ಕ್ಯಾಸಂಬಳ್ಳಿ: ಬಾರ್ ಕಳವು ಪ್ರಕರಣದಲ್ಲಿ ನಾಲ್ವರು ಆರೋಪಿಗಳ ಬಂಧನ, ಮಾಲು ವಶ
ಕೆಜಿಎಫ್., ಜ ೧೨: ಕ್ಯಾಸಂಬಳ್ಳಿ ಪೊಲೀಸರು ಬಾರ್ ಕಳವು ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿ, ಅವರಿಂದ ಸುಮಾರು ರೂ.೨೯,೭೦೦/- ಮೌಲ್ಯದ ಕಳವು ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
೨೦೨೫ ನ. ೧೧ ರಂದು ಜೆ.P. ಪುರಂ ಗ್ರಾಮದಲ್ಲಿರುವ ಕರ್ನಾಟಕ ವೈನ್ಸ್ ಶಾಫ್ ನ ಕ್ಯಾಷಿಯರ್ ಶಶಿಧರ್.ಟಿ ರವರು ಬಾರ್ನಲ್ಲಿ ರೂ.೧,೦೮,೦೦೦/- ನಗದು ಮತ್ತು ರೂ.೩೫,೦೦೦/- ಬೆಲೆ ಬಾಳುವ ವಿವಿಧ ಮಾದರಿಯ ಮಧ್ಯದ ಬಾಟಲಿಗಳು ಕಳ್ಳತನವಾಗಿರುವ ಬಗ್ಗೆ ಕ್ಯಾಸಂಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿ, ತನಿಖೆ ನಡೆಸಲಾಗುತ್ತಿತ್ತು.
ಡಿವೈಎಸ್ಪಿ ವಿ.ಲಕ್ಷ್ಮಯ್ಯ ಮತ್ತು ಬೇತಮಂಗಲ ಸಿಪಿಐ ವೈ.ಆರ್.ರಂಗಶಾಮಯ್ಯ ರವರ ಮಾರ್ಗದರ್ಶನದಲ್ಲಿ ಪಿ.ಎ.ಐ.ಗಳಾದ ಸಂಗಮೇಶ್ ಕೊಲ್ಹಾರ್, ಜಿ.ದೇವರಾಜು ಮತ್ತು ತಂಡದವರು ಕಾಂiiಚರಣೆ ನಡೆಸಿ ಆಂದ್ರಪ್ರದೇಶ ರಾಜ್ಯದ ರಾಜಕುಟ್ಟಿ, ತಿರುಮಲಬಾಬು, ಗಂಗಪ್ಪ, ಮುರುಗೇಶ್ ಎಂಬುವವರನ್ನು ಬಂಧಿಸಿ, ಅವರಿಂದ ಸುಮಾರು ರೂ.೨೯,೭೦೦/- ನಗದನ್ನು ವಶಪಡಿಸಿಕೊಂಡು, ಆರೋಪಿಗಳ ವಿರುದ್ಧ ಕಾನೂನು ಕ್ರಮ ವಹಿಸಿರುತ್ತಾರೆ.
ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಕ್ಯಾಸಂಬಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಸಂಗಮೇಶ್ ಕೊಲ್ಹಾರ್ ಮತ್ತು ಜಿ.ದೇವರಾಜು ಸಿಬ್ಬಂದಿಯವರಾದ ರಾಜ್ ಕುಮಾರ್, ಗಜೇಂದ್ರ, ಸಿದ್ದರಾಮ ಪಾಟೀಲ್, ಧನಸಿಂಗ್, ಮಂಜುನಾಥ್ ರವರ ಉತ್ತಮ ಕೆಲಸವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ರವರು ಪ್ರಶಂಸಿಸಿದ್ದಾರೆ.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
