ಜೆಜೆಎಂ ಸ್ಟಾಂಪ್ ಪೇಪರ್ ವಿಚಾರದಲ್ಲಿ ಕ್ರಿಮಿನಲ್ ಚಟುವಟಿಕೆ: ಸಿಬಿಐ ತನಿಖೆ ಮಾಡಿಸಲು ಡಿ.ಎನ್.ಜೀವರಾಜ್ ಒತ್ತಾಯ

Mar 4, 2026 - 16:50
 0  5
ಜೆಜೆಎಂ ಸ್ಟಾಂಪ್ ಪೇಪರ್ ವಿಚಾರದಲ್ಲಿ ಕ್ರಿಮಿನಲ್ ಚಟುವಟಿಕೆ: ಸಿಬಿಐ ತನಿಖೆ ಮಾಡಿಸಲು ಡಿ.ಎನ್.ಜೀವರಾಜ್ ಒತ್ತಾಯ
ಸುದ್ದಿ ಕಿರಣ ನ್ಯೂಸ್ ಡೆಸ್ಕ್

ಬೆಂಗಳೂರು: ಜಲಜೀವನ್ ಮಿಷನ್ (ಜೆಜೆಎಂ) ಸ್ಟಾಂಪ್ ಪೇಪರ್ ವಿಚಾರದಲ್ಲಿ ಕ್ರಿಮಿನಲ್ ಚಟುವಟಿಕೆ ನಡೆದಿದ್ದು, ಸರಕಾರವು ಇದರ ಸಿಬಿಐ ತನಿಖೆ ಮಾಡಿಸಬೇಕೆಂದು ಎಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ಅವರು ಒತ್ತಾಯಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಶೃಂಗೇರಿ ಕ್ಷೇತ್ರದಲ್ಲಿ ಜೆಜೆಎಂ ಎಂಬುದು ಜಲಜೀವನ್ ಕಮಿಷನ್ ಆಗಿದೆ ಎಂದು ದಾಖಲೆಗಳ ಜೊತೆ ಆರೋಪಿಸಿದರು. 150 ಕೋಟಿ ರೂ.ಗಿಂತ ಹೆಚ್ಚು ಹಣವನ್ನು ಕೇಂದ್ರ ಸರಕಾರ ಕೊಟ್ಟಿದೆ. ಆದರೆ, ಒಂದೇ ಒಂದು ಮನೆಗೆ ನೀರು ಲಭಿಸಿಲ್ಲ ಎಂದು ದೂರಿದರು.

ಹಿಂದೆ ಕರೀಂಲಾಲ್ ತೆಲಗಿ ಮೂಲಕ ಸ್ಟಾಂಪ್ ಪೇಪರ್ ಹಗರಣ ನಡೆದಿತ್ತು. ಹಿಂದೆ ಸ್ಟಾಂಪ್ ಪೇಪರ್ ಮೇಲ್ಭಾಗದಲ್ಲಿ ನೋಟಿನಂತೆ ಮಾತ್ರ ಇರುತ್ತಿತ್ತು. ನಕಲಿ ಸ್ಟಾಂಪ್ ಪೇಪರ್ ಮಾಡುವುದು ಸುಲಭವಿತ್ತು. ಸರಕಾರವು ಬಳಿಕ ಅದನ್ನು ಬದಲಿಸಿ, ನಂಬರ್, ಕ್ಯೂಆರ್ ಕೋಡ್ ಕೊಟ್ಟು ಇಸ್ಟಾಂಪಿಂಗ್ ಆ್ಯಪ್ ಬಿಡುಗಡೆ ಮಾಡಿದೆ. ಅದರಲ್ಲಿ ಸ್ಕ್ಯಾನ್ ಮಾಡಿದಾಗ ಖರೀದಿಸಿದವರ ಮಾಹಿತಿ, ನಂಬರ್ ಬರಬೇಕು. ಈ ಜೆಜೆಎಂನಡಿ ಕರೀಂಲಾಲ್ ಬುದ್ಧಿವಂತಿಕೆಗೆ ಮೀರಿದ ಹಗರಣ ನಡೆದಿದೆ ಎಂದು ಆರೋಪಿಸಿದರು.

