ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಶಿವಮೊಗ್ಗ ವತಿಯಿಂದ ರಾಜ್ಯಮಟ್ಟದ ‘ಮಹಾನಾಯಕ ಕವಿಗೋಷ್ಠಿ

Apr 27, 2026 - 14:40
Apr 27, 2026 - 14:41
 0  28
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಶಿವಮೊಗ್ಗ ವತಿಯಿಂದ ರಾಜ್ಯಮಟ್ಟದ ‘ಮಹಾನಾಯಕ ಕವಿಗೋಷ್ಠಿ
ಸುದ್ದಿ ಕಿರಣ ನ್ಯೂಸ್ ಡೆಸ್ಕ್

ಅಂಬೇಡ್ಕರ್ ಸಾರ್ವಕಾಲಿಕ ಸಮಸಮಾಜದ ಪ್ರಜ್ಞೆ : ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್.ಉಪ್ಪಾರ್

ಶಿವಮೊಗ್ಗ : ಜಾತ್ಯಾತೀತವಾಗಿ, ಧರ್ಮಾತೀತವಾಗಿ ಅಂಬೇಡ್ಕರ್ ಸಾಮುದಾಯಿಕ ಚೈತನ್ಯವಾಗಿದ್ದಾರೆ. ಅವರು ಶೋಷಿತರ, ದಮನಿತರ, ಜನಸಾಮಾನ್ಯರ ಆಶಾಕಿರಣ, ಸಮಸಮಾಜದ ಪ್ರಜ್ಞೆಯಾಗಿದ್ದಾರೆ ಎಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬೆಂಗಳೂರಿನ ಅಧ್ಯಕ್ಷರಾದ ಕೊಟ್ರೇಶ್ ಎಸ್ ಉಪ್ಪಾರ್ ಅಭಿಪ್ರಾಯಪಟ್ಟರು.

ಅವರು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಶಿವಮೊಗ್ಗ ಜಿಲ್ಲಾ ಘಟಕ ನಗರದ ನವ್ಯಶ್ರೀ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಮಹಾನಾಯಕ ಕವಿಗೋಷ್ಠಿಯನ್ನು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮುಖೇನ ಉದ್ಘಾಟಿಸಿ ಮಾತನಾಡಿ ಇಂದು ಭಾರತದ ಮಹಾನಾಯಕ ಎಂದರೆ ಅಂಬೇಡ್ಕರ್. ಅವರೊಬ್ಬ ಸಂವಿಧಾನದ ಪಿತಾಮಹ ಮಾತ್ರವಲ್ಲ ರಾಜಕೀಯ. ಆರ್ಥಿಕ, ಸಾಮಾಜಿಕ, ಧಾರ್ಮಿಕ, ಪತ್ರಿಕೋದ್ಯಮ, ಕಾನೂನು ಕ್ಷೇತ್ರಗಳಲ್ಲಿ ಅಪರಿಮಿತವಾದ ಸೇವೆಯನ್ನು ಸಲ್ಲಿಸಿ ಭಾರತದ ಮಹಾ ನಾಯಕರಾಗಿದ್ದಾರೆ. ಭಾರತೀಯ ಎಲ್ಲಾ ಭಾಷೆಗಳ ಸಾಹಿತ್ಯದಲ್ಲಿಯೂ ಕಾವ್ಯವಾಗಿ, ಕಥೆಯಾಗಿ, ಕಾದಂಬರಿಯಾಗಿ ಹರಿದಾಡಿದ್ದಾರೆ. ಇವರ ಆದರ್ಶಗಳೇ ಬಂಡಾಯ ಸಾಹಿತ್ಯಕ್ಕೆ ಉತ್ತೇಜನ ನೀಡಿ ಹೊಸದೊಂದು ಪ್ರಕಾರ ಹುಟ್ಟಲು ಕಾರಣವಾಯಿತು. ಕಾವ್ಯ ತಳಸಮುದಾಯದ ಅಥವಾ ಸಮಾಜದ ಕಟ್ಟಕಡೆಯ ಜೀವನದ ತಲ್ಲಣಗಳಿಗೆ ಸ್ಪಂದಿಸುವಂತಿರಬೇಕು. ಕವಿಯಾದವನಿಗೆ ಕಾವ್ಯೇತಿಹಾಸದ ಅರಿವು ಮುಖ್ಯ. ನಮ್ಮ ಪೂರ್ವಜರ ಕಾವ್ಯಾಭ್ಯಾಸ ಅವಶ್ಯಕ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪತ್ರಕರ್ತ ಆರುಂಡಿ ಶ್ರೀನಿವಾಸ್ ಮಾತನಾಡಿ ಒಂದು ಕಾಲದಲ್ಲಿ ಅಂಬೇಡ್ಕರ್ ಅವರನ್ನು ಸಂಪೂರ್ಣ ವಿರೋಧ ಮಾಡುತ್ತಿದ್ದ ಕೆಲವು ಸಂಘಟನೆಗಳು ಕೆಲವು ಜಾತಿಯವರು ಇಂದು ಅಂಬೇಡ್ಕರ್ ಜಯಂತಿಯನ್ನು ಆಚರಿಸುತ್ತ ಅಂಬೇಡ್ಕರ್ ಅವರನ್ನು ತಮ್ಮವರು ಎಂದು ಗುರುತಿಸಿಕೊಳ್ಳುತ್ತಿದ್ದಾರೆ ಇದು ಅಂಬೇಡ್ಕರ್ ರವರ ಮಹಾನ್ ವ್ಯಕ್ತಿತ್ವವನ್ನು ತೋರಿಸುತ್ತದೆ ಎಂದರು.

 

ಮತ್ತೋರ್ವ ಮುಖ್ಯ ಅತಿಥಿ ಹಾಗೂ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಕೆ. ಜಿ ವೆಂಕಟೇಶ್ ಮಾತನಾಡಿ ಅಂಬೇಡ್ಕರ್ ಅವರ ಶೂದ್ರರು ಯಾರು ಎಂಬ ಪುಸ್ತಕವನ್ನು ಈ ಸಾರಿ ಮತ್ತೊಮ್ಮೆ ನಾನು ಓದಿದೆ ನಾವೆಲ್ಲಾ ಎಷ್ಟೊಂದು ಮೂಡನಂಬಿಕೆ ಯಿಂದ ಇದುವರೆಗೆ ಜೀವನ ಸಾಗಿಸಿದ್ದೇವೆ ಎಂದು ಅರ್ಥವಾಯಿತು,ಎಂದ ಅವರು ೩೫ ಜನ ಕವಿಗಳ ಕವನಗಳನ್ನು ಒಂದೊಂದು ಸಾಲಿನಲ್ಲಿ ವಿಮರ್ಶೆ ಮಾಡಿ ಗದ್ಯ ಮತ್ತು ಪದ್ಯದ ವ್ಯತ್ಯಾಸ ತಿಳಿಸಿ ಅನೇಕ ಕವಿಗಳ ಕವಿತೆ ವಿಷಯವನ್ನು ಹೇಳಿದ್ದರು ಕೂಡ ಗದ್ಯಶೈಲಿಯಲ್ಲಿದೆ ಅದನ್ನು ಬದಲಿಸಿಕೊಳ್ಳಬೇಕು ಎಂದು ಹೇಳಿ ಅಂಬೇಡ್ಕರ್ ರವರಂತ ನಾಯಕರ ಬಗ್ಗೆ ೩೫ ಕವನಗಳು ಬಂದಿರುವುದೇ ಅಂಬೇಡ್ಕರ್ ನಮ್ಮ ನಡುವೆ ಜೀವಂತವಾಗಿದ್ದಾರೆ ಎಂಬುದಕ್ಕೆ ಸಾಕ್ಷಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ.ಎಚ್.ಕೆ. ಹಸೀನಾ ರವರು ಮಾತನಾಡಿ ನಮ್ಮ ಕಾರ್ಯಕ್ರಮಕ್ಕೆ ಬೀದರ್ ಗುಲ್ಬರ್ಗ ರಾಯಚೂರು ಜಿಲ್ಲೆಯಿಂದ ಕೊಡಗು ಮಂಗಳೂರು ಜಿಲ್ಲೆಯಿಂದ ಕವಿಗಳು ಆಗಮಿಸಿದ್ದು ತುಂಬಾ ಸಂತೋಷ ತಂದಿದೆ. ಈ ರೀತಿ ಕವಿಗೋಷ್ಠಿ ನಡೆಯುವುದಕ್ಕೆ ನಮ್ಮ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ರಾಜ್ಯಾಧ್ಯಕ್ಷರಾದ ಕೊಟ್ರೇಶ್ ರವರು ನೀಡಿದ ಪ್ರೋತ್ಸಾಹವೇ ಕಾರಣ ಎಂದು ಹೇಳಿದರು. ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಬಂದ ಸುಮಾರು ೨೦ಕ್ಕೂ ಹೆಚ್ಚು ಸಾಧಕರನ್ನು ಸನ್ಮಾನಿಸಿದರು. ಕೇಂದ್ರ ಸಮಿತಿಯ ಟ್ರಷ್ಠಿಗಳಾದ ವಾಸು ಸಮುದ್ರವಳ್ಳಿ, ಸಂಪನ್ಮೂಲ ವ್ಯಕ್ತಿಗಳಾದ ಪ್ರತಿಭಾ ಸುದರ್ಶನ, ರೂಪ ಹರಿಹರ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದ ವಿಶೇಷ ಸಂಪನ್ಮೂಲ ವ್ಯಕ್ತಿಗಳಾದ ರೂಪ ಹರಿಹರ ಹಾಗೂ ಪ್ರತಿಭಾ ಸುದರ್ಶನ್ ಹಾಸನಗಳನ್ನು ವಿಶೇಷವಾಗಿ ಸನ್ಮಾನಿಸಿದರು.

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ತಿಪಟೂರು ತಾಲ್ಲೂಕು ಅಧ್ಯಕ್ಷೆ ಲತಮಾಣಿ ಎಂ.ಕೆ.ತುರುವೇಕೆರೆ ನಿರೂಪಿಸಿದರು, ಕವಯಿತ್ರಿ ಮಮತಾ ಎಚ್.ಎಂ.ನ್ಯಾಮತಿ ಸ್ವಾಗತಿಸಿದರು, ಕುವೆಂಪು ವಿವಿ ಪ್ರಥಮ ವರ್ಷದ ಎಂ.ಎ. ಇತಿಹಾಸ & ಪ್ರಾಕ್ತನಶಾಸ್ತç ವಿಭಾಗದ ವಿದ್ಯಾರ್ಥಿನಿ ಪ್ರಿಯದರ್ಶಿನಿ ಸ್ವಾಗತ ನೃತ್ಯ ಮಾಡಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456