ಗನ್ನಿ ಅಗ್ರಹಾರ ಗ್ರಾಮದಲ್ಲಿ ಪ್ರತಿಭಾ ಕಾರಂಜಿಯನ್ನು ಪಡುವನಹಳ್ಳಿ ಕ್ಲಸ್ಟರ್ ವತಿಯಿಂದ ಏರ್ಪಡಿಸಲಾಗಿತ್ತು
ಚನ್ನರಾಯಪಟ್ಟಣ: ತಾಲೂಕಿನ ದಂಡಿಗನಹಳ್ಳಿ ಹೋಬಳಿಯ ಗನ್ನಿ ಅಗ್ರಹಾರ ಗ್ರಾಮದಲ್ಲಿ ಪ್ರತಿಭಾ ಕಾರಂಜಿಯನ್ನು ಪಡುವನಹಳ್ಳಿ ಕ್ಲಸ್ಟರ್ ವತಿಯಿಂದ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮವನ್ನು ಶಿಕ್ಷಣ ಇಲಾಖೆಯ ಇಸಿ ಓ ಶಿವಾನಂದ್ ರವರು ಹಾಗೂ ಸಿಆರ್ ಪಿ ಸಂಗೀತ ಅವರು ಉದ್ಘಾಟಿಸಿದರು.
ವಿನಾಯಕ ಗೆಳೆಯರ ಬಳಗದ ವತಿಯಿಂದ ಗನ್ನಿ ಅಗ್ರಹಾರ ಸರ್ಕಾರಿ ಶಾಲೆಗೆ ಗಡಿಯಾರ, ಚೇರುಗಳನ್ನು ವಿತರಣೆ ಮಾಡಿದರು. ಗನ್ನಿ ಅಗ್ರಹಾರ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಚೇರ್, ತಟ್ಟೆ, ಲೋಟಗಳನ್ನು ಉಚಿತವಾಗಿ ನೀಡಿದರು. ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ಶಾಮಿಯಾನ ಹಾಗೂ ಮೈಕ್ ವ್ಯವಸ್ಥೆ ಮತ್ತು ಸರ್ವರಿಗೂ ಊಟದ ವ್ಯವಸ್ಥೆಯನ್ನು ವಿನಾಯಕ ಗೆಳೆಯ ಬಳಗದವರು ಮಾಡಿದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಭಾರತಿ ಮಲ್ಲೇಶ್, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ರಮ್ಯಾ ನಾಗಶೆಟ್ಟಿ, ಕುಂಬೆನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಅಗ್ರಹಾರ ಗ್ರಾಮದ ಸದಸ್ಯರಾದ ಶ್ರೀಮತಿ ಮೀನಾಕ್ಷಿ ಯೋಗೇಶ್, ಕಾಚೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಎ ಎಂ ಪ್ರಭಾಕರ್, ಕಾಚೇನಹಳ್ಳಿ ಸೊಸೈಟಿಯ ನಿರ್ದೇಶಕರುಗಳಾದ ಜಗದೀಶ್, ಗುತ್ತಿಗೆದಾರರಾದ ಬಾಬು, ಚನ್ನರಾಯಪಟ್ಟಣ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷರು ಹಾಗೂ ಹಾಲಿ ನಿರ್ದೇಶಕರಾದ ಸೋಮನಾಥ್, ಗನ್ನಿ ಅಗ್ರಹಾರ ಸರ್ಕಾರಿ ಶಾಲೆಯ ಶಾಲೆಯ ಮುಖ್ಯ ಶಿಕ್ಷಕರಾದ ಸಿದ್ದರಾಜು, ಸಹ ಶಿಕ್ಷಕಿ ಲಕ್ಷ್ಮಿ, ಅಗ್ರಹಾರ ಗ್ರಾಮದ ವಿನಾಯಕ ಗೆಳೆಯರ ಬಳಗದ ಸದಸ್ಯರಾದ ಭರತ್, ಮಂಜೇಗೌಡ, ಸತೀಶ್, ವಿನಯ್, ಶರತ್, ಚೇತನ್, ಗಿರೀಶ್, ಸಂದೀಪ್, ಮಂಜುನಾಥ್, ಮೋಹನ್, ಕುಮಾರ್, ಅಭಿ ಸೇರಿದಂತೆ ಇತರರು ಹಾಜರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
