ಸೊಳ್ಳೆಗಳ ಉತ್ಪಾದನ ತಾಣವಾದ ಚಿಕ್ಕ ಮಂದಗರೆ ಗ್ರಾಮ ಗ್ರಾಮಸ್ಥರಿಂದ ಪಿ.ಡಿ.ಓ ವಿರುದ್ದ ಹಿಡಿ ಶಾಪ

Jul 19, 2025 - 15:09
 0  5
ಸೊಳ್ಳೆಗಳ ಉತ್ಪಾದನ ತಾಣವಾದ ಚಿಕ್ಕ ಮಂದಗರೆ ಗ್ರಾಮ ಗ್ರಾಮಸ್ಥರಿಂದ ಪಿ.ಡಿ.ಓ ವಿರುದ್ದ ಹಿಡಿ ಶಾಪ

ಕೃಷ್ಣರಾಜಪೇಟೆ ತಾಲ್ಲೂಕಿನ ಚಿಕ್ಕಮಂದಗರೆ ಗ್ರಾಮದ ಬಹುತೇಕ  ಪ್ರಮುಖ ರಸ್ತೆ ಬದಿಯ ಗಿಡ ಗಂಟೆಗಳು ಬೆಳೆದು ನಿಂತಿದ್ದು  ಚರಂಡಿಗಳು ಗಬ್ಬೆದ್ದು ನಾರುತ್ತಿದ್ದು, ರಸ್ತೆ ಮೇಲೆ ಕೊಳಚೆ ನೀರು ಹರಿಯುತ್ತಿದ್ದು ಗ್ರಾಮಸ್ಥರ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಗ್ರಾಮ ಪಂಚಾಯಿತಿಗೆ ಸಾಕಷ್ಟು ಅನುದಾನ ಬಂದಿದ್ದರೂ ಚಿಕ್ಕಮಂದಗೆರೆ ಗ್ರಾಮದ ಬಗ್ಗೆ  ಗ್ರಾಮ‌ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಕೆಲಸ ಆಗುತ್ತಿಲ್ಲ. ಶಾಲೆಯ ಅಕ್ಕ ಪಕ್ಕದ, ಮತ್ತು ಗ್ರಾಮದ ಪ್ರಮುಖ ರಸ್ತೆ ಬದಿಯಲ್ಲಿ  ಚರಂಡಿಗಳಲ್ಲಿ  ಕೊಳಚೆ ನೀರು ಶೇಖರಣೆ ಆಗಿದ್ದು ಇದರಿಂದ ಸೊಳ್ಳೆಗಳ ಉತ್ಪಾದನೆ ಹೆಚ್ಚಾಗುತ್ತಿದ್ದು ಇದರಿಂದ ಸಾರ್ವಜನಿಕರಿಗೆ ಮಾರಕ ಖಾಯಿಲೆಗಳು ಹೆಚ್ಚಾಗುವ ಸಾದ್ಯತೆ ಇದೆ ಕೊಡಲೇ ರಸ್ತೆ ಅಭಿವೃದ್ಧಿ ಮತ್ತು ಚರಂಡಿಗಳನ್ನು ಸರಿ ಪಡಿಸುವಂತೆ ಅಧಿಕಾರಗಳ ವಿರುದ್ದ ಆಕ್ರೋಷ ವೈಕ್ತಪಡಿಸಿದ್ರು..

ಅದಲ್ಲದೆ ಜಲಜೀವನ್ ಯೋಜನೆಯಡಿ ಕುಡಿಯುವ ನೀರಿನ  ಪೈಪ್ ಅಳವಡಿಕೆ ಮಾಡಿದ್ದು ಕಲಸ ಮುಗಿದು ಕೇಲವೇ ದಿನಗಳಲ್ಲಿ‌ ಬಹುತೇಕ ಪೈಪ್ಗಳು ಹೊಡೆದು ಹೋಗಿದ್ದು ರಸ್ತೆಯಲ್ಲಿ ದಿನನಿತ್ಯ ನೀರು ಪೋಲಾಗುತ್ತಿದ್ದು ಇದರ ಬಗ್ಗೆ ತಿಳಿದ್ರು ಅಧಿಕಾರಿಗಳು ಜಾಣ ನಿದ್ರೆಗೆ ಜಾರಿದ್ದಾರೆ.
 