ಇದು ಜೆಜೆಎಂ ಸಂಬಂಧ ಸರಕಾರದ ಜೊತೆ ಅಂದರೆ ಜಿಲ್ಲಾ ಪಂಚಾಯಿತಿ ಜೊತೆ ಆದ ಒಪ್ಪಂದದ ಸ್ಟಾಂಪ್ ಪೇಪರನ್ನು ಪ್ರದರ್ಶಿಸಿದರು. ‘ಐಎನ್‍ಕೆಎ 76845429815984 ಡಬ್ಲು’್ಯ ನಂಬರಿನಲ್ಲಿ 2024ರಲ್ಲಿ ಒಂದೇ ದಿನ ಒಂದೇ ಸಮಯಕ್ಕೆ ಸ್ಟಾಂಪ್ ಪೇಪರ್ ಪಡೆದಂತೆ ಕಾಣುತ್ತಿದ್ದು, ಎನ್.ಆರ್.ಪುರ, ಕೊಪ್ಪ ತಾಲ್ಲೂಕಿನಲ್ಲಿ 9 ಒಪ್ಪಂದಗಳು ಆಗಿವೆ. ಇನ್ನೊಂದು ಸಂಖ್ಯೆಯ ಸ್ಟಾಂಪ್ ಪೇಪರಿನಲ್ಲಿ ಬೋರ್‍ವೆಲ್ ಕೊರೆಸಲು 11 ಒಪ್ಪಂದಗಳಾಗಿವೆ. ಇದು ಸರಕಾರದ ಜೊತೆಗಿನ ಒಪ್ಪಂದ. ಪ್ರಿಯಾಂಕ್ ಖರ್ಗೆಯವರ ಖಾತೆಯ ಕೆಳಗೆ ಬರುವ ಇಲಾಖೆ ಇದು ಎಂದು ವಿವರ ನೀಡಿದರು.

ನಾವು ಪಡೆದ 30 ಒಪ್ಪಂದಗಳಲ್ಲಿ ಇದಿಷ್ಟು ಹಗರಣಗಳು ಪತ್ತೆಯಾಗಿದೆ. ಸ್ಟಾಂಪ್ ಪೇಪರ್ ನಕಲಿ ಆಗಿದೆ. ಸರಕಾರದ ಬೊಕ್ಕಸಕ್ಕೆ ಮೋಸ ಎನ್ನುವುದಕ್ಕಿಂತ ಇದು ಶೇ 100ರಷ್ಟು ಕ್ರಿಮಿನಲ್ ಚಟುವಟಿಕೆ ಎಂದು ಆರೋಪಿಸಿದರು. ಇದರ ಹಿಂದೆ ಶೃಂಗೇರಿ ಶಾಸಕರ ಎಡ- ಬಲ- ಹಾರ್ಟ್ ಎಲ್ಲರೂ ಇದ್ದಾರೆ. ಇದರಲ್ಲಿ ಶಾಸಕರ ಕೃಪಾಶೀರ್ವಾದದೊಂದಿಗೆ ಇಂಥ ಘಟನೆ ನಡೆದಿದೆ ಎಂದು ಜನರು ಮಾತನಾಡುತ್ತಿದ್ದಾರೆ ಎಂದು ದೂರಿದರು.

ಇನ್ನೊಂದು ಸ್ಟಾಂಪ್ ಪೇಪರ್ ಸ್ಕ್ಯಾನ್ ಮಾಡಿದರೆ ಇದು ಅಸಲಿ ಅಲ್ಲ ಎಂಬ ಅರ್ಥದ ಮಾಹಿತಿ ಬರುತ್ತಿದೆ. ಇದು ನಕಲಿಯೇ ಅಥವಾ ಅಸಲಿಯೇ ಎಂದು ತಿಳಿದಿಲ್ಲ ಎಂದು ಗಮನ ಸೆಳೆದರು. ಸ್ಥಳೀಯವಾಗಿ ತನಿಖೆ ನಡೆಸಿದರೆ ಇದನ್ನು ಮುಚ್ಚಿ ಹಾಕುವ ಸಾಧ್ಯತೆ ಇದೆ ಎಂದು ಹೇಳಿದರು.

