ನರೇಗಾ ಬಚಾವ್ ಸಂಗ್ರಾಮ ಆಂದೋಲನದ ಬೃಹತ್ ಪ್ರತಿಭಟನೆ – ಚಿಕ್ಕಬಳ್ಳಾಪುರ
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹಾಗೂ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿಗಳ ಸಹಯೋಗದೊಂದಿಗೆ *ನರೇಗ ಬಚಾವ್ ಸಂಗ್ರಾಮ ಆಂದೋಲನದ ಬೃಹತ್ ಪ್ರತಿಭಟನಾ ಸಭೆ* ಯನ್ನು ದಿನಾಂಕ *23-02-2026ರ* ಸೋಮವಾರ *ಬೆಳಗ್ಗೆ 10:00 ಗಂಟೆಗೆ* *ಚದಲಪುರ ಕ್ರಾಸ್ ಹತ್ತಿರ* , ಬೆಂಗಳೂರು - ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ NH-7 , ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಪ್ರತಿಭಟನೆಯಲ್ಲಿ ಮಾನ್ಯ ರಾಜ್ಯದ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಸನ್ಮಾನ್ಯ *ಶ್ರೀ ರಣದೀಪ್ ಸಿಂಗ್ ಸುರ್ಜೆವಾಲ* ರವರು, ಮಾನ್ಯ ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿಯವರಾದ *ಶ್ರೀ ಡಿ.ಕೆ.ಶಿವಕುಮಾರ್* ರವರು, ಮಾನ್ಯ ಮುಖ್ಯಮಂತ್ರಿಯವರಾದ *ಶ್ರೀ ಸಿದ್ದರಾಮಯ್ಯ* ರವರು, ಎಐಸಿಸಿ ಕಾರ್ಯದರ್ಶಿಯವರಾದ *ಶ್ರೀ ಅಭಿಷೇಕ್ ದತ್* ರವರು, ಕೆಪಿಸಿಸಿ ಕಾರ್ಯಾಧ್ಯಕ್ಷರುಗಳು, ಸಚಿವರುಗಳು, ಶಾಸಕರುಗಳು, ಪಕ್ಷದ ಹಿರಿಯ ಮುಖಂಡರುಗಳು, ರೈತಪರ ಸಂಘಟನೆಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಈ ಪ್ರತಿಭಟನೆಯಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ವಿಭಾಗ ಜಿಲ್ಲೆಗಳ ಪಕ್ಷದ ಎಲ್ಲಾ ಹಂತದ ಮುಖಂಡರುಗಳು, ಪದಾಧಿಕಾರಿಗಳು, ಕಾರ್ಯಕರ್ತರುಗಳು ತಪ್ಪದೇ ಭಾಗವಹಿಸಿ, ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕೆಂದು ಕೋರುತ್ತೇನೆ.
ಹನುಮಂತರಾಯಪ್ಪ
ಅಧ್ಯಕ್ಷರು, ಬೆಂಗಳೂರು ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಸಮಿತಿ
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
