ರಾಷ್ಟ್ರೀಯ ಲೋಕ ಅದಾಲತ್ ಸದ್ಬಳಕೆ ಮಾಡಿಕೊಳ್ಳಿ: ನ್ಯಾ. ಶಿವಕುಮಾರ್
ಕೆಜಿಎಫ್: ರಾಷ್ಟ್ರೀಯ ಲೋಕ ಅದಾಲತ್ ಸದ್ಬಳಿಕೆ ಮಾಡಿಕೊಳ್ಳಿ ತಮ್ಮ ಅಮೂಲ್ಯವಾದ ಸಮಯ ಮತ್ತು ಹಣವನ್ನು ಉಳಿಸಿ ಎಂದು ನ್ಯಾಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ, ಲೋಕ ಅದಾಲತ್ ಸಭೆಯಲ್ಲಿ 3ನೇ ಜಿಲ್ಲಾ ಅಪರ ಮತ್ತು ಸತ್ರ ನ್ಯಾಯಾಧೀಶರು. ಶಿವಕುಮಾರ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಮಾರ್ಚ್ 14 ಶನಿವಾರದಂದು ನಡೆಯುವ ಕಾರ್ಯಕ್ರಮದಲ್ಲಿ ಅರ್ಜಿ ಸಲ್ಲಿಸಿ ಕಕ್ಷಿಧಾರರು ತಮ್ಮ ವ್ಯಾಜ್ಯಗಳನ್ನು ಇತ್ಯರ್ಥ ಪಡೆಸಿಕೊಳ್ಳಿ. ಸಿವಿಲ್ ಹಾಗೂ ವೈವಾಹಿಕ. ಡೈವರ್ಸ್. ನಗರಸಭೆ. ವಿದ್ಯುತ್.
ದೂರವಾಣಿ ಬಿಲ್ಲುಗಳು. ಮೋಟಾರ್ ವಾಹನ ಕಾಯ್ದೆ. ಇನ್ಸೂರೆನ್ಸ್ ಸಂಬಂಧಿಸಿದ. ಕ್ರಿಮಿನಲ್ ಇತ್ಯಾದಿಪಡಿಸುವ ಕೇಸುಗಳನ್ನು ಸಂಬಂಧಿಸಿ ತಮ್ಮ ವಕೀಲರ ಹಾಗೂ ಮಧ್ಯವರ್ತಿಗಳ ಮೂಲಕ ಪರಿಹಾರಸಿಕೊಳ್ಳಿ ಎಂದು ತಿಳಿಸಿದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷರು. ಎಸ್. ಎನ್.ರಾಜಗೋಪಾಲ್ ಗೌಡ ಮಾತನಾಡಿ ನಾವು ಕಕ್ಷಿದಾರರ ಮನವಲಿಸುವ ಕೆಲಸ ಮಾಡಿಸಿ ವ್ಯಾಜ್ಯಗಳನ್ನು ಲೋಕ ಅದಾಲತ್ ಸಭೆಯಲ್ಲಿ ಇತ್ಯರ್ಥ ಗೊಳಿಸಿ ಇದರಲ್ಲಿ ವಕೀಲರ ಪಾತ್ರ ಬಹುಮುಖ್ಯ. ಇನ್ನೂ ಒಂದು ಸಹಿ ಸುದ್ದಿ, ಏನು ನಾವು ತಾಲೂಕನ್ನು ಬಿಟ್ಟು ಜಿಲ್ಲಾ ಕೋರ್ಟಿಗೆ ಎಸ್ಡಿಪಿಸಿ. ಹಾಗೂ ಅಟ್ರಾಸಿಟಿ ಹಾಗೂ 498. ಇಂತಹ ಪ್ರಕರಣಗಳಿಗೆ ಅಲೆದಾಡುತ್ತಿದ್ದೆವು. ಇನ್ನು ಈ ಕಷ್ಟ ತಪ್ಪಿದೆ. ನಮ್ಮ ತಾಲೂಕಿನಲ್ಲಿ ಪ್ರಕರಣವನ್ನು ವರ್ಗಾವಣೆ ಮಾಡಿಕೊಂಡು ಸ್ಥಳೀಯವಾಗಿ ನಡೆಸಬಹುದು. ಇದರಿಂದ ಯುವ ವಕೀಲರಿಗೆ ಮತ್ತಷ್ಟು ಅನುಕೂಲ ಎಂದರು. ಈ ಸಂದರ್ಭದಲ್ಲಿ ನ್ಯಾಯಾಧೀಶರಾದ . ಮುಜಫರ್ ಏ ಮಂಜರಿ. ಶಮಿಧಾ. ಜಯಲಕ್ಷ್ಮಿ. ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ. ಜ್ಯೋತಿ ಬಾಸು. ಉಪಾಧ್ಯಕ್ಷರು. ಕೆ. ಸಿ. ನಾಗರಾಜ್. ಮಹೇಂದ್ರನ್ ಇದ್ದರು.
What's Your Reaction?
Like
2
Dislike
0
Love
0
Funny
0
Angry
0
Sad
0
Wow
0
