ಪ್ರೇಕ್ಷಕರ ಮನಸೆಳೆದ ಆವನಿ ಗಾಯನ 

Jan 11, 2026 - 17:19
 0  4
ಪ್ರೇಕ್ಷಕರ ಮನಸೆಳೆದ ಆವನಿ ಗಾಯನ 

ಬೆಂಗಳೂರು : ಸುಧೀಂದ್ರನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಜರುಗುತ್ತಿರುವ ಶ್ರೀ ಪುರಂದರದಾಸರ ಆರಾಧನಾ ಮಹೋತ್ಸವದ ಕಾರ್ಯಕ್ರಮದಲ್ಲಿ ಕು|| ಅವನಿ ಭಟ್ "ಹರಿದಾಸ ವೈಭವ" ಶೀರ್ಷಿಕೆಯಲ್ಲಿ ಗಾಯನ ಕಾರ್ಯಕ್ರಮ ನಡೆಸಿಕೊಟ್ಟಳು. 
ಶ್ರೀ ಪುರಂದರದಾಸರ "ವಂದಿಸುವುದಾದಿಯಲಿ ಗಣನಾಥನ" ಎಂಬ ಗಣೇಶನ ಕೃತಿಯೊಂದಿಗೆ ಕಾರ್ಯಕ್ರಮ ಆರಂಭಿಸಿದ ಅವನಿ "ಗುರು ಪುರಂದರದಾಸರೆ" "ತುಂಗಾ ತೀರದಿ" "ಶಿವ ದರುಶನಕೆ" "ಪವಮಾನ" "ಭಾಗ್ಯದ ಲಕ್ಷ್ಮಿ ಬಾರಮ್ಮ" "ಅಂಬಿಗಾ ನಾ ನಿನ್ನ ನಂಬಿದೆ" "ತೋಳು ತೋಳು ತೋಳು ರಂಗ" ಹೀಗೆ ಒಂದರ ನಂತರ ಒಂದು ಬಿಡುವಿಲ್ಲದೆ ಸುಮಾರು ಎರಡು ಗಂಟೆಗಳ ಕಾಲ ನಿರರ್ಗಳವಾಗಿ ಹಾಡಿದಳು. ಶ್ರೀ ಪ್ರಸನ್ನವೆಂಕಟದಾಸರ "ಎಂಥಾ ಶ್ರೀಮಂತನಂತನೋ" ಹಾಗೂ ಶ್ರೀ ವಾದಿರಾಜರ ತುಳು ಭಾಷೆಯ "ಲೇ ಲೇ ಲೇ ಲೇ ಲೇಗ" ಎಂಬ ಎರಡೂ ಕ್ಲಿಷ್ಟಕರವಾದ ಹಾಡುಗಳನ್ನು ಸುಲಲಿತವಾಗಿ ಹಾಡಿ ನೆರೆದಿದ್ದ ಪ್ರೇಕ್ಷಕರ ಮನಸೂರೆಗೊಂಡಳು.
ಜಿಗಣಿಯ ನಿವಾಸಿ ಶ್ರೀ ಕಾರ್ತಿಕ್ ಮತ್ತು ಶ್ರೀಮತಿ ಚೇತನರವರ ಜೇಷ್ಠ ಪುತ್ರಿ ಕು|| ಅವನಿ ಭಟ್ ಅಚೀವರ್ಸ್ ಅಕಾಡೆಮಿ ಶಾಲೆಯಲ್ಲಿ ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ಸಂಗೀತವನ್ನು ವಿದ್ವಾನ್ ಶ್ರೀ ಈಶ್ವರ ಭಟ್ ಕಾಂಚನ ಅವರ ಹತ್ತಿರ ಕಲಿಯುತ್ತಿದ್ದಾಳೆ. ಸಂಗೀತವಷ್ಟೇ ಅಲ್ಲದೆ ಭರತನಾಟ್ಯವನ್ನೂ ಕಲಿಯುತ್ತಿರುವ ಅವನಿ ಇದೇ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಜೂನಿಯರ್ ಪರೀಕ್ಷೆ ಬರೆಯಲಿದ್ದಾಳೆ. ಪ್ರಸ್ತುತ ಕೀಬೋರ್ಡ್ ವಾದನದಲ್ಲಿ ಕೂಡಾ ಆಸಕ್ತಿಹೊಂದಿದ್ದು ಅದನ್ನೂ ಅಭ್ಯಾಸ ಮಾಡುತ್ತಿದ್ದಾಳೆ. 

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456