ಚಿಕ್ಕಂದಗರೆ ಗ್ರಾಮದ ಕೆರೆಯ ಹೋಳೆತ್ತವ ಕಾಮಗಾರಿ ಮಾಡುವುದಾಗಿ  ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸುವರ್ಣ ಮತ್ತು ನರೇಗಾ  ಇಂಜಿನಿಯರ್ ಪಾರ್ಥ ಮತ್ತು ಗುತ್ತಿಗೆದಾರರು ಶಾಮೀಲಾಗಿ ಜೆ.ಸಿ.ಬಿ ಯಂತ್ರದ ಮೂಲಕ ಕೆಲಸ ಮಾಡಿ ಲಕ್ಷಾಂತರ ರೂಪಾಯಿಗಳನ್ನು ಸರ್ಕಾರಕ್ಕೆ ದೋಖಾ ಮಾಡಿದ್ದಾರೆ..  ಆದರೆ ಚಿಕ್ಕ‌ಮಂದಗೆರೆ ಗ್ರಾಮದಲ್ಲಿ ಯಾವುದೇ ಕೆರೆಯೇ ಇಲ್ಲ ಆದರೆ ನಮ್ಮ‌ ಗ್ರಾಮದ ಹೆಸರು ಬಳಿಸಿಕೊಂಡು ಬೇವನಹಳ್ಳಿ ಗ್ರಾಮದಲ್ಲಿ ಕೆರೆಯಲ್ಲಿ‌ ನಾಲ್ಕು ಬೋರ್ಡ್ಗಳನ್ನು ಅಳವಡಿಸಿ ಉದ್ಯೋಗ ಖಾತರಿ ಯೋಜನೆಯಡೆ ಲಕ್ಷಾಂತರ ರೂಪಾಯಿಗಳನ್ನು ಕೊಳ್ಳೇ ಹೊಡಿದ್ದಿದ್ದಾರೆ ಇದರ ಬಗ್ಗೆ ಕೇಳಿದ್ರೆ ನಮ್ಮ ಮೇಲೆ ಪೋಲೀಸ್ ರವರಿಗೆ ದೂರು ನೀಡಿ ಬೆದರಿಕೆ ಹಾಕುತ್ತಾ ಇದ್ದಾರೆ ಈ‌ ಕಾಮಗಾರಿಗಳ ವಿರುದ್ದ ಸೂಕ್ತ ತನಿಖೆ ನೆಡೆಸಿ ಸೂಕ್ತ ಕ್ರಮ‌ ಜರುಗಿಸಬೇಕಾಗಿ ಚಿಕ್ಕ ಮಂದಗರೆ ಗ್ರಾಮದ ಯುವ ಮುಖಂಡ ಭರತ್ ಆಕ್ರೋಷ ವೈಕ್ತಪಡಿಸಿದ್ರು..

ಈ ಹಿಂದೆ ಕೆರೆ ಅಭಿವೃದ್ಧಿ ಬಗ್ಗೆ ಗ್ರಾಮ ಪಂಚಾಯತಿಯಲ್ಲಿ ಕ್ರೀಯಾ ಯೋಜನೆ ಮಾಡಲಾಗಿದ್ದು ನಾನು ಅಧ್ಯಕ್ಷೆಯಾದ ಮೇಲೆ ಈ ಕಾಮಗಾರಿಗಳು ಜೆ.ಸಿ.ಬಿ ಯಂತ್ರದಲ್ಲಿ‌ ಮಾಡಿದ್ದಾರೆ ಎಂಬ ದೂರಿನ ಮೇಲೆ ಕೂಲಿ ಹಣವನ್ನು ಬಿಡುಗಡೆ ಮಾಡಲು ಬೆರಳಚ್ಚು ನೀಡುತ್ತಿಲ್ಲ ಇದಕ್ಕೆ ಕೆಲವರು ಅಧ್ಯಕ್ಷರು ವಿವಿಧ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿದ್ರು ನಾನು ಇದಕ್ಕೆಲ್ಲಾ ಎದುರೋದಿಲ್ಲ  ಸರಿಯಾದ ರೀತಿಯಲ್ಲಿ ಕಾಮಗಾರಿ ನೆಡೆಸಿದ್ರೆ ಮಾತ್ರ ಬಿಲ್ ಮಾಡಲು ಅವಕಾಶ ನೀವುದಾಗಿ ಗ್ರಾಮ ಪಂಚಾಯತಿ ಅಧ್ಯಕ್ಷೆ ನಂದಿನಿ ಮಂಜೇಗೌಡ ತಿಳಿಸಿದ್ರು


ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಮಂಜೇಗೌಡ, ಯುವ ಮುಖಂಡ ಭರತ್, ಆನಂದ, ನವೀನ, ಧರಣಿ, ಸುನೀಲ್, ಶ್ರೀಧರ್, ಯೋಗ, ಮುತ್ತೇಗೌಡ, ಮತ್ತಿತ್ತರು ಇದ್ದರು

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456