ಕೊರೆಸಿದ ಬೋರ್‍ವೆಲ್ ಆಳದ ಕುರಿತು ತಿಳಿಯಲು ಮುಂದಾಗಿದ್ದೆ. ಇದಕ್ಕಾಗಿ ಕ್ಯಾಮರಾ ಒಳಬಿಟ್ಟು ಆಳ ತಿಳಿಯಲು ಸಾಧ್ಯವಿದೆ. ಸ್ವಂತ ಖರ್ಚಿನಲ್ಲಿ 10 ಕೊಳವೆಬಾವಿ ಪರಿಶೀಲಿಸಿದ್ದು, ಕೊಪ್ಪ ತಾಲ್ಲೂಕು ಕಡೇಗದ್ದೆ ತಳಮಕ್ಕಿಯಲ್ಲಿ 228 ಅಡಿಯ ಆಳವಿರುವ ಕೊಳವೆಬಾವಿಗೆ 587 ಅಡಿಗೆ ಬಿಲ್ ಮಾಡಿದ್ದಾರೆ ಎಂದು ಟೀಕಿಸಿದರು. ಇನ್ನೊಂದು 260 ಅಡಿಯ ಕೊಳವೆಬಾವಿಗೆ 587 ಅಡಿಗೆ ಬಿಲ್ ಮಾಡಿದ್ದಾಗಿ ವಿವರಿಸಿದರು. ಇವುಗಳ ಹಣ ಪಾವತಿ ಆಗಿದೆ ಎಂದರು.

ಬಲಗಾರು ಗ್ರಾಮ ಪಂಚಾಯಿತಿಯಲ್ಲಿ 1.49 ಲಕ್ಷ ರೂ. ಬಿಲ್ ಆಗಿದೆ. ಆದರೆ ಬೋರ್‍ವೆಲ್ ಇಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಗೌರಿಹಳ್ಳದಲ್ಲಿ ಬೋರ್‍ವೆಲ್ ಇಲ್ಲ; 1.38 ಲಕ್ಷ ಬಿಲ್ ಮಾಡಿದ್ದಾರೆ ಎಂದು ವಿವರ ನೀಡಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮತ್ತು ಕಾಡಾದ ಅಧ್ಯಕ್ಷ ಅಂಶುಮಂತ್ ಅವರು ಕೆಡಿಪಿ ಸಭೆಯಲ್ಲಿ ಜೆಜೆಎಂ ಅಡಿ ಮೋಸ ನಡೆಯುತ್ತಿದೆ. ಶಾಸಕರೇ ಇದನ್ನು ಗಮನಿಸಿ ಎಂದು ಗಮನ ಸೆಳೆದಿದ್ದ ವರದಿಯ ಪೇಪರ್ ತುಣುಕನ್ನೂ ಅವರು ಪ್ರದರ್ಶಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಎಂ.ಸತೀಶ್ ಅವರು ಸಾರ್ವಜನಿಕ ಸಭೆಯಲ್ಲಿ ಜೆಜೆಎಂ ಅಡಿ ನೂರಾರು ಕೋಟಿಯ ಹಗರಣ ನಡೆದಿದೆ ಎಂದಿದ್ದರು ಎಂದು ಹೇಳಿದರು.

ಓವರ್ ಹೆಡ್ ಟ್ಯಾಂಕ್ ವಿಚಾರದಲ್ಲೂ ಅವ್ಯವಹಾರ ಆಗಿದೆ. ಪೈಪ್ ಹಾಕಲು ನಿಗದಿತ ಆಳದ ಕಾಲುವೆ ತೋಡಿಲ್ಲ. ನಿಗದಿತ ಗುಣಮಟ್ಟದ ಪೈಪ್ ಉಪಯೋಗಿಸದೇ ಇರುವುದು ಕಂಡುಬಂದಿದೆ. ಶೃಂಗೇರಿ ಕ್ಷೇತ್ರದಲ್ಲಿ ಜೆಜೆಎಂ, ಜೆಜೆ ಕಮಿಷನ್ ಆಗಿದೆ ಎಂದು ದೂರಿದರು. ಪಕ್ಷದ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ, ಮೂಡಿಗೆರೆಯ ಮುಖಂಡ ದೀಪಕ್ ದೊಡ್ಡಯ್ಯ ಅವರು ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456