ರಾಮಲಿಂಗಪ್ಪ ಹುಟ್ಟುಹಬ್ಬ ಪ್ರಯುಕ್ತ ಅಭಿಮಾನಿಗಳಿಂದ ಅನ್ನದಾನ ಹಣ್ಣುಹಂಪಲು ವಿತರಣೆ
ಭಾಗ್ಯನಗರ: ಸುಮಾರು 20 ವರ್ಷಗಳಿಂದ ಕ್ಷೇತ್ರದಲ್ಲಿ ಹಲಾವಾರು ಸಮಾಜಮುಖಿ ಕೆಲಸಗಳು ಮಾಡಿ ಆಹಾರ ಕಿಟ್ಟುಗಳ ವಿತರಣೆ,ಮಹಿಳೆಯರಿಗೆ ಭಾಗಿನ ಅರ್ಪಣೆ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರಗಲು ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳಿಗೆ ಆರ್ಥಿಕ ನೇರವು ನೀಡುವುದು ಸೇರಿದಂತೆ ಅನೇಕ ರೀತಿಯಲ್ಲಿ ಸಮಾಜ ಸೇವೆ ಮಾಡುತ್ತಿರುವ ನಮ್ಮ ನೆಚ್ಚಿನ ನಾಯಕ ರಾಮಲಿಂಗಪ್ಪ ಅಣ್ಣನವರಿಗೆ ದೇವರು ಅರೋಗ್ಯ ಅಶ್ವರ್ಯ ನೀಡಿ ಕಾಪಾಡಲಿ ಎಂದು ಯುವ ಮುಖಂಡ ಪ್ರದೀಪ್ ಶುಭ ಹಾರೈಸಿದ್ದಾರೆ.
ಬಿಜೆಪಿ ಮಾಜಿ ಜಿಲ್ಲಾ ಅಧ್ಯಕ್ಷರ ರಾಮಲಿಂಗಪ್ಪ ನವರ ಹುಟ್ಟುಹಬ್ಬದ ಪ್ರಯುಕ್ತ ರಾಮಲಿಂಗಪ್ಪ ಅಭಿಮಾನಿ ಬಳಗದ ವತಿಯಿಂದ ಗೂಳೂರು ವೃತ್ತದಲ್ಲಿ ಬಡವರಿಗೆ ಅನ್ನದಾನ, ಸಾರ್ವಜನಿಕ ಆಸ್ಪತ್ರೆ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ,ರಥು ವೃದ್ದಾಶ್ರಮದ ವೃದ್ಧರಿಗೆ, ಅನ್ನದಾನ ಮತ್ತು ಹಣ್ಣು ಹಂಪಲು ವಿತರಣೆ ಮಾಡಿ ಮಾತನಾಡಿದ ಅವರು ರಾಮಲಿಂಗಪ್ಪ ಅಣ್ಣ ನವರಿಗೆ ದೇವರು ಆಯುರಾರೋಗ್ಯ, ರಾಜಕೀಯವಾಗಿ ಒಳ್ಳೆಯ ಐಶ್ವರ್ಯ, ನೀಡಲಿ ಎಂದು ಬಯಸುತ್ತೇನೆ ಎಂದರು.
ಈ ಸಂಧರ್ಭದಲ್ಲಿ ಬಿಜೆಪಿ ಮಹಿಳಾ ಮುಖಂಡರಾದ ವನಜಾಕ್ಷಿ, ಗಂಗುಳಮ್ಮ, ಮುಖಂಡರಾದ ಗೂಳೂರು ಲಕ್ಷೀನಾರಾಯಣ ರಾಯಲ್ ನರೇಶ್, ಮಂಜುನಾಥ್, ಲಾಯರ್ ಸತೀಶ್, ಪ್ರದೀಪ್, ಲೋಕೇಶ್,ಸೇರಿದಂತೆ ಮತ್ತಿತರರು ಇದ್ದರು.
What's Your Reaction?
Like
2
Dislike
0
Love
0
Funny
0
Angry
0
Sad
0
Wow
0
