ಹಳ್ಳಿಕೆರೆಹುಂಡಿ ಪಿಎಸಿಸಿ ಬ್ಯಾಂಕ್ ನಿರ್ದೇಶಕರ ಉಪಚುನಾವಣೆಯಲ್ಲಿ ಶಿವಸ್ವಾಮಿ ಎನ್ ಭರ್ಜರಿ ಗೆಲುವು
ಸಂತೆಮರಹಳ್ಳಿ: ಸಮೀಪದ ಹಳ್ಳಿಕೆರೆ ಹುಂಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಖಾಲಿ ಇದ್ದ ಸಾಲಗಾರರಲ್ಲದ ಒಂದು ಸ್ಥಾನಕ್ಕೆ ಆಡಳಿತ ಮಂಡಳಿ ವತಿಯಿಂದ ಉಪ ಚುನಾವಣೆ ನಡೆಸಲಾಯಿತು.
ಮಂಗಳವಾರ ನಡೆದ ಪಿಎಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಯಲ್ಲಿ ಶಿವಸ್ವಾಮಿ ಎನ್ 75 ಮತಗಳನ್ನು ಪಡೆದು ಜಯಗಳಿಸುವ ಮೂಲಕ ನೂತನ ಪಿಎಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ನಾಗೇಶ್ ಘೋಷಣೆ ಮಾಡಿದರು .
ಇವರ ಪ್ರತಿ ಸ್ಪರ್ಧಿ ಮಲ್ಲೇಶ್ ಮೂರ್ತಿ 31 ಮತಗಳನ್ನು ಪಡೆದು ಸೋಲು ಅನುಭವಿಸಿದ್ದಾರೆ.
ಈ ಬಳಿಕ ನೂತನವಾಗಿ ನಿರ್ದೇಶಕರಾಗಿ ಆಯ್ಕೆಯಾದ ಶಿವಸ್ವಾಮಿ ಎನ್ ಮಾತನಾಡಿ ನನ್ನನ್ನು ಆಯ್ಕೆಯಾದ ಮಾಡಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳನ್ನ ಸಲ್ಲಿಸುತ್ತೇನೆ ಎಂದರು.
ಮುಂಬರುವ ಅವಧಿಯಲ್ಲಿ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಹಾಗೂ ಸ್ವ ಸಹಾಯ ಸಂಘಗಳಿಗೆ ಸಾಲ ನೀಡಿ ಎಲ್ಲರ ಹಿತಾ ಕಾಪಾಡುವಲ್ಲಿ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಪಿಎಸಿ ಸಿ ಬ್ಯಾಂಕ್ ನ ಮುಖ್ಯ ನಿರ್ವಹಣಾಧಿಕಾರಿ ಶಿವಕುಮಾರ್ ಹಾಗೂ ಲೀಲಾ ಮಹದೇವಪ್ಪ, ಮಣಿ ರಾಜಶೇಖರ್, ಡಿ ಎಸ್ ರೇವಣ್ಣ ಉಪಸ್ಥಿತರಿದ್ದರು.
What's Your Reaction?
Like
2
Dislike
0
Love
0
Funny
0
Angry
0
Sad
0
Wow
0
