ಕರ್ನಾಟಕ ಮಾದಿಗ ಯುವ ಸಮೂಹದ 2ನೇ ತುರ್ತು ರಾಜ್ಯ ಮಟ್ಟದ ಸಭೆ
ಬೆಂಗಳೂರು :ಕರ್ನಾಟಕ ರಾಜ್ಯ ಮಾದಿಗ ಯುವ ಸಮೂಹದ ವತಿಯಿಂದ 2ನೇ ತುರ್ತು ರಾಜ್ಯ ಮಟ್ಟದ ಸಭೆಯನ್ನು ದಿನಾಂಕ 29-03-2026 ರಂದು ಲಿಡ್ಕರ್ ಭವನ, ವಸಂತನಗರ, ಬೆಂಗಳೂರಿನಲ್ಲಿ ಯಶಸ್ವಿಯಾಗಿ ನಡೆಸಲಾಯಿತು.
ಈ ಸಭೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ 150ಕ್ಕೂ ಹೆಚ್ಚು ಯುವಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ಸಭೆಗೆ ಉತ್ಸಾಹ ತುಂಬಿದರು.
ಸಭೆಯಲ್ಲಿ ಪ್ರಮುಖವಾಗಿ ಒಳಮೀಸಲಾತಿ ವಿಷಯದಲ್ಲಿ ಮುಂದಿನ ಹೋರಾಟದ ಸ್ಪಷ್ಟ ದಿಕ್ಕು, ತೀರ್ಮಾನಗಳು ಹಾಗೂ ಕಾರ್ಯಯೋಜನೆಗಳನ್ನು ಅಂತಿಮಗೊಳಿಸಲಾಯಿತು. ಜೊತೆಗೆ, ನಡೆಯಲಿರುವ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸುವ ನಿಟ್ಟಿನಲ್ಲಿ ಮಾದಿಗ ಯುವ ಸಮೂಹ ಸಕ್ರಿಯವಾಗಿ ಕಾರ್ಯನಿರ್ವಹಿಸುವುದಾಗಿ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ.
ಇದರ ಅಂಗವಾಗಿ, ಬಾಗಲಕೋಟೆ ಮತ್ತು ದಾವಣಗೆರೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸುವ ನಿಟ್ಟಿನಲ್ಲಿ ಯುವ ಹೋರಾಟಗಾರರನ್ನು ಸಂಘಟಿಸಿ, “ಚಲೋ ಬಾಗಲಕೋಟೆ – ಚಲೋ ದಾವಣಗೆರೆ” ಅಭಿಯಾನಕ್ಕೆ ಸಂಯೋಜಕರಾದ ಶ್ರೀ ಎಸ್. ಸಂಗಮೇಶ್ ಅವರು ಚಾಲನೆ ನೀಡಿದ್ದಾರೆ.
ಆದ್ದರಿಂದ ರಾಜ್ಯ, ಜಿಲ್ಲೆ, ತಾಲ್ಲೂಕು ಮಟ್ಟದ ಎಲ್ಲಾ ಯುವ ಮುಖಂಡರು, ಯುವಕರು, ಯುವತಿಯರು ಹಾಗೂ ವಿದ್ಯಾರ್ಥಿಗಳು ಇನ್ನಷ್ಟು ಸಂಘಟಿತರಾಗಿ ಸಮುದಾಯದ ಹಿತಕ್ಕಾಗಿ ಶ್ರಮಿಸಬೇಕೆಂದು ಕರೆ ನೀಡಲಾಗಿದೆ.
ಈ ಕುರಿತು ಕರ್ನಾಟಕ ಮಾದಿಗ ಯುವ ಸಮೂಹದ ಮುಖಂಡರುಗಳಾದ
ಶ್ರೀ ಹನುಮೇಶ್ ಗುಂಡೂರ,
ಶ್ರೀ ಮಲ್ಲಿಕಾರ್ಜುನ ಬಾಂಬೇಕರ,
ಡಾ. ನಾಗೇಶ್ ಕೆ.ಎನ್.,
ಶ್ರೀ ಮುರಳಿಧರ ಮೇಲಿನಮನಿ,
ಶ್ರೀ ರವಿಕುಮಾರ್ ಮರಡಿಪುರ,
ಶ್ರೀ ಪ್ರತಾಪ್ (ಬೆಂಗಳೂರು),
ಶ್ರೀ ನಿಂಗರಾಜ ಗುಳೆ
ಹಾಗೂ ಸಂಯೋಜಕರಾದ ಶ್ರೀ ಎಸ್. ಸಂಗಮೇಶ್ ಅವರು ಸಂಯುಕ್ತವಾಗಿ ಕರೆ ನೀಡಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
