ಕೆಜಿಎಫ್ ನಲ್ಲಿ ಜೆಡಿಎಸ್ ಯುವ ಮುಖಂಡ ಪ್ರಕಾಶ್ ರವರಿಂದ ನೀರಿನ ಕ್ಯಾನ್ ವಿತರಣೆ
ಕೆಜಿಎಫ್: ಕೆಜಿಎಫ್ ನಗರದ 16ನೇ ವಾರ್ಡಿನ ಜೆಡಿಎಸ್ ಪಕ್ಷದ ನಗರಸಭೆ ಆಕಾಂಕ್ಷಿ ಅಭ್ಯರ್ಥಿ ಪ್ರಕಾಶ್ ಹಲವಾರು ಸಮಾಜ ಸೇವೆಗಳನ್ನು ಮಾಡಿಕೊಂಡು ಬಂದಿದ್ದು, ವಾರ್ಡಿನ ನಿವಾಸಿಗಳಿಗೆ ನೀರಿನ ಸಮಸ್ಯೆ ಇದ್ದು, ಹೊಸ ನೀರಿನ ಕ್ಯಾನ್ ಹಾಗೂ ನೀರು ಸಮೇತ ವಿತರಣೆ ಮಾಡಲಾಯಿತು.
ಪ್ರಕಾಶ್ ಅವರ ಮಾತನಾಡಿ ಜೆಡಿಎಸ್ ಪಕ್ಷ ತನ್ನದೇ ಆದ ಇತಿಹಾಸ ಹೊಂದಿದ್ದು, ನಮ್ಮ ನಾಯಕರು ಕೇಂದ್ರ ಮಂತ್ರಿಗಳು ಎಚ್ ಡಿ ಕುಮಾರಸ್ವಾಮಿ ಹಲವಾರು ಜನಪರ ಕಾರ್ಯಕ್ರಮಗಳನ್ನು ನೀಡಿದ್ದಾರೆ.
ಇಂಥ ಪಕ್ಷದಲ್ಲಿ ನಾನು ನನ್ನ ವಾರ್ಡಿನ ಜನರಿಗೆ ನಗರಸಭೆ ಸದಸ್ಯನಾಗಿ ಹಲವಾರು ಸೇವೆಗಳನ್ನು ಮಾಡುವ ಇಚ್ಛೆಯನ್ನು ಹೊಂದಿದ್ದು, ಇದು ಮೊದಲ ಹೆಜ್ಜೆ ಆಗಿದೆ. ನನ್ನನ್ನು ಜನ ಆಶೀರ್ವಾದ ಮಾಡಿದರೆ
ನನ್ನ ವಾರ್ಡಿನಲ್ಲಿ ಕಸದ ಸಮಸ್ಯೆ ನೀರಿನ ಸಮಸ್ಯೆ ಇರುವುದಿಲ್ಲ ನಗರಸಭೆ ಕಚೇರಿಯಲ್ಲಿ ಯಾವುದೇ ಒಂದು ಕಾರ್ಯವನ್ನು ನಾನೇ ಖುದ್ದು ನಿಂತು ತಮ್ಮ ಮನೆಗಳಿಗೆ ಬಂದು ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದರು.
ಕೆಜಿಎಫ್ ತಾಲೂಕು ಜೆಡಿಎಸ್ ಅಧ್ಯಕ್ಷರು. ಲಿಯೋ ಜೋಸೆಫ್ ಮಾತನಾಡಿ ನಮ್ಮ ನಗರಸಭೆಯಲ್ಲಿ ಹಲವಾರು ಭ್ರಷ್ಟಾಚಾರಗಳು ತುಂಬಿ ತುಳುಕುತ್ತಿದೆ ಇದನ್ನು ಪ್ರಶ್ನೆ ಮಾಡುವರು ಯಾರು ಇಲ್ಲ ನಮ್ಮ ಜೆಡಿಎಸ್ ಪಕ್ಷಕ್ಕೆ ಮತ ನೀಡಿ ನಾವು ನಗರಸಭೆಯಲ್ಲಿ ನಡೆಯುವ ಎಲ್ಲಾ ಬ್ರಷ್ಟಾಚಾರಗಳನ್ನು ಬಯಲುಗೆ ಎಳೆಯುತ್ತೇವೆ.ನಮ್ಮ ಅಭ್ಯರ್ಥಿಗೆ ಮತ ನೀಡಿದರೆ 35 ವಾರ್ಡ್ಗಳನ್ನು ಮಾದರಿವಾಡನ್ನಾಗಿ ಮಾಡುವದಾಗಿತಿಳಿಸಿದರು.ಈ ಸಂದರ್ಭದಲ್ಲಿವಾರ್ಡಿನ ಮುಖಂಡರು ಭಾಗವಹಿಸಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
