ರಂಗೋಲಿ ಚಿತ್ತಾರ ಪುಸ್ತಕ ಬಿಡುಗಡೆ
ಉದಯಿಸುವ ಸೂರ್ಯ ಕಿರಣಗಳೊಂದಿಗೆ ಪ್ರಕಾಶಮಾನವಾಗಿರುವನು. ನೋಡುಗರ ಮನಸ್ಸನ್ನು ಸೆಳೆಯುವನು. ತಾನೇ ಒಂದು ರಂಗೋಲಿಯಂತೆ ಕಂಗೊಳಿಸುವನು. ತನ್ನ ಬೆಳಕನ್ನು ಚದುರಿಸುವಲ್ಲಿ ಬಗೆ ಬಗೆಯ ಬಣ್ಣಗಳನ್ನು ಪಸರಿಸುವನು. ನೋಡುಗರ ಮನಸ್ಸನ್ನು ಸೂರೆಗೊಳಿಸುವನು. ತಾನೇ ಒಂದು ಅಪರೂಪದ ಚಿತ್ರವಾಗಿ ಕಂಗೊಳಿಸುವನು.
ಅದೇ ರೀತಿಯಾಗಿ ಶ್ರೀಮತಿ ರಮಾ ಕೆ ಕಲಘಟಗಿ ಅವರ ತಮ್ಮ ನಾಲ್ಕನೆಯ ಪುಸ್ತಕವಾದ "ರಂಗೋಲಿಯ ಚಿತ್ತಾರ" ಪುಸ್ತಕದಲ್ಲಿ ನಾನಾ ರೀತಿಯ ರಂಗೋಲಿಗಳ ಸಮೂಹವನ್ನು ನಾವು ಕಾಣಬಹುದು. ದೈವತ್ವ, ಪರಿಸರ, ದೇಶಪ್ರೇಮ, ಪ್ರೀತಿ ಮಮಕಾರ, ದೈವ ಲೀಲೆಗಳು, ನಾನಾ ದೇವರುಗಳ ರೂಪಗಳು, ನಾಡಿನ ಕಲೆ ಮತ್ತು ಸಂಸ್ಕೃತಿ ತೋರುವುದರಲ್ಲಿ ಈ ರಂಗೋಲಿಗಳು ಬಹಳ ಮುಖ್ಯ ಪಾತ್ರ ವಹಿಸುತ್ತವೆ. ಎಲ್ಲಾ ವರ್ಗದ ಜನರನ್ನು ಆಕರ್ಷಿಸುವುದರಲ್ಲಿ ಎರಡು ಮಾತಿಲ್ಲ. ಇವರ ಈ ಪುಸ್ತಕ ಎಲ್ಲರ ಕೈ ಸೇರಲೆಂದು ಮನಃಪೂರ್ತಿಯಾಗಿ ಹಾರೈಸುತ್ತೇನೆ. ಎಲ್ಲರೂ ಈ ಪುಸ್ತಕವನ್ನು ಕೊಂಡು ಅದರಲ್ಲಿರುವ ರಂಗೋಲಿ ಗಳನ್ನು ಕಲಿತು, ಅಳವಡಿಸಿಕೊಳ್ಳುವುದರಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಈ ಮೂಲಕ ತಿಳಿಸಲು ಇಚ್ಚಿಸುತ್ತೇನೆ. ಅಷ್ಟೇ ಅಲ್ಲದೆ ಇಂತಹ ರಂಗೋಲಿ ಪುಸ್ತಕ ಅಚ್ಚಾಗಿ ಉಳಿಯಲಿ. ಮುಂದಿನ ಯುವ ಜನರಿಗೆ ದಾರಿದೀಪವಾಗಲಿ ಮತ್ತು ಮಾಹಿತಿ ಪುಸ್ತಕ ವಾಗಲಿ ಎಂದು ಇಚ್ಚಿಸುತ್ತೇನೆ. ಅವರು ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡಲಿ ಎಂದು ಹಾರೈಸುತ್ತೇನೆ ಮತ್ತು ಅವರಿಗೆ ಅಭಿನಂದಿಸುತ್ತೇನೆ. ನನಗೆ ಬೆನ್ನುಡಿಯನ್ನು ಬರೆಯಲು ಅವಕಾಶ ಮಾಡಿಕೊಟ್ಟಿರುವ ಮೇಡಂ ಅವರಿಗೆ ತುಂಬು ಹೃದಯದ ಧನ್ಯವಾದಗಳು.
ಇಂತಿ
ಡಾ ಎಸ್ ವೀರೇಶ್ ಕುಮಾರ್
ರವಿಕಿರಣ ಕನ್ನಡ ಸಾಹಿತ್ಯ ಪರಿಷತ್ತು
ಸಂಸ್ಥಾಪಕರು ಅಧ್ಯಕ್ಷರು
What's Your Reaction?
Like
2
Dislike
0
Love
0
Funny
0
Angry
0
Sad
0
Wow
0
