ಗೌತಮ ಬುದ್ಧರ ವಿಚಾರಧಾರೆ,, ವಿಶ್ವಕ್ಕೆ ಮಾದರಿ,, ನಯನಜ ಸಮಾಜದ ಅಧ್ಯಕ್ಷ ಶ್ರೀ ಶಿವಪ್ಪ ನುಡಿ
ತಥಾಗತ ಗೌತಮ ಬುದ್ದರ ತತ್ವ ಜಗತ್ತಿಗೆ ಮಾದರಿ ಬುದ್ಧ ಧರ್ಮ ಅತ್ಯಂತ ವೈಜ್ಞಾನಿಕ ಧರ್ಮ ಎಂದು *ನಯನಜ ಸಮಾಜದ ಅಧ್ಯಕ್ಷ ಶ್ರೀ ಶಿವಪ್ಪ ನುಡಿದರು..
ಇಂದು ಬೆಳಗ್ಗೆ 2570ನೇ ವೈಶಾಖ *ಶುದ್ಧ ಬುದ್ಧ ಪೂರ್ಣಿಮೆ ಯನ್ನು ಹೌಸಿಂಗ್ ಬೋರ್ಡ್ ನ ಬುದ್ಧ ಬಸವ ಅಂಬೇಡ್ಕರ್ ಯೋಗ ಕೇಂದ್ರದ ಯೋಗ ಗುರು ಎಸ್.ಎಂ. ಅಲ್ಲಮಪ್ರಭು ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. *ನೇಪಾಳದ ಲುಂಬಿನಿಯಲ್ಲಿ ಹುಟ್ಟಿ ವಿಶ್ವಕ್ಕೆ ಬೆಳಕಾದ,, ಏಷ್ಯಾದ ಬೆಳಕು ಎಂದೇ ಪ್ರಸಿದ್ಧಿ ಪಡೆದ ಗೌತಮ ಬುದ್ಧರು ಮೌಡ್ಯಕ್ಕೆ ತಿಲಾಂಜಲಿ ನೀಡಿ ಹೊಸ ಮನ್ವಂತರ *ಸೃಷ್ಠಿಸಿದ, ಹೊಸ ಧರ್ಮ ಕಟ್ಟಿ ಸಮಾನತೆಯ ಹರಿಕಾರ ಗೌತಮ ಬುದ್ದರ ಜಯಂತಿಯನ್ನು *ಈ ಶ್ರೇಷ್ಠ ಯೋಗ ಕೇಂದ್ರದಲ್ಲಿ ಎಲ್ಲರಿಗೂ ತಿಂಡಿ ವ್ಯವಸ್ಥೆ ಮಾಡಿ ಆಚರಿಸುತ್ತಿರುವುದು ಹೆಮ್ಮೆ ಸಂಗತಿ ಎಂದರು... ಕಾರ್ಯಕ್ರಮದಲ್ಲಿ ನಾಡಿನ ಖ್ಯಾತ ಯೋಗ ಗುರು ಎಸ್.ಎಂ ಅಲ್ಲಮ ಪ್ರಭು ಶಿಕ್ಷಕರಾದ ಶ್ರೀ ಕೆಂಬಾರೆಗೌಡ, ಲಕ್ಷ್ಮಣ್ ಗೌಡ, ಶಿಕ್ಷಣ ಸಂಯೋಜಕ ಶ್ರೀ.ಸಿ. ವೀರಭದ್ರಯ್ಯ,, ಶಿಕ್ಷಕಿ ಶ್ರೀಮತಿ ಸಹನಾ ಅರುಣ್ ಕುಮಾರಗೌಡ,,ಐ ಸಿ ಎಲ್ ಇಂದ್ರಕುಮಾರ್, ರೇಷ್ಮೆ *ಇಲಾಖೆ ಕೀರ್ತಿ ಹೊಸಹೊಳಲು, ಅಂಗಡಿ ಅಣಪ್ಪ, ರಶ್ಮಿ ವಾಸು, ನಂದಿನಿ, ರೇಖಾಮಂಜುತೊಳಸಿ, ಸ್ಪಂಧನ, ಆದಂಜಾಕೀರ್, ಮಮತಾರೋಬೋ ಮಂಜು,,, ಮುಂತಾದವರು ಭಾಗವಹಿಸಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
