ಗೃಹ ಸಚಿವ ಪರಮೇಶ್ವರರಿಗೆ ಜನಮೆಚ್ಚಿದ ಜನಪ್ರಿಯ ಜನನಾಯಕ ಗೌರವ ಪ್ರಶಸ್ತಿ ಪ್ರಧಾನ
ಕೆ.ಜಿ.ಎಫ್,ಜ.22: ಕರ್ನಾಟಕ ಆದಿ ದ್ರಾವಿಡ ಸಂಘದ ವತಿಯಿಂದ ಕರ್ನಾಟಕ ರಾಜ್ಯದ ಗೃಹ ಸಚಿವ ಡಾ|| ಜಿ.ಪರಮೇಶ್ವರ್ ಅವರಿಗೆ “ಜನಮೆಚ್ಚಿದ ಜನಪ್ರಿಯ ಜನನಾಯಕ” ಗೌರವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಕೆಜಿಎಫ್ನ ಅಶೋಕ ದಮ್ಮ ಧೂತ ಬುದ್ದ ಸಂಘದ ಆಧ್ಯಾತ್ಮಿಕ ಧ್ಯಾನ ಮಂದಿರಕ್ಕೆ ಜ.20 ರಂದು ಗೃಹ ಸಚಿವ ಡಾ|| ಜಿ.ಪರಮೇಶ್ವರ್ ಅವರು ಭೇಟಿ ನೀಡಿದ್ದ ಸಂದರ್ಭದಲ್ಲಿ ಕರ್ನಾಟಕ ಆದಿ ದ್ರಾವಿಡ ಸಂಘದ ರಾಜ್ಯಾಧ್ಯಕ್ಷ ಡಾ|| ಆರ್.ಪ್ರಭುರಾಂ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕರಾದ ಡಾ|| ಎಂ.ರೂಪಕಲಾ ಶಶಿಧರ್, ಬುದ್ದ ಸಂಘದ ಗೌರವಾಧ್ಯಕ್ಷ ಡಾ|| ಪೂರ್ಣೇಶನ್ರಾಜು ಅವರುಗಳು ಉಪಸ್ಥಿತರಿದ್ದರು.
ಗೃಹ ಸಚಿವ ಡಾ|| ಜಿ.ಪರಮೇಶ್ವರ್ ಅವರು ಈ ಹಿಂದೆಯೂ ಸಹ ಹಲವು ಬಾರಿ ಸಚಿವರಾಗಿದ್ದು, ಮೂರ್ನಾಕ್ಕು ದಶಕಗಳಿಂದಲೂ ಜನಾನುರಾಗಿಯಾಗಿ ಉತ್ತಮ ಹೆಸರು ಗಳಿಸಿದ್ದರು. ಜನಮೆಚ್ಚಿದ ಜನಪ್ರಿಯ ಜನನಾಯಕರಾಗಿ ಹೊರಹೊಮ್ಮಿರುವ ಪರಮೇಶ್ವರ್ ಅವರನ್ನು ಕರ್ನಾಟಕ ಆದಿ ದ್ರಾವಿಡ ಸಂಘದ ವತಿಯಿಂದ “ಜನಮೆಚ್ಚಿದ ಜನಪ್ರಿಯ ಜನನಾಯಕ” ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿ, ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಆದಿ ದ್ರಾವಿಡ ಸಂಘದ ಪದಾಧಿಕಾರಿಗಳು, ಹಲವು ಮುಖಂಡರುಗಳು ಭಾಗವಹಿಸಿದ್ದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
