ಕೆಜಿಎಫ್ ಮಹಾಬೋಧಿ ಸೊಸೈಟಿಯಲ್ಲಿ ವೈಭವದಿಂದ ಬುದ್ಧ ಜಯಂತಿ ಆಚರಣೆ

May 12, 2025 - 17:28
 0  5
ಕೆಜಿಎಫ್ ಮಹಾಬೋಧಿ ಸೊಸೈಟಿಯಲ್ಲಿ ವೈಭವದಿಂದ ಬುದ್ಧ ಜಯಂತಿ ಆಚರಣೆ

ಕೆಜಿಎಫ್: ನಗರದ ಗೌತಮ ನಗರದಲ್ಲಿರುವ ಬುದ್ಧ ವಿಹಾರದಲ್ಲಿ ಮಹಾಬೋಧಿ ಅಶೋಕ ಧಮ್ಮ ದೂತ ಬುದ್ಧ ಸೊಸೈಟಿಯಲ್ಲಿ ಬುದ್ಧ ಜಯಂತಿಯನ್ನು ಸಂಭ್ರಮ ಸಡಗರದಿಂದ ಸೋಮವಾರ ಬೆಳಿಗ್ಗೆ ಆಚರಿಸಲಾಯಿತು.   95 ವರ್ಷದ ಉಪಾಸಕ ಅರ್ಜುನ್ ಅವರಿಂದ ಬೆಳಿಗ್ಗೆ 9 ಗಂಟೆಗೆ ವಿಶ್ವ ಶಾಂತಿ ಮತ್ತು ಸಂತೋಷಕ್ಕಾಗಿ ಬುದ್ಧ ಧ್ವಜಾರೋಹಣ ಮಾಡಿ ಬುದ್ಧ ಜಯಂತಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ನಂತರ ಮಹಾಬೋಧಿ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಹಾಗೂ ಸ್ಥಾನಿಕ ಭಿಕ್ಕು ಖೇಮಿಂಡೋ ಬಂತೇಜಿ ನೇತೃತ್ವದಲ್ಲಿ ಬೋಧಿ ಪೂಜೆಯನ್ನು ನೆರವೇರಿಸಲಾಯಿತು. ಗಂಗಾಧರಯ್ಯ ಸ್ಮಾರಕ ಧ್ಯಾನ ಮಂದಿರದಲ್ಲಿ ಬುದ್ಧ ಪೂಜೆ ಮಾಡಲಾಯಿತು. ಉಪಾಸಕ ಮತ್ತು ಉಪಾಸಕಿಯರಿಗೆ  ತಿಸರಣ, ಪಂಚಶೀಲ ಬೋಧಿಸಲಾಯಿತು. ನಂತರ ಧಮ್ಮೋಪದೇಶವನ್ನು ನೀಡಲಾಯಿತು.
      ಕಾರ್ಯಕ್ರಮದಲ್ಲಿ ಉಪಾಸಕರಾದ ಪ್ರತಾಪ್, ಗೌತಮ್, ಪ್ರಭುರಾಮ್, ಬೆಮೆಲ್ ಜಯಪ್ರಕಾಶ್, ಮಾದಿವಣ್ಣನ್ ದಂಪತಿಗಳು  ಜಯಪ್ರಕಾಶ್ ದಂಪತಿಗಳು, ಬೌದ್ಧ ಬಿಕ್ಕುಗಳು ಹಾಗೂ ನೂರಾರು ಉಪಾಸಕ ಉಪಾಸಕಿಯರು ಭಾಗವಹಿಸಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456