ನಗರ ಪೊಲೀಸ್ ಠಾಣೆಯ ಪಿಎಸ್ಐ ಮಲ್ಲಪ್ಪನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ
ಚನ್ನರಾಯಪಟ್ಟಣ: ನಗರ ಪೊಲೀಸ್ ಠಾಣೆಯ ಪಿಎಸ್ಐ ಮಲ್ಲಪ್ಪನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲು ಮುಂದಾದ ದಲಿತಪರ ಸಂಘಟನೆಗಳ ಮುಖಂಡರುಗಳನ್ನು ಮನವಲಿಸುವಲ್ಲಿ ಸಫಲರಾದ ಡಿವೈಎಸ್ಪಿ ಎನ್ ಕುಮಾರ್ ಹಾಗೂ ಪೋಲಿಸ್ ವೃತ್ತ ನಿರೀಕ್ಷಕರಾದ ರಘುಪತಿ ಯಶಸ್ವಿಯಾದರು. ಪತ್ರಕರ್ತರೊಂದಿಗೆ ಡಿವೈಎಸ್ಪಿ ಕುಮಾರ್ ಮಾತನಾಡಿ ಮುಂದಿನ ಮೂರು ದಿನಗಳ ಒಳಗಾಗಿ ನಗರ ಠಾಣೆಯ ಪಿಎಸ್ಐ ಮಲ್ಲಪ್ಪನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ವರದಿ ನೀಡಲಾಗುವುದು ಎಂದರು.
ದಲಿತ ಮುಖಂಡ ಕೆ ಎನ್ ನಾಗೇಶ್ ಮಾತನಾಡಿ ಪೊಲೀಸ್ ಇಲಾಖೆಯ ಮೇಲಾಧಿಕಾರಿಗಳು ಎರಡು ಮೂರು ದಿನದ ಒಳಗಾಗಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಈ ದಿನದ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಗಿದೆ ಎಂದರು.
ಭೀಮ್ ಆರ್ಮಿಯ ಸಂಘಟನೆಯ ಜಿಲ್ಲಾಧ್ಯಕ್ಷ ಅಡಿಕೆ ಹೊಸೂರ್ ಪ್ರಸನ್ನ ಮಾತನಾಡಿ ಡಿವೈಎಸ್ಪಿ ಕುಮಾರ್ ಹಾಗೂ ಪೊಲೀಸ್ ವೃತ್ತ ನಿರೀಕ್ಷಕರಾದ ರಘುಪತಿ ಅವರ ಮನವಿಯ ಮೇರೆಗೆ ಈ ದಿನ ನಡೆಸಲು ಉದ್ದೇಶಿಸಿದ ಪ್ರತಿಭಟನೆಯನ್ನು ಹಿಂತೆಗೆದುಕೊಂಡಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಕೂರದಹಳ್ಳಿ ಶಿವಶಂಕರ್ ಕುಂಟೆ, ಟಿಎಪಿಸಿಎಂಎಸ್ ನ ನಿರ್ದೇಶಕರಾದ ಕೆ ಆರ್ ರವಿಕುಮಾರ್, ಮಾಜಿ ಪುರಸಭಾ ಸದಸ್ಯರಾದ ಪರಶುರಾಮ್, ಭೀಮ್ ಆರ್ಮಿ ಸಂಘಟನೆಯ ಜಿಲ್ಲಾಧ್ಯಕ್ಷ ಹೂಸೂರು ಪ್ರಸನ್ನ, ಉಪಾಧ್ಯಕ್ಷರಾದ ನಾಗಸಮುದ್ರಬಾಲು, ಜಿ ಕೆ ಮಂಜುನಾಥ್, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾದ ಕೆಎನ್ ನಾಗೇಶ್, ಬಿ ಎಸ್ ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಸಿ ಜಿ ಸೋಮಶೇಖರ್, ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕರಾದ ಕುರುವಂಕ ಮಂಜು, ಮಾದಿಹಳ್ಳಿ ಮಂಜು, ದಲಿತ ಮುಖಂಡರುಗಳಾದ ಕೆ ವಿ ಸತೀಶ್, ಲಕ್ಷ್ಮಣ್, ರಮೇಶ್, ಹರಿಪ್ರಸಾದ್, ಗೋವಿಂದಸ್ವಾಮಿ, ಸ್ವಾಗತಹಳ್ಳಿ ಮನೋಹರ, ನವಿಲೇ ಹೊಸೂರ್ ಸಂತೋಷ್, ಸೇರಿದಂತೆ ಇತರರು ಹಾಜರಿದ್ದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
