ಕೆಜಿಎಫ್ ನಗರಾಭಿವೃದ್ಧಿ ಪ್ರಾಧಿಕಾರದಿಂದ ಪೂರ್ವಭಾವಿ ಸಭೆ
ಕೆಜಿಎಫ್: ಕೆಜಿಎಫ್ ನಗರಾಭಿವೃದ್ಧಿ ಪ್ರಾಧಿಕಾರದಿಂದ ಪೂರ್ವಭಾವಿ ಸಭೆ ನಡೆಯಿತು.
ಸಭೆಯಲ್ಲಿ ಪ್ರಮುಖ ವಿಚಾರಗಳ ಚರ್ಚೆಗೆ ಬಂತು ಈ ಸಂದರ್ಭದಲ್ಲಿ ಮಾತನಾಡಿದ ಆಯುಕ್ತರು. ಧರ್ಮೇಂದ್ರ ರವರು . ಟೌನ್ ಶಿಪ್ ನಿರ್ಮಾಣಕ್ಕೆ ಜಾಗ ಗುರ್ತಿಸಿದ್ದು, ಆ ಜಾಗದ ಸ್ಥಳಕ್ಕೆ ಕಾಂಪೌಂಡ್ ನಿರ್ಮಾಣ ಮಾಡಲು ಸರ್ಕಾರ ಈಗಾಗಲೇ 20 ಕೋಟಿ ಬಿಡುಗಡೆ ಮಾಡಿದೆ. ಅದೇ ರೀತಿಯಾಗಿ ಟೌನ್ ಶಿಪ್ ನಿರ್ಮಾಣವಾಗುವ ಜಾಗಕ್ಕೆ ಸೂಕ್ತವಾದ ದಾರಿ ಇಲ್ಲದ ಕಾರಣ ದಾರಿ ನಿರ್ಮಾಣ ಮಾಡಲು 3 ಎಕರೆ ಜಮೀನನ್ನು ಖರೀದಿಸಲಾಗುತ್ತದೆ ಎಂದರು.
ಬೆಂಗಳೂರು ಹೊಸೂರು ರಿಂಗ್ ರೋಡ್ ಸಂಪರ್ಕವನ್ನು ನಮ್ಮ ಕೆಜಿಎಫ್ ನೈಸ್ ರಸ್ತೆಗೆ ಸಂಪರ್ಕ ಕಲ್ಪಿಸಲಾಗುವುದು ಮತ್ತು ನಗರ ಅಭಿವೃದ್ಧಿ ಪ್ರಾಧಿಕಾರ ಬಂಗಾರಪೇಟೆ ಹಾಗೂ ಕೆಜಿಎಫ್ ಬೇರ್ಪಟ್ಟಿದ್ದು, ಈಗ ನಮ್ಮ ಕೆಜಿಎಫ್ ನಗರವನ್ನು ಅಭಿವೃದ್ಧಿಪಡಿಸಲು ಹಾಗೂ ನೂತನ ಕಟ್ಟಡವನ್ನು ಕಟ್ಟಲು ಮತ್ತಷ್ಟು ಅನುದಾನವನ್ನು ಬಿಡುಗಡೆ ಮಾಡಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಎಂದು ಹೇಳಿದರು.
ಕೆ.ಡಿ.ಎ. ಅಧ್ಯಕ್ಷರು. ಶ್ರೀನಿವಾಸ್ ಮಾತನಾಡಿ. ನಗರ ಅಭಿವೃದ್ಧಿಪಡಿಸಲು ಹಲವಾರು ಕ್ರಿಯಾ ಯೋಜನೆಗಳನ್ನು ರೂಪಿಸಿದ್ದು, ಒಂದೊಂದಾಗಿ ಜಾರಿಗೆ ತರಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಅಧಿಕಾರಿಗಳು ಭಾಗವಹಿಸಿದ್ದರು.
What's Your Reaction?
Like
2
Dislike
0
Love
0
Funny
0
Angry
0
Sad
0
Wow
0
