ಸಾಲುಮರದ ತಿಮ್ಮಕ್ಕ ಸೇವಾರತ್ನ ಪ್ರಶಸ್ತಿ
ಕರ್ನಾಟಕ ಮಾನವ ಹಕ್ಕುಗಳ ಸಂರಕ್ಷಣಾ ಸಂಸ್ಥೆ ಮತ್ತು ಡಾ. ನಾಗಲಕ್ಷ್ಮಿ ಚೌಧರಿ ಜನಸೇವಾ ಸಂಸ್ಥೆಯ ವತಿಯಿಂದ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ಘಟಕದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕವಿ ಉದಂತ ಶಿವಕುಮಾರ್ ಅವರಿಗೆ "ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಸೇವಾರತ್ನ-2026" ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಈ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಸಿ.ಎಂ. ಗಣೇಶಗೌಡರು, ಕನ್ನಡ ಸಂಘರ್ಷ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ತಾ.ಸಿ. ತಿಮ್ಮಯ್ಯ, ಲೇಖಕ ಹಾಗೂ ಉಪನ್ಯಾಸಕರಾದ ಡಾ. ಶಿವರಾಜ್ ಬ್ಯಾಡರಹಳ್ಳಿ, ಕಸಾಪ ಸದಸ್ಯರಾದ ನಾಗರಾಜ್ ಉಪಸ್ಥಿತರಿದ್ದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
