ಮಹನೀಯರ ಆರಾಧನಾ ಮಹೋತ್ಸವ
ಬೆಂಗಳೂರು: ಶ್ರೀ ಗುರು ರಾಘವೇಂದ್ರ ಸೇವಾ ಸಮಿತಿಯ ವತಿಯಿಂದ ಮಾರ್ಚ್ 5 ರಿಂದ 7ರ ವರೆಗೆ ಶ್ರೀ ಸುಧೀಂದ್ರತೀರ್ಥರ, ಶ್ರೀ ವಾದಿರಾಜರ ಮತ್ತು ಶ್ರೀ ವ್ಯಾಸರಾಜರ ಆರಾಧನಾ ಮಹೋತ್ಸವವನ್ನು ಪ್ರಕಾಶನಗರದ 10ನೇ ಮುಖ್ಯರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಹಮ್ಮಿಕೊಂಡಿದೆ.
ಕಾರ್ಯಕ್ರಮಗಳು : ಮಾರ್ಚ್ 5, ಗುರುವಾರ, ಶ್ರೀ ಸುಧೀಂದ್ರತೀರ್ಥರ ಮತ್ತು ಬಾಳಗಾರು ಶ್ರೀ ರಘುಮಾನ್ಯತೀರ್ಥರ ಆರಾಧನೆ : ಬೆಳಗ್ಗೆ 8 ರಿಂದ ಪಂಚಾಮೃತ ಅಭಿಷೇಕ, ಸುಮಧ್ವ ವಿಜಯ ಸಚ್ಛಾಸ್ತ್ರ ಪಾರಾಯಣ, ಶ್ರೀಕಾಂತ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ಮ||ಶಾ||ಸಂ|| ಶ್ರೀ ಅಬ್ಬೂರು ಬದರಿ ಆಚಾರ್ಯರಿಂದ "ಶ್ರೀ ಸುಧೀಂದ್ರತೀರ್ಥರ ಸಂಕ್ಷಿಪ್ತ ಜೀವನ ಚರಿತ್ರೆ ಮತ್ತು ತತ್ವಜ್ಞಾನಕ್ಕೆ ವಾಜ್ಞಯ ಕೊಡುಗೆ" ವಿಷಯವಾಗಿ ಧಾರ್ಮಿಕ ಪ್ರವಚನ.
ಮಾರ್ಚ್ 6, ಶುಕ್ರವಾರ : ಶ್ರೀ ವಾದಿರಾಜರ ಆರಾಧನೆ : ಬೆಳಗ್ಗೆ 8 ರಿಂದ ಪಂಚಾಮೃತ ಅಭಿಷೇಕ, ಸುಮಧ್ವ ವಿಜಯ ಸಚ್ಛಾಸ್ತ್ರ ಪಾರಾಯಣ, ರುಕ್ಮಿಣಿ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ಮ||ಶಾ||ಸಂ|| ಶ್ರೀ ಸಾಂಗ್ಲಿ ವಾಸುದೇವಾಚಾರ್ಯರಿಂದ "ಶ್ರೀ ವಾದಿರಾಜರ ಸಂಕ್ಷಿಪ್ತ ಜೀವನ ಚರಿತ್ರೆ ಮತ್ತು ಶ್ರೀಮದಾಚಾರ್ಯರ ತತ್ವಜ್ಞಾನಕ್ಕೆ ಶ್ರೀ ವಾದಿರಾಜರ ಕೊಡುಗೆ" ವಿಷಯವಾಗಿ ಧಾರ್ಮಿಕ ಪ್ರವಚನ.
ಮಾರ್ಚ್ 7, ಶನಿವಾರ : ಶ್ರೀ ವ್ಯಾಸರಾಜರ ಆರಾಧನೆ : ಬೆಳಗ್ಗೆ 8 ರಿಂದ ಪಂಚಾಮೃತ ಅಭಿಷೇಕ, ಸುಮಧ್ವ ವಿಜಯ ಸಚ್ಛಾಸ್ತ್ರ ಪಾರಾಯಣ, ಶ್ರೀ ಗುರುರಾಘವೇಂದ್ರ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ಮ||ಶಾ||ಸಂ|| ಶ್ರೀ ಆತನೂರು ಭೀಮಸೇನಾಚಾರ್ಯರಿಂದ "ಶ್ರೀ ವ್ಯಾಸರಾಜರ ಸಂಕ್ಷಿಪ್ತ ಜೀವನ ಚರಿತ್ರೆ ಮತ್ತು ವ್ಯಾಸತ್ರಯಗಳ ಪರಿಚಯ" ವಿಷಯವಾಗಿ ಧಾರ್ಮಿಕ ಪ್ರವಚನ ಕಾರ್ಯಕ್ರಮಗಳನ್ನು ಏರ್ಪಡಿಸಿದೆ ಎಂದು ಶ್ರೀಮಠದ ಪದಾಧಿಕಾರಿಗಳು ತಿಳಿಸಿದ್ದಾರೆ.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
