ಯಡಿಯೂರಪ್ಪ ಅಭಿಮಾನೋತ್ಸವ: ಕೆಜಿಎಫ್ನಿಂದ ನೂರಾರು ವಾಹನಗಳಲ್ಲಿ ಚಿತ್ರದುರ್ಗಕ್ಕೆ ತೆರಳಿದ ಬಿಜೆಪಿ ಪಡೆ
ಬೇತಮಂಗಲ: ರಾಜ್ಯ ರಾಜಕಾರಣದ ಧೀಮಂತ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ 50 ವರ್ಷಗಳ ಸುದೀರ್ಘ ರಾಜಕೀಯ ಪಯಣದ ಸಂಭ್ರಮದ ಅಂಗವಾಗಿ ಚಿತ್ರದುರ್ಗದಲ್ಲಿ ಆಯೋಜಿಸಲಾಗಿರುವ ಅಭಿಮಾನೋತ್ಸವ ಸಮಾವೇಶಕ್ಕೆ ಕೆಜಿಎಫ್ ವಿಧಾನಸಭಾ ಕ್ಷೇತ್ರದಿಂದ ನೂರಾರು ವಾಹನಗಳಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಇಂದು ತೆರಳಿದರು.
ಇಲ್ಲಿಗೆ ಸಮೀಪದ ಕ್ರಿಷ್ಣವರಮ್ ಹೈವೇ ನೈಸ್ ರೋಡ್ ಟೋಲ್ ಬಳಿ ನೂರಾರು ವಾಹನಗಳಿಗೆ ಕ್ಷೇತ್ರದ ಮಾಜಿ ಶಾಸಕ ವೈ ಸಂಪಂಗಿ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಚಾಲನೆ ನೀಡಿದರು. ಈ ವೇಳೆ ಬಿಜೆಪಿ ಮುಖಂಡ ವೆಂಕಟಾಚಲಪತಿ ಮಾತನಾಡಿ, ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯದಲ್ಲಿ ಬಿಜೆಪಿ ಕಟ್ಟಲು ಪಟ್ಟ ಶ್ರಮ ಅನನ್ಯ. ಅವರ 50 ವರ್ಷಗಳ ರಾಜಕೀಯ ಜೀವನ ನಮಗೆಲ್ಲರಿಗೂ ಪ್ರೇರಣೆ. ಅಮಿತ್ ಶಾ ಅವರು ಪಾಲ್ಗೊಳ್ಳುತ್ತಿರುವ ಈ ಐತಿಹಾಸಿಕ ಸಮಾವೇಶಕ್ಕೆ ಕೆಜಿಎಫ್ನಿಂದ 100 ವಾಹನಗಳೊಂದಿಗೆ 2000 ಸಂಖ್ಯೆಯ ಕಾರ್ಯಕರ್ತರು ತೆರಳುತ್ತಿರುವುದು ನಮ್ಮ ನಾಯಕರ ಮೇಲಿರುವ ಪ್ರೀತಿಯನ್ನು ತೋರಿಸುತ್ತದೆ ಎಂದು ತಿಳಿಸಿದರು.
ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಲಕ್ಷ್ಮೀ ನಾರಾಯಣ್ ಮಾತನಾಡಿ, ಯಡಿಯೂರಪ್ಪನವರು ಕೇವಲ ಒಬ್ಬ ನಾಯಕರಲ್ಲ, ಅವರು ಕರ್ನಾಟಕದ ರೈತ ಹೋರಾಟದ ಧ್ವನಿ. ಅವರ 50 ವರ್ಷಗಳ ಸಾಧನೆಯನ್ನು ಸಂಭ್ರಮಿಸಲು ನಾವು ಸ್ವಯಂಪ್ರೇರಿತರಾಗಿ ಕೆಜಿಎಫ್ನಿಂದ ನಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ಹೊರಟಿದ್ದೇವೆ ಯಡಿಯೂರಪ್ಪ ಅವರ ಮೇಲಿರುವ ಅಭಿಮಾನ ಹಾಗೂ ಮುಂಬರುವ ದಿನಗಳಲ್ಲಿ ಪಕ್ಷದ ಸಂಘಟನೆಯ ದೃಷ್ಟಿಯಿಂದ ಈ ಅಭಿಮಾನೋತ್ಸವ ವು ಕೆಜಿಎಫ್ ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ನಗರ ಘಟಕ ಅಧ್ಯಕ್ಷ ಸುರೇಶ್ ಗ್ರಾಮಾಂತರ ಅಧ್ಯಕ್ಷ ಲಕ್ಷ್ಮೀ ನಾರಾಯಣ್, ಸಮಾಜ ಸೇವಕ ಬಾಲಕೃಷ್ಣಪ್ಪ, ಮಾಜಿ ಗ್ರಾಪಂ ಅಧ್ಯಕ್ಷರಾದ ವೆಂಕಟಾಚಲಪತಿ ಸುನೀಲ್, ಮಾಜಿ ಗ್ರಾಪಂ ಸದಸ್ಯರಾದ ಪ್ರಸಾದ್, ನಾರಾಯಣ್ ಸ್ವಾಮಿ, ಓಂ ಸುರೇಶ್, ವೆಂಕಟೇಶ್, ಟಿಎಪಿಎಂಸಿಎಸ್ ನಿರ್ದೇಶಕ ಪುರುಷೋತ್ತಮ್, ಮುಖಂಡರಾದ ಮಂಜು ಪಂಡು, ಸುಧಾಕರ್ ರೆಡ್ಡಿ, ಅನಿಲ್, ಪಾಂಡ್ಯನ್, ಸೇರಿದಂತೆ ಕಾರ್ಯಕರ್ತರು ಹಾಗೂ ಉಪಸ್ಥಿತರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
