ಲೋಕೋಪಯೋಗಿ ಗುತ್ತಿಗೆ ಟೆಂಡರ್ನಲ್ಲಿ ಮಾದಿಗ ಸಮುದಾಯಕ್ಕೆ ಅನ್ಯಾಯ: ರಾಜ್ಯಾಧ್ಯಕ್ಷ ಎಸ್. ಸಂಗಮೇಶ್ ಆರೋಪ
ಬೆಂಗಳೂರು, ದಿ: 14-03-2026 ರಾಜ್ಯದಲ್ಲಿ ಮಾದಿಗ ಸಮುದಾಯದ ಗುತ್ತಿಗೆದಾರರು ಸಲ್ಲಿಸಿರುವ ಹಲವಾರು ಟೆಂಡರ್ಗಳನ್ನು ಉದ್ದೇಶಪೂರ್ವಕವಾಗಿ ಓಪನ್ ಮಾಡದೇ ತಡೆಹಿಡಿಯಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಇದರಿಂದ ಸಾರ್ವಜನಿಕ ಕಾಮಗಾರಿಗಳು ವಿಳಂಬವಾಗುತ್ತಿದ್ದು. ಜನಸಾಮಾನ್ಯರಿಗೆ ತೊಂದರೆ ಉಂಟಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಮಾದಿಗ ಗುತ್ತಿಗೆದಾರರ ಸಂಘ ಆತಂಕ ವ್ಯಕ್ತಪಡಿಸಿದೆ.
ಕೆಲವು ಕಡೆಗಳಲ್ಲಿ ಮಾದಿಗ ಗುತ್ತಿಗೆದಾರರು ಸಲ್ಲಿಸಿರುವ ಟೆಂಡರ್ಗಳನ್ನು ರದ್ದುಪಡಿಸಿ ಬೇರೆ ಗುತ್ತಿಗೆದಾರರಿಗೆ ಕಾಮಗಾರಿಗಳನ್ನು ನೀಡಲಾಗುತ್ತಿದೆ ಎಂಬ ಆರೋಪವೂ ಕೇಳಿಬರುತ್ತಿದೆ. ಆದರೆ ಸಾರ್ವಜನಿಕ ಕಾಮಗಾರಿಗಳು ನಿಲ್ಲದಂತೆ ಮಾಡಲು, ಸರ್ಕಾರ ಟೆಂಡರ್ಗಳನ್ನು ರದ್ದುಪಡಿಸಿ ಬೇರೆ ಗುತ್ತಿಗೆದಾರರಿಗೆ ನೀಡಿದರೂ ಮಾದಿಗ ಗುತ್ತಿಗೆದಾರರು ಯಾವುದೇ ರೀತಿಯ ತೊಂದರೆ ನೀಡುವುದಿಲ್ಲ ಎಂದು ಸಂಘದ ರಾಜ್ಯಾಧ್ಯಕ್ಷರು ಡಾ. ಎಸ್. ಸಂಗಮೇಶ್ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆ (PWD) ಯಲ್ಲಿ ಮಾದಿಗ ಗುತ್ತಿಗೆದಾರರಿಗೆ ಗುತ್ತಿಗೆ ಪರವಾನಗಿ ನೀಡುವ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕೆಂದು ಸಂಘ ಸರ್ಕಾರಕ್ಕೆ ಮನವಿ ಮಾಡಿದೆ.
27 ರಂದು ನಡೆಯಲಿರುವ ರಾಜ್ಯ ಸಂಪುಟ ಸಭೆಯಲ್ಲಿ ಈ ವಿಷಯವನ್ನು ತುರ್ತಾಗಿ ಪರಿಗಣಿಸಿ ಸೂಕ್ತ ಆದೇಶ ಹೊರಡಿಸಬೇಕೆಂದು ಮುಖ್ಯಮಂತ್ರಿಗಳು, ಸಚಿವರು ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರಿಕಾ ಪ್ರಕಟಣೆಯ ಮೂಲಕ ಮನವಿ ಮಾಡಲಾಗಿದೆ.
ಮಾದಿಗ ಗುತ್ತಿಗೆದಾರರ ಬದುಕು ಮತ್ತು ಅವರ ಕುಟುಂಬಗಳನ್ನು ರಕ್ಷಿಸುವ ದೃಷ್ಟಿಯಿಂದ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಂಘ ಆಗ್ರಹಿಸಿದೆ.
ಕರ್ನಾಟಕ ರಾಜ್ಯ ಮಾದಿಗ ಗುತ್ತಿಗೆದಾರರ ಸಂಘ
ಗೌರವ ಅಧ್ಯಕ್ಷರು – ಶ್ರೀ ಜಿ. ಎಂ. ಬಬಲಾದ
ರಾಜ್ಯಾಧ್ಯಕ್ಷರು – ಡಾ. ಎಸ್. ಸಂಗಮೇಶ್
ಪ್ರಧಾನ ಕಾರ್ಯದರ್ಶಿ – ಶ್ರೀ ನಿಂಗರಾಜ ಗುಳೆ
ಸಂಘಟನಾ ಕಾರ್ಯದರ್ಶಿ – ಶ್ರೀ ಮಂಜುನಾಥ ಬಿ
ಖಜಾಂಜಿ – ಶ್ರೀ ಸುರೇಶ್ ಕಟ್ಟಿಮನಿ
ನಿರ್ದೇಶಕರು – ಶ್ರೀ ಭೀಮಾಶಂಕರ ಬಿಲ್ಲವ
ಕಾರ್ಯದರ್ಶಿ – ಶ್ರೀ ಚಂದಪ್ಪ ತಾಜನಪುರ
ಕಾನೂನು ಸಲಹೆಗಾರ – ಹನುಮೇಶ ಗುಂಡೂರ
ಕಾನೂನು ಸಲಹೆಗಾರರು – ಮೈಲಾರಪ್ಪ ಹೆಚ್. ಡಿ
What's Your Reaction?
Like
2
Dislike
0
Love
1
Funny
0
Angry
0
Sad
0
Wow
1
