ಆರೋಗ್ಯಕರ ಸಮಾಜಕ್ಕೆ ಶುದ್ಧ ನೀರು ಅಗತ್ಯ: ಶಾಸಕಿ ರೂಪಕಲಾ ಅವರಿಂದ ನೀರಿನ ಘಟಕ ಲೋಕಾರ್ಪಣೆ
ಬೇತಮಂಗಲ: ಗ್ರಾಮೀಣ ಭಾಗದ ಜನರ ಆರೋಗ್ಯದ ದೃಷ್ಟಿಯಿಂದ ಶುದ್ಧ ಕುಡಿಯುವ ನೀರು ಅತ್ಯಗತ್ಯವಾಗಿದ್ದು, ಈ ನಿಟ್ಟಿನಲ್ಲಿ ತಾಲ್ಲೂಕಿನ ಕೊಡಿಗೇನಹಳ್ಳಿ, ಸಿತಂಪಲ್ಲಿ, ದೊಡ್ಡಕಾರಿ, ಬಡಮಾಕನಹಳ್ಳಿ, ವಿರುಪಾಕ್ಷಿಪುರ, ಲಕ್ಷ್ಮೀ ಸಾಗರ ಈ ಮೇಲ್ಕಂಡ 6 ಗ್ರಾಮಗಳಲ್ಲಿ ಇಂದು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಶಾಸಕಿ ರೂಪಕಲಾ ಅವರು ಲೋಕಾರ್ಪಣೆಗೊಳಿಸಿದರು.
ಈ ವೇಳೆ ಶಾಸಕಿ ರೂಪಕಲಾ ಅವರು ಮಾತನಾಡಿ, ಗ್ರಾಮೀಣ ಭಾಗದ ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ಸಿಗಬೇಕು ಎಂಬುದು ನಮ್ಮ ಗುರಿ ಬೇಸಿಗೆ ಕಾಲದ ಅಭಾವದಿಂದ ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗಬಾರದು ಎಂಬ ನಿಟ್ಟಿನಲ್ಲಿ ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಪ್ರತಿ ಘಟಕವನ್ನು 12 ಲಕ್ಷ ವೆಚ್ಚದಲ್ಲಿ ತಾಲ್ಲೂಕಿನ ಗ್ರಾಮೀಣ ಹಾಗೂ ನಗರ ಭಾಗದಲ್ಲಿ ಹಂತ ಹಂತವಾಗಿ ಕುಡಿಯುವ ನೀರಿನ ಘಟಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ತಿಳಿಸಿದರು.
ಆರೋಗ್ಯಕ್ಕೆ ಆದ್ಯತೆ: ಫ್ಲೋರೈಡ್ಯುಕ್ತ ನೀರಿನಿಂದ ಬರುವ ಕಾಯಿಲೆಗಳನ್ನು ತಡೆಗಟ್ಟಲು ಹಳ್ಳಿ ಹಳ್ಳಿಗಳಲ್ಲಿ ಅತ್ಯಾಧುನಿಕ ಕ್ಷೇತ್ರದಲ್ಲಿ ಹಂತ ಹಂತವಾಗಿ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರಾಜ್, ಮುಖಂಡರಾದ ವಕೀಲ ಪದ್ಮನಾಭರೆಡ್ಡಿ, ಕೃಷ್ಣೆ ಗೌಡ ವೆಂಕಟಾಚಲಪತಿ, ಅಪ್ಪೋಜಿಗೌಡ, ಕಾರಿ ಪ್ರಸನ್ನ, ಮುರಳಿಕೃಷ್ಣ, ವಿಶ್ವನಾಥ್, ಕ್ರಷ್ಣಮೂರ್ತಿ, ಮುರಳಿ ಮಂಜುನಾಥ್, ವೆಂಕಟ್ರಾಮ್ ಸೇರಿದಂತೆ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
