ನಿವೃತ್ತ ಪೊಲೀಸ್ ಅಧಿಕಾರಿಗಳಿಗೆ ಹಾರ್ದಿಕ ಬಿಳ್ಕೋಡುಗೆ
ಕೆಜಿಎಫ್,ಮೇ.೩೧: ಕೆಜಿಎಫ್ ನಗರದ ಜಿಲ್ಲಾ ಪೊಲೀಸ್ ಕಛೇರಿಯ ಸಭಾಂಗಣದಲ್ಲಿ ಮೇ. ೩೧ರಂದು ಸರ್ಕಾರಿ ಸೇವೆಯಿಂದ ವಯೋ ನಿವೃತ್ತಿ ಹೊಂದಿದ ಎಎಸ್ಐ ಗಳಾದ ಬಿ.ಕೃಷ್ಣಪ್ಪ, ಎಂ.ನಾಗರಾಜ್, ಕೆ.ವಿ.ರಾಧಾಕೃಷ್ಣ, ಲೋಗನಾಥಯ್ಯ ಅವರುಗಳಿಗೆ ಹಾರ್ದಿಕ ಬಿಳ್ಕೋಡುಗೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸೇವೆಯಲ್ಲಿರುವಾಗ ಪ್ರತಿಯೊಬ್ಬ ಸರ್ಕಾರಿ ನೌಕರರು ಉತ್ತಮವಾದ ಸೇವೆಯನ್ನು ಸಲ್ಲಿಸುವ ಮೂಲಕ, ಅವರ ಸೇವೆಯು ಮುಂದಿನ ಜನಾಂಗಕ್ಕೆ ಆದರ್ಶವಾಗುವ ಮೂಲಕ ಜನಸಾಮಾನ್ಯರ ಮನಗೆಲ್ಲುವ ಕಾರ್ಯ ಮಾಡಬೇಕೆಂದು ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ಅವರು ಕರೆ ನೀಡಿದರು.
ನಿವೃತ್ತ ಅಧಿಕಾರಿಗಳು ಡಿಎಆರ್ನ ಎಆರ್ಎಸ್ಐ ಬಿ.ಕೃಷ್ಣಪ್ಪ (೪೦ ವರ್ಷ ೧೧ ತಿಂಗಳು ೨೩ ದಿನಗಳು), ಎಂ.ನಾಗರಾಜ್ (೪೦ ವರ್ಷ ೦೫ ತಿಂಗಳು ೧೨ ದಿವಸ), ರಾಬರ್ಟ್ಸನ್ಪೇಟೆ ಎಎಸ್ಐ ಕೆ.ವಿ.ರಾಧಾಕೃಷ್ಣ (ಸೇವಾವಧಿ: ೩೫ ವರ್ಷ ೦೭ ತಿಂಗಳು ೦೪ ದಿವಸ), ಬೂದಿಕೋಟೆ ಎಎಸ್ಐ ಲೋಗನಾಥಯ್ಯ (ಸೇವಾವಧಿ: ೩೧ ವರ್ಷ ೮ ತಿಂಗಳು ೬ ದಿವಸ) ರವರುಗಳು ಪೊಲೀಸ್ ಇಲಾಖೆಯ ವಿವಿಧ ವಿಭಾಗ, ಠಾಣೆ, ಕಛೇರಿಗಳಲ್ಲಿ ಅರ್ಥಪೂರ್ಣ ಸೇವೆಯನ್ನು ಸಲ್ಲಿಸುವ ಮೂಲಕ ಯಶಸ್ವಿಯಾಗಿರುತ್ತಾರೆ.
ಇವರುಗಳ ಸೇವೆ, ಅನುಭವವು ಎಲ್ಲರಿಗೂ ಮಾರ್ಗದರ್ಶನವಾಗಲೆಂದರು. ಉದ್ಯೋಗಿಗಳಿಗೆ ನಿವೃತ್ತಿಯು ಇದ್ದೇ ಇರುತ್ತದೆ, ಇರುವುದರೊಳಗೆ ಉತ್ತಮವಾದ ರೀತಿಯಲ್ಲಿ ಸೇವೆಯನ್ನು ಸಲ್ಲಿಸಬೇಕೆಂದರು. ನೈತಿಕ ಬೆಂಬಲದೊಂದಿಗೆ ಉತ್ತಮ ಬಾಂಧವ್ಯದ ಪರಿಸರದಲ್ಲಿ ಸರ್ಕಾರಿ ಸೇವೆಯನ್ನು ಪ್ರಾಮಾಣಿಕವಾಗಿ ಸಲ್ಲಿಸುವ ನಿಷ್ಠೆಯನ್ನು ಮೈಗೂಡಿಸಿಕೊಳ್ಳಬೇಕೆಂದು ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ಅವರು ಕರೆ ನೀಡಿದರು.
ನಿವೃತ್ತರಾದವರಿಗೆ ಶಾಲು ಹೊದಿಸಿ, ಹಣ್ಣುಹಂಪಲು ನೀಡಿ ಸನ್ಮಾನಿಸಿ, ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ನಿವೃತ್ತ ಅಧಿಕಾರಿಗಳ ಕುಟುಂಬ ವರ್ಗದವರು ಹಾಜರಿದ್ದರು.
ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಎಸ್.ಪಾಂಡುರಂಗ, ಸಹಾಯಕ ಆಡಳಿತಾಧಿಕಾರಿ ಜಿ.ವಿಶ್ವನಾಥ, ಸಶಸ್ತ್ರ ಪೊಲೀಸ್ ಇನ್ಸ್ಪೆಕ್ಟರ್ ವಿ.ಸೋಮಶೇಖರ, ಪಿಎಸ್ಐ ಮಾಲಾ, ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸಶಸ್ತ್ರ ಪೊಲೀಸ್ ಪೇದೆ ಶರಣಪ್ಪ ಕವಟಗಿ ಅವರು ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪಿಸಿದರು.
ಚಿತ್ರಶಿರ್ಷಿಕೆ: ೩೧ಕೆಜಿಎಫ್೦೧: ನಿವೃತ್ತ ಪೊಲೀಸ್ ಅಧಿಕಾರಿಗಳನ್ನು ಸನ್ಮಾನಿಸಿದ ಕೆಜಿಎಫ್ ಎಸ್ಪಿ ಕೆ.ಎಂ.ಶಾಂತರಾಜು ಡಿವೈಎಸ್ಪಿ ಎಸ್ ಪಾಂಡುರಂಗ, ಎಎಒ ವಿಶ್ವನಾಥ ಇತರರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
