ಸಮಾಜದ ಸ್ವಾಸ್ತ್ಯ ಕಾಪಾಡುವಲ್ಲಿ ಮಹಿಳೆಯರ ಪಾತ್ರ ದೊಡ್ಡದು
ಚಿಕ್ಕನಾಯಕನಹಳ್ಳಿ : "ಸಮಾಜದ ಸ್ವಾಸ್ತ್ಯ ಕಾಪಾಡುವಲ್ಲಿ ಮಹಿಳೆಯರ ಪಾತ್ರ ಬಹಳ ದೊಡ್ಡದು." ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಪ್ರೇಮಾನಂದ ಯಲ್. ಬಿ. ಯವರು ಹೇಳಿದರು. ಅವರು ಆಲದಕಟ್ಟೆಯ ಸೇವಾಲಾಲ್ ಜ್ಞಾನ ವಿಕಾಸ ಕೇಂದ್ರದಲ್ಲಿ ನಡೆದ ಸ್ವ ಉದ್ಯೋಗ ಪ್ರೇರಣಾಶಿಬಿರದಲ್ಲಿ ಮಾಹಿತಿ ನೀಡಿ ಈ ವಿಚಾರ ಹೇಳಿದರು. " ಒಂದು ಕಾಲದಲ್ಲಿ ಉದ್ಯೋಗಂ ಪುರುಷ ಲಕ್ಷಣಂ ಎಂಬ ಮಾತಿತ್ತು ಆದರೆ ಈಗ ಕಾಲ ಬದಲಾಗಿದೆ ಮಹಿಳೆಯರು ಪುರುಷರ ಸಮಾನವಾಗಿ ಬೆಳೆಯುವಷ್ಟರ ಪ್ರಭುದ್ದರಾಗಿದ್ದಾರೆ. ಅಡುಗೆ ಮನೆಯ ನಾಲ್ಕು ಗೋಡೆಯ ಮಧ್ಯದಿಂದ ಹೊರ ಪ್ರಪಂಚದ ಆಗು ಹೋಗುಗಳನ್ನು ನೋಡುವ ಮಹಿಳೆಯ ಸಬಲೀಕರಣವೇ ಯೋಜನೆಯ ಉದ್ದೇಶವಾಗಿದೆ. ಸ್ವ ಉದ್ಯೋಗ ಮಾಡುವ ಮೂಲಕ ಮಹಿಳೆಯರು ತಮ್ಮ ಕಾಲ ಮೇಲೆ ನಿಲ್ಲುವoತಾಗಬೇಕಿದೆ ಎಂದು ಹೇಳಿದರು. ಸಂಪನ್ಮೂಲವ್ಯಕ್ತಿ ರೂಪ ರವರು ಸೀರೆಗೆ ಕುಚ್ಚು ಹಾಕುವುದು, ಮ್ಯಾಟ್ ತಯಾರಿ, ಮನೆಯ ಅಲಂಕಾರಿಕ ವಸ್ತು ತಯಾರಿ, ಇತ್ಯಾದಿ ವಿಚಾರಗಳ ಬಗ್ಗೆ ಮಾಹಿತಿ ನೀಡಿದರು. ಉದ್ಘಾಟನೆಯನ್ನು ಗ್ರಾಮ ಪಂಚಾಯತ್ ಸದಸ್ಯರಾದ ಅನಸೂಯಾ ಮಾಡಿ ಶುಭ ಹಾರೈಸಿದರು. ಒಕ್ಕೂಟದ ಅಧ್ಯಕ್ಷರಾದ ರತ್ನ ಬಾಯಿ, ಮೇಲ್ವಿಚಾರಕಿ ಆಶಾ ಹಾಗೂ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು. ಜ್ಞಾನ ವಿಕಾಸ ಸಮನ್ವಯಧಿಕಾರಿ ಕವಿತ ಕಾರ್ಯಕ್ರಮ ನಿರೂಪಸಿದರು.ಸಾಮಾಜಿಕ ಕಾರ್ಯ ವಿಭಾಗದ ವಿದ್ಯಾರ್ಥಿಗಳಾದ ರಂಜನ್, ವೀಣಾ ಸಹಕಾರ ನೀಡಿದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
