಕೆಗೆ ಬಳಸಿ.: ಎಂ. ಮಲ್ಲೇಶ್ ಬಾಬು ಕರೆ
ಕೆಜಿಎಫ್: ನಗರದ ಇತಿಹಾಸ ಪ್ರಸಿದ್ಧ ಜುಮ್ಖಾನ ಫುಟ್ಬಾಲ್ ಗ್ರೌಂಡ್ ಬಿಜಿಎಂಎಲ್ ಕಾರ್ಖಾನೆ ಮುಚ್ಚಿದ ನಂತರ ಗ್ರೌಂಡನ್ನು ಉಪಯೋಗ ಮಾಡದಂತೆ ಬೀಗ ಹಾಕಿದ್ದರು.
ನಂತರ ಸಾರ್ವಜನಿಕರ ದೂರಿನ ಮೇರೆಗೆ ಸಂಸದರು .ಎಂ.ಮಲ್ಲೇಶ್ ಬಾಬು ಕಾಳಜಿ ವಹಿಸಿಕೊಂಡು ಜುಮ್ಕಾನ ಮೈದಾನವನ್ನು ಸ್ವಚ್ಛತೆಮಾಡುವಂತೆ ಬಿಜಿಎಂಎಲ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇದರ ಪ್ರಯುಕ್ತ ಮೈದಾನವನ್ನು ವೀಕ್ಷಣೆ ಮಾಡಿದ. ಎಂ . ಮಲ್ಲೇಶ್ ಬಾಬು ಮಾತನಾಡಿ ಮೈದಾನಕ್ಕೆ ಬೇಕಾಗಿರುವ ಮೂಲಸೌಕರ್ಯಗಳನ್ನು ಒದಗಿಸಿ ಕೊಟ್ಟು ಯುವ ಜನತೆಗೆ ಕ್ರೀಡಾ ತರಬೇತಿಗಳನ್ನು ನೀಡುವುದಾಗಿತಿಳಿಸಿದರು.
ನನ್ನ ಅನುದಾನದಲ್ಲಿ ಎಷ್ಟುಹಣ ಬೇಕು ಅಷ್ಟು ನೀಡುವುದಾಗಿ ತಿಳಿಸಿದರು.ಬಿಜಿಎಂಎಲ್ ಕಾಲೋನಿಗಳಲ್ಲಿ ಬಡ ಕಾರ್ಮಿಕರು ಚಿಕ್ಕದಾಗಿ ಮನೆಗಳನ್ನು ಕೆಡವಿ ನಿರ್ಮಿಸಿದರೆ ಇಲ್ಲಿರುವ ಸಿಎಸ್ಓ ಅವರ ತಂಡ ಕಾರ್ಮಿಕರಿಗೆ ತೊಂದರೆ ನೀಡುತ್ತಿದ್ದಾರೆ.
ಇಂದು ಮಾಧ್ಯಮದವರು ಪ್ರಶ್ನಿಸಿದರು.
ಅದಕ್ಕೆ ಅವರು ಬಿಜಿಎಂಎಲ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಎಚ್ಚರಿಕೆ ನೀಡಿದರು.
ಅಧಿಕಾರಿಗಳು ನೀವು ಬಿಜಿಎಂಎಲ್ .ಪ್ರದೇಶದಲ್ಲಿ ಅಕ್ರಮವಾಗಿ ಹಲವಾರು ಎಕರೆ ಪ್ರದೇಶಗಳನ್ನು ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡು ವ್ಯವಸಾಯ ಮಾಡುತ್ತಿದ್ದಾರೆ.ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಸೂಚನೆನೀಡಿದರು.
ಬಿಜಿಎಂಎಲ್ ಸಮಸ್ಯೆಯನ್ನು ಕಾರ್ಮಿಕ ಸಂಘಟನೆಗಳು ಒಂದಾಗಿ ಬಂದಾಗ ಅದಕ್ಕೆ ಪರಿಹಾರ ಸಿಗುತ್ತದೆ.ಇಲ್ಲದಿದ್ದರೆ ಯತಸ್ಥಿತಿ ಇರುತ್ತದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಕೆಜಿಎಫ್ ಸೇವ್ ಕಮಿಟಿ ಅಧ್ಯಕ್ಷರು, ವಕೀಲರು, ಜ್ಯೋತಿಬಾಸು .ಜೆಡಿಎಸ್ ಮುಖಂಡರು .ಕೆ . ರಾಜೇಂದ್ರನ್ ನಗರಸಭೆ ಮಾಜಿ ಅಧ್ಯಕ್ಷರು, ದಯಾಳನ್ .ಪ್ರಭು ರಾಮ್ ಮೊದಲಾದವರು ಇದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
