ಅವರೆ ಬೇಳೆ ಮೇಳ. ವಸ್ತ್ರಂ ಬೃಹತ್ ಪ್ರದರ್ಶನ ವೀಕ್ಷಿಸಲು ಸಾಗರದಂತೆ ಹರಿದು ಬಂದ ಮಹಿಳೆಯರು
ಶಾಸಕ ಹೆಚ್.ಟಿ.ಮಂಜು ಅವರ ಧರ್ಮಪತ್ನಿ ರಮಾ ಮಂಜು ಅವರು ಅವರೇಬೇಳೆ ಮೇಳದ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿ ಮಾತನಾಡಿದರು ಕೆ.ಆರ್.ಪೇಟೆ ಪಟ್ಟಣದಲ್ಲಿ ಇದೇ ಮೊದಲ ಬಾರಿಗೆ ಅವರೇ ಬೇಳೆ ಮೇಳವು ನಡೆಯುತ್ತಿರುವುದು ಸಂತೋಷ ತಂದಿದೆ.
ಅವರೇ ಬೆಳೆಯನ್ನು ಬಳಸಿ ವಿವಿಧ ಬಗೆಯ ತಿಂಡಿ ತಿನಿಸುಗಳನ್ನು ತಯಾರಿಸಿ ಸ್ಥಳದಲ್ಲಿಯೇ ಬಿಸಿ ಬಿಸಿಯಾಗಿ ತಯಾರಿಸಿ ನೀಡಲಾಗುತ್ತಿದೆ, ಹೆಣ್ಣು ಮಕ್ಕಳ ಅವಶ್ಯಕತೆಗಳಿಗೆ ಪೂರಕವಾದ ಮೈಸೂರು ಸಿಲ್ಕ್ ರೇಷ್ಮೆ ಸೀರೆಗಳು, ಕುರ್ತೀಗಳು , ಚೂಡಿದಾರ್, ಲೆದರ್ ಬ್ಯಾಗ್, ಗೊಂಬೆಗಳು, ಕರಕುಶಲ ಉತ್ಪನ್ನಗಳು, ಪರಿಶುದ್ಧವಾದ ಕೂರ್ಗ್ ಜೇನು, ಸಾವಯವ ಉತ್ಪನ್ನಗಳು ಸೇರಿದಂತೆ ವಸ್ತ್ರಂ ಲೈಫ್ ಸ್ಟೈಲ್ ಪ್ರದರ್ಶನವನ್ನು ಕೂಡ ಏರ್ಪಡಿಸಿರುವುದು ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಸಂತೋಷ ತಂದಿದೆ.
ಕೃಷ್ಣರಾಜಪೇಟೆ ತಾಲೂಕಿನ ಜನರು ಈ ಮೇಳ ಮತ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾರಿ ರಿಯಾಯಿತಿ ದರದಲ್ಲಿ ದೊರೆಯುತ್ತಿರುವ ಉತ್ಪನ್ನಗಳನ್ನು ಖರೀದಿಸಿ ಸಂಭ್ರಮಿಸಬೇಕು ಎಂದು ರಮಾ ಮಂಜು ಮನವಿ ಮಾಡಿದರು.
ಮಂಡ್ಯ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ನಾಗರತ್ನಮ್ಮ ಸುಬ್ಬಣ್ಣ, ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಮಾಲಾಶ್ರೀ ಗೌಡ ಪಾಟೀಲ್, ಮಂಡ್ಯ ಜಿಲ್ಲಾ ಪಡಿತರ ವಿತರಕರ ಸಂಘದ ಗೌರವಾಧ್ಯಕ್ಷ ಡಾ.ಅಂಚನಹಳ್ಳಿ ಸುಬ್ಬಣ್ಣ, ಪಟ್ಟಣ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸುಮಾರಾಣಿ, ಮಹಿಳಾ ಹೋರಾಟಗಾರ್ತಿ ಮತ್ತಿಘಟ್ಟ ಲತಾ, ರಾಜೇಶ್ವರಿ ಪ್ರೇಮಕುಮಾರ್, ಪುರಸಭಾ ಸದಸ್ಯ ಕೆ.ಆರ್.ನೀಲಕಂಠ, ಆಮಿನ ಬಾನು ಕಲೀಲ್ ಅವರೆಬೇಳೆ ಮೇಳ ಹಾಗೂ ಬೃಹತ್ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು.
What's Your Reaction?
Like
2
Dislike
0
Love
0
Funny
0
Angry
0
Sad
0
Wow
0
