ದಾಳಿಂಬೆ ಹಣ್ಣುಗಳ ಕಳ್ಳತನ ಮೂವರು ಆರೋಪಿಗಳು ಸೆರೆ, ಮಾಲು ವಶ
ಕೆಜಿಎಫ್.ಬೇತಮಂಗಲ, ಆ.೧೨: ದಾಳಿಂಬೆ ಹಣ್ಣುಗಳ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿ, ಅವರಿಂದ ಸುಮಾರು ರೂ.೯,೭೫೦/- ಬೆಲೆ ಬಾಳುವ ೬೫ ಕೆ.ಜಿ ದಾಳಿಂಬೆ ಹಣ್ಣುಗಳನ್ನು ವಶಪಡಿಸಿಕೊಳ್ಳುವಲ್ಲಿ ಬೇತಮಂಗಲ ಪೊಲೀಸರು ಯಶಸ್ವಿಯಾಗಿದ್ದಾರೆ.
ಆ.೧೦ ರಂದು ಬೇತಮಂಗಲ ಪೊಲೀಸ್ ಠಾಣಾ ಸರಹದ್ದು ಕಲಾಯಿ ಹೊಸಹಳ್ಳಿ ಗ್ರಾಮದ ವಾಸಿ ಮುನಿರೆಡ್ಡಿ ರವರು ತಮ್ಮ ಜಮೀನಿನಲ್ಲಿ ಬೆಳೆದಿದ್ದ ದಾಳಿಂಟೆ ತೋಟದಲ್ಲಿ ಯಾರೋ ಕಳ್ಳರು ದಾಳಿಂಬೆ ಹಣ್ಣುಗಳನ್ನು ಕಳವು ಮಾಡಿಕೊಂಡು ಹೋಗಿದ್ದರ ಬಗ್ಗೆ ಬೇತಮಂಗಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಈ ಬಗ್ಗೆ ಪ್ರಕರಣ ದಾಖಲಾಗಿ, ತನಿಖೆ ನಡೆಸಲಾಗುತ್ತಿತ್ತು.
ಡಿವೈಎಸ್ಪಿ ಎಸ್.ಪಾಂಡುರಂಗ ರವರ ಮಾರ್ಗದರ್ಶನದಲ್ಲಿ ಬೇತಮಂಗಲ ಸಿಪಿಐ ವೈ.ಆರ್.ರಂಗಶಾಮಯ್ಯ ರವರ ನೇತೃತ್ವದಲ್ಲಿ ಪಿಎಸ್ಐ ಗುರುರಾಜ ಚಿಂತಾಕಲ ಮತ್ತು ತಂಡದವರು ಸುಂದರಪಾಳ್ಯದ ಗ್ರಾಮದ ವಾಸಿ ಸುಬ್ರಮಣಿ, ಸಂಗನಹಳ್ಳಿ ಗ್ರಾಮದ ವಾಸಿ ನಾರಾಯಣಸ್ವಾಮಿ, ವಡ್ರಹಳ್ಳಿ ಗ್ರಾಮದ ವಾಸಿ ಅಮರೀಶ ಎಂಬುವರನ್ನು ಬಂಧಿಸಿ, ಆರೋಪಿಗಳಿಂದ ಸುಮಾರು ರೂ.೯,೭೫೦/- ಬೆಲೆ ಬಾಳುವ ೬೫ ಕೆ.ಜಿ ದಾಳಿಂಬೆ ಹಣ್ಣುಗಳು ಮತ್ತು ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡು, ಆರೋಪಿಗಳ ವಿರುದ್ಧ ಕಾನೂನು ಕ್ರಮ ವಹಿಸಿರುತ್ತಾರೆ.
ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಬೇತಮಂಗಲ ಪಿಎಸ್ಐ ಗುರುರಾಜ ಚಿಂತಾಕಲ ಮತ್ತು ಸಿಬ್ಬಂದಿಗಳಾದ ನಾರಾಯಣಸ್ವಾಮಿ, ಸೋಮಶೇಖರ್, ಮಂಜುನಾಥ ರವರುಗಳ ಉತ್ತಮ ಕೆಲಸವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ಅವರು ಪ್ರಶಂಶಿಸಿದ್ದಾರೆ.
ಚಿತ್ರ ಶೀರ್ಷಿಕೆ: ೧೨ಕೆಜಿಎಫ್೦೧: ವಶಪಡಿಸಿಕೊಂಡ ದಾಳಿಂಬೆ ಹಣ್ಣುಗಳೊಂದಿಗೆ ಬೇತಮಂಗಲ ಪೊಲೀಸರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
