ಕೆಜಿಎಫ್ ಜಯಮಂಗಲ ಗ್ರಾಮದ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕಿ ರೂಪಕಲಾ
ಕೆಜಿಎಫ್: ಟಿ. ಗೊಲ್ಲಹಳ್ಳಿ ಪಂಚಾಯತಿಯ ಜಯಮಂಗಲ ಹಾಗೂ ಚಂಬರಹಳ್ಳಿ ಗ್ರಾಮದ 80 ಲಕ್ಷ ವೆಚ್ಚದಲ್ಲಿ ರಸ್ತೆ ಡಂಬರೀಕರಣಕ್ಕೆ ಜನಪ್ರಿಯ ಶಾಸಕರು ರೂಪಕಲಾ ಶಶಿಧರ್ ಭೂಮಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು. ಟಿ ಗೊಲ್ಲಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಜಯಮಂಗಲ ಹಾಗೂ ಚಂಬರ್ತಿನಹಳ್ಳಿ ಗ್ರಾಮಗಳ ಸಂಪರ್ಕ ರಸ್ತೆ ಹದಗೆಟ್ಟಿದ್ದು, ನಾನು ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರು ನನಗೆ ಬೇಡಿಕೆ ಇಟ್ಟಿದ್ದರು.
ರಸ್ತೆ ಕಾಮಗಾರಿಗೆ ಅನುದಾನ ಬಿಡುಗಡೆಯಾಗಿ ಒಂದು ವರ್ಷ ಆಗಿತ್ತು. ಟೆಂಡರ್ ನಲ್ಲಿ ತಾಂತ್ರಿಕ ತೊಂದರೆಯಿಂದ ಸ್ವಲ್ಪ ತಡವಾಗಿದೆ. ನನ್ನ ಅವಧಿಯಲ್ಲಿ ಎಲ್ಲಾ ಗ್ರಾಮಗಳ ಮೂಲಸೌಕರ್ಗೆ ಒತ್ತು ನೀಡುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಗ್ರಾಮದಲ್ಲಿ ಕೆಲವು ಗ್ರಾಮಸ್ಥರು ಗ್ರಾಮದಲ್ಲಿ ಬಡವರಿಗೆ ಮನೆಗಳನ್ನು ಮಂಜೂರು ಮಾಡಿಲ್ಲ ಸ್ವಚ್ಛತೆಯನ್ನು. ಬೀದಿ ದೀಪಗಳ ನಿರ್ವಹಣೆ ಇಲ್ಲ ಎಂದು ಶಾಸಕರಿಗೆ ದೂರು ನೀಡಿದರು. ಗ್ರಾಮ ಪಂಚಾಯತಿ ಅಧ್ಯಕ್ಷರ ನಡುವೆ ವಾಗುವಾದ ನಡೆಯಿತು.
ಶಾಸಕರು ಗ್ರಾಮಸ್ಥರನ್ನು ಸಮಾಧಾನಪಡಿಸಿ. ನಿಮ್ಮ ಸಮಸ್ಯೆಗಳು ಏನೇ ಇದ್ದರೂ ನನ್ನ ಗಮನಕ್ಕೆ ತನ್ನಿ ನಾನು ಸರಿಪಡಿಸುತ್ತೇನೆ ಎಂದರು.
ನಂತರ ಶಾಸಕರು ಬೇತಮಂಗಲದ ಬಸ್ ನಿಲ್ದಾಣದಿಂದ ವಾಣಿಜ್ಯ ಮಳಿಗೆಗಳ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಪಂಚಾಯತಿ ಅಧ್ಯಕ್ಷರು. ವಿನು ಕಾರ್ತಿಕ್ ಮಾತನಾಡಿ ಹಳೆಯ ಮದ್ರಾಸ್ ರಸ್ತೆ ಅಗಲೀಕರಣ ಸಂದರ್ಭದಲ್ಲಿ ಹಳೆಯ ಪಂಚಾಯತಿ ಕಟ್ಟಡ ಕೆಡುವಿದ್ದು, ಈ ಜಾಗದಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡಲು ಪಂಚಾಯತಿಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಿ ವರ್ಗ ಒಂದರಲ್ಲಿ ಒಂದನೇ ಹಂತವಾಗಿ 12 ಲಕ್ಷದಲ್ಲಿ ಕಟ್ಟಡ ಪಾಯವನ್ನು ನಿರ್ಮಿಸಿ ನಂತರ ಶಾಸಕರ ವಿಶೇಷ ಅನುದಾನದಲ್ಲಿ ಐದು ಮಳಿಗೆಗಳನ್ನು ನಿರ್ಮಿಸಲಾಗುವುದು ಎಂದರು.
ಆಟೋ ಚಾಲಕರಿಗೆ ಆಟೋ ನಿಲ್ದಾಣವನ್ನು ವ್ಯವಸ್ಥೆ ಕಲ್ಪಿಸಿಕೊಡಲಾಗುವುದು ಪೊಲೀಸರ ಅವರಿಗೆ ಯಾವುದೇ ತೊಂದರೆ ನೀಡಬಾರದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮುಖಂಡರು ಆ ಮು ಲಕ್ಷ್ಮಿ ನಾರಾಯಣ್. ಟಿ ಗೊಳ್ಳಲಿ ಪಂಚಾಯತಿ ಅಧ್ಯಕ್ಷರು ಮಂಜುನಾಥ್. ರಾಜಣ್ಣ. ನಲ್ಲೂರು ಶಂಕರ್. ವೇಣುಗೋಪಾಲ್. ಚಿದಂಬರಂ. ಹಲವಾರು ಮುಖಂಡರು ಭಾಗವಹಿಸಿದ್ದರು.
What's Your Reaction?
Like
2
Dislike
0
Love
0
Funny
0
Angry
0
Sad
0
Wow
0
