ಕಾಂಗ್ರೆಸ್ ಮುಖಂಡ ವಳ್ಳಲ್ ಮುನಿಸ್ವಾಮಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆ
ಕೆಜಿಎಫ್: ಕಾಂಗ್ರೆಸ್ ಪಕ್ಷದ ಮುಖಂಡರು ನಗರಸಭೆ ಮಾಜಿ ಅಧ್ಯಕ್ಷರು. ವಳ್ಳಲ್ ಮುನಿಸ್ವಾಮಿ ರಾಜ್ಯಾಧ್ಯಕ್ಷರು. ವಿಜಯೇಂದ್ರ ಅವರ ಸಮ್ಮುಖದಲ್ಲಿ ಕೇಂದ್ರ ಕಚೇರಿ ಜಗನ್ನಾಥ್ ಭವನದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.
ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು ನಾನು ನಗರಸಭೆಯ ಅಧ್ಯಕ್ಷರಾಗಿ ಹಲವಾರು ಸಾರ್ವಜನಿಕ ಸೇವೆಗಳನ್ನು ಮಾಡಿಕೊಂಡ ಬಂದಿದ್ದು, ಎಲ್ಲರಿಗೂ ತಿಳಿದ ವಿಷಯ ಇತ್ತೀಚಿನ ದಿನಗಳಲ್ಲಿ
ಕಾಂಗ್ರೆಸ್ ಪಕ್ಷದಲ್ಲಿ ನನ್ನ ಸ್ವಾಭಿಮಾನಕ್ಕೆ ಧಕ್ಕೆ ಆಗಿದೆ ಅದರಿಂದ ನಾನು ಪಕ್ಷವನ್ನು ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದೆ. ನನ್ನ ಉದ್ದೇಶ ನನ್ನ ಕೆಜಿಎಫ್ ಜನತೆಗೆ ಒಳ್ಳೆಯದು ಮಾಡಬೇಕು ಅದರಲ್ಲಿ ಪ್ರಮುಖವಾಗಿ ಬಿಜಿಎಂಎಲ್ ಕಾರ್ಮಿಕರಿಗೆ ಮನೆಗಳನ್ನು ಸ್ವಂತ ಮಾಡಿಕೊಡಬೇಕು.
ಪಕ್ಷದ ಮುಖಂಡರೊಂದಿಗೆ ಕೇಂದ್ರ ಸರ್ಕಾರದೊಂದಿಗೆ ಮಾತನಾಡಿ ಪ್ರಧಾನಮಂತ್ರಿಯ ಅವಾಸ್ ಯೋಜನೆ ಅಡಿಯಲ್ಲಿ ಹಾಗೂ ನಗರಸಭೆಯ ಕಾಯ್ದೆ ಪ್ರಕಾರ ನಾವು ನಮ್ಮ ಕೈಯಲ್ಲಾದ ಸಹಾಯವನ್ನು ಮಾಡಿಕೊಡುತ್ತೇವೆ ಎಂದು ತಿಳಿಸಿದರು.
ಬಿಜೆಪಿ ಮಾಜಿ ಸಂಸದರು ಎಸ್. ಮುನಿಸ್ವಾಮಿ ಮಾತನಾಡಿ ಕೆಜಿಎಫ್ ನಗರದಲ್ಲಿ ಬಿಜೆಪಿ ಪಕ್ಷದಿಂದ ಬೃಹತ್ ಮಟ್ಟದಲ್ಲಿ ಸಮಾವೇಶ ಮಾಡಿ ಕಾಂಗ್ರೆಸ್ ಪಕ್ಷದಿಂದ ಪಕ್ಷವನ್ನು ತೊರೆದು ನಮ್ಮ ಪಕ್ಷ ನರೇಂದ್ರ ಮೋದಿ ನಾಯಕತ್ವವನ್ನು ಒಪ್ಪಿ ಯಾರು ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ ಅವರನ್ನು ಸ್ವಾಗತ ಮಾಡುವ ಮೂಲಕ ಪಕ್ಷವನ್ನು ಮತ್ತಷ್ಟು ಬಲಪಡಿಸಲು ಸಹಕಾರ ಆಗುತ್ತದೆ. ಮುಂದೆ ಬರುವ ಸ್ಥಳೀಯ ಚುನಾವಣೆಗಳಲ್ಲಿ ನಗರಸಭೆಯನ್ನು ನಮ್ಮ ವಶಕ್ಕೆ ಪಡೆದು ನಗರವನ್ನು ಮತ್ತಷ್ಟು ಅಭಿವೃದ್ಧಿಪಡಿಸುತ್ತೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಕಮಲನಾಥ್. ಪಾಂಡಿಯನ್. ಗಾಂಧಿ. ದೀನಾ. ಹಲವಾರು ಮುಖಂಡರು ಭಾಗವಹಿಸಿದ್ದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
