"ಮೇಲುಕೋಟೆ ಕ್ಷೇತ್ರದ  ಗಾಣದಾಳು ಹಾಗೂ ಚಂದಗಾಲು ಗ್ರಾಮಗಳ ರಸ್ತೆ ಅಭಿವೃದ್ಧಿ  ಕಾಮಗಾರಿ ಚಾಲನೆ"

May 14, 2026 - 17:59
 0  1
"ಮೇಲುಕೋಟೆ ಕ್ಷೇತ್ರದ  ಗಾಣದಾಳು ಹಾಗೂ ಚಂದಗಾಲು ಗ್ರಾಮಗಳ ರಸ್ತೆ ಅಭಿವೃದ್ಧಿ  ಕಾಮಗಾರಿ ಚಾಲನೆ"
ಚಿತ್ರವರದಿ : ಕೆ.ಪಿ.ಕುಮಾರ್ ಹೊಳಲು.

        ಮಂಡ್ಯ ತಾಲೂಕು  ಗಾಣದಾಳು ಗ್ರಾಮದಲ್ಲಿ ಇಂದು ಲೋಕೋಪಯೋಗಿ ಇಲಾಖೆ ವತಿಯಿಂದ ಸುಮಾರು 5 ಕೋಟಿ ರೂಗಳ ವೆಚ್ಚದಲ್ಲಿ ವಿ.ಸಿ.ಫಾರಂ ಗೇಟ್ ಇಂದ ಗಾಣದಾಳು  ಮಾರ್ಗವಾಗಿ  ಗಾಣದಾಳು ಗ್ರಾಮದಿಂದ ಚಂದಗಾಲು ಗ್ರಾಮದವರೆಗೆ  ರಸ್ತೆ  ಅಭಿವೃದ್ಧಿ ಕಾಮಗಾರಿಗೆ ಮೇಲುಕೋಟೆ ಕ್ಷೇತ್ರದ ಜನಪ್ರಿಯ ಶಾಸಕರಾದ ದರ್ಶನ್ ಪುಟ್ಟಣ್ಣಯ್ಯನವರು ಗುದ್ದಲಿ 
 ಪೂಜೆ ನೆರವೇರಿಸಿದರು.
ನಂತರ ಮಾತನಾಡುತ್ತಾ ಸುಮಾರು ವರ್ಷಗಳಿಂದ ಈ ರಸ್ತೆ ಹಾಳಾಗಿದ್ದು ಈ ದಿನ ಯೋಗ ಕೂಡಿ ಬಂದಿದೆ ಆದ್ದರಿಂದ ಗಾಣದಾಳು ಗ್ರಾಮದಿಂದ  ಚಂದಗಾಲು ಗ್ರಾಮದವರೆಗೆ  ಮುಖ್ಯರಸ್ತೆ ಹೊರತುಪಡಿಸಿ ಗ್ರಾಮಗಳ ಒಳಗೆ ಕಾಂಕ್ರೀಟ್ ರಸ್ತೆ ಚಂದಗಾಲು ಕಾಲುವೆಯವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಮಾಡುತ್ತಿದ್ದೇವೆ.
 ಗ್ರಾಮಸ್ಥರಿಗೆ ಹಾಗೂ ಎಲ್ಲರಿಗೂ ಅನುಕೂಲವಾಗಲಿದೆ. ಒಳ್ಳೆಯದಾಗಲಿ ಎಂದು ಈ ಸಂದರ್ಭದಲ್ಲಿ ಹೇಳಿದರು. 
ಈ ಸಂದರ್ಭದಲ್ಲಿ 
 ಗಾಣದಾಳು ಗ್ರಾಮದ ಮುಖಂಡರಾದ ಯಜಮಾನ್ ಶಿವರಾಮ್,  ಯಜಮಾನಚಂದ್ರು,
 ವಿಜಿಕುಮಾರ್,  ಕೃಷ್ಣೇಗೌಡ ನಂದೀಶ್ ಮತ್ತು ಚಂದನ್, 
ಚಂದಗಾಲು ಗ್ರಾಮದ ಮುಖಂಡರಾದ ಸಿ.ಕೆ.ನಾಗರಾಜ್ ಚಂದ್ರಶೇಖರ್ ಸಿ ಕೆ 
 ಸಿ.ಜೆ.ಸಿದ್ದರಾಜು,  ಜೋಗಿಗೌಡ, ಆನಂದ್ , ಉಮೇಶ್,   ರಾಜೇಶ್,  ಪುಟ್ಟಸ್ವಾಮಿ,  
 ಲೋಕೋಪಯೋಗಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸತೀಶ್, 
 ಸಹಾಯಕ ಇಂಜಿನಿಯರ್ ಜಗದೀಶ್, 
ಗುತ್ತಿಗೆದಾರರಾದ ಅರವಿಂದ್ ಕುಮಾರ್, ಹಾಗೂ ಗ್ರಾಮಸ್ಥರು ರೈತ ಸಂಘದ ಮುಖಂಡರು ಹಾಜರಿದ್ದರು. 

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456