ಶ್ರದ್ಧಾಭಕ್ತಿಯಿಂದ ನಡೆದ ಗ್ರಾಮ ದೇವತೆ ಗಂಗಮ್ಮ ದೇವಿ ಹೂವಿನ ಕರಗ

May 13, 2025 - 10:28
 0  6
ಶ್ರದ್ಧಾಭಕ್ತಿಯಿಂದ ನಡೆದ ಗ್ರಾಮ ದೇವತೆ ಗಂಗಮ್ಮ ದೇವಿ ಹೂವಿನ ಕರಗ

ಬಾಗೇಪಲ್ಲಿ: ಪ್ರತಿ ವರ್ಷದಂತೆ ಈ ವರ್ಷವೂ ಶ್ರದ್ಧಾಭಕ್ತಿಯಿಂದ ಗಂಗಮ್ಮ ದೇವಿಯ 37ನೇ ವರ್ಷದ ಹೂವಿನ ಕರಗ ಮಹೋತ್ಸವವು ಅದ್ದೂರಿಯಾಗಿ ನಡೆಯಿತು.

ಪಟ್ಟಣದ ಶ್ರೀ ಗಂಗಮ್ಮ ದೇವಾಲಯದಿಂದ ಹೂವಿನ ಕರಗ ಹೊತ್ತ ಮೇಲೂರಿನ ಧರ್ಮೇಂದ್ರರವರು ಶನಿವಾರ ರಾತ್ರಿಯೆಲ್ಲಾ ಪಟ್ಟಣದಲ್ಲಿ ಸುತ್ತಾಡಿ,ವಿವಿಧ ನೃತ್ಯಗಳನ್ನು ಮಾಡಿ, ಭಾನುವಾರ ಬೆಳಗ್ಗೆಯವರೆಗೂ ಪಟ್ಟಣ ಸುತ್ತಾಡಿದರು.   ಈ ಕರಗ ಮಹತ್ಸೋವವನ್ನು ಸಹಸ್ರಾರು ಭಕ್ತರು ಕಣ್ತುಂಬಿಕೊಂಡರು. ತಮಟೆ ಹಾಗೂ ವಾದ್ಯದ ನಾದಕ್ಕೆ ತಕ್ಕಂತೆ ಕರಗ ಹೊತ್ತವರು ಹೆಜ್ಜೆ ಹಾಕಿದರು.

ಶಾಸಕ ಎಸ್. ಎನ್.ಸುಬ್ಬಾರೆಡ್ಡಿ ಮತ್ತು ಶೀಲಾಸುಬ್ಬಾರೆಡ್ಡಿ ಯವರು ಶ್ರೀ ಗಂಗಮ್ಮ ದೇವಿಯ ಹೂವಿ ಕರಗಗೆ  ವಿಶೇಷ ಪೂಜೆ  ಸಲ್ಲಿಸಿ ಚಾಲನೆ ನೀಡಿದರು. ಈ ವೇಳೆ ದೇವಾಲಯದಿಂದ ಕರಗ ಹೊತ್ತ ವ್ಯಕ್ತಿ ಹೊರ ಬರುತ್ತಿದ್ದಂತೆ ವಹ್ನಿಕುಲದ ಕುಲಸ್ಥರು ಡಮರುಗದ ನಾದ ಹಾಗೂ ಗೆಜ್ಜೆ ಸಪ್ಪಳದ ಜೊತೆಗೆ ಭಕ್ತರು ಗೋವಿಂದ ಜಯಘೋಷ ಮೂಲಕ ಕರಗವನ್ನು ಸ್ವಾಗತಿಸಿದರು. ಇದೇ ವೇಳೆ ನೂರಾರು ಮಂದಿ ವೀರಕುಮಾರರು ಗೋವಿಂದ ಎನ್ನುತ್ತಾ ಕತ್ತಿಯಲ್ಲಿ ಎದೆಗೆ ಗೀಚಿಕೊಂಡು ಹಲಗು ಸೇವೆಯನ್ನ ಸಲ್ಲಿಸಿದರು.

ಇದೆ ಸಂಧರ್ಭದಲ್ಲಿ ಆಪರೇಷನ್ ಸಿಂಧೂರ ಯುದ್ಧದಲ್ಲಿ ವೀರ ಮರಣಹೊಂದ ಮುರಳಿ ನಾಯ್ಕ್ ಅವರಿಗೆ ಶಾಸಕ ಸುಬ್ಬಾ ರೆಡ್ಡಿ ಮತ್ತು ಅವರ ಅಭಿಮಾನಿಗಳು ಶ್ರದ್ಧಾಂಜಲಿ ವಹಿಸಿ ಮೌನ ಆಚರಿಸಿದರು

ಈ ಸಂದರ್ಭದಲ್ಲಿ ಗಂಗಮ್ಮ ದೇವಿ ಕರಗದ ಟ್ರಸ್ಟ್ ಪದಾಧಿಕಾರಿಗಳಾದ ನರಸಿಂಹ ನಾಯ್ಡು,ಎ.ಜಿ.ಸುಧಾಕರ್,ಆದಿಮೂರ್ತಿ,ಗಡ್ಡಂ ನರಸಪ್ಪ ಗೋಪಾಲ,ಸೂರ್ಯನಾರಾಯಣ,ವಾಲ್ಮೀಕಿ ಅಶ್ವತ್ಥಪ್ಪ,ಮರಿಯಪ್ಪ,ಪುರಸಭೆ  ಅಧ್ಯಕ್ಷ ಎ. ಶ್ರೀನಿವಾಸ್,ಸದಸ್ಯರಾದ ಎ.ನಂಜುಂಡಪ್ಪ, ಗಡ್ಡಂ ರಮೇಶ್,ಕಟ್ರಾಕ್ಟರ್ ವೆಂಕಟೇಶ್, ಇನ್ನಿತರರು ಪಾಲ್ಗೊಂಡಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456