ನೀರಾವರಿ ಇಲಾಖೆಗೆ ಛೀಮಾರಿ ಹಾಕಿ ಕಛೇರಿಯ ಸಾಮಗ್ರಿಗಳ ಜಪ್ತಿಗೆ ಆದೇಶ ನೀಡಿದ ಕೆ.ಆರ್.ಪೇಟೆ ಸಿವಿಲ್ ನ್ಯಾಯಾಲಯ
ಶೀಥಪೀಡಿತ ಗ್ರಾಮಗಳ ರೈತರಿಗೆ ಪರಿಹಾರ ನೀಡಲು ವಿಳಂಬ ಮಾಡಿದ ನೀರಾವರಿ ಇಲಾಖೆಗೆ ಛೀಮಾರಿ ಹಾಕಿ ಕಛೇರಿಯ ಸಾಮಗ್ರಿಗಳ ಜಪ್ತಿಗೆ ಆದೇಶ ನೀಡಿದ ಕೆ.ಆರ್.ಪೇಟೆ ಸಿವಿಲ್ ನ್ಯಾಯಾಲಯ..
ಹೇಮಾವತಿ ಜಲಾಶಯ ಯೋಜನೆಯ ನಂ.03 ವಿಭಾಗ ಕಛೇರಿ ಪೀಠೋಪಕರಣಗಳು ಹಾಗೂ ಸಾಮಗ್ರಿಗಳನ್ನು ಗೂಡ್ಸ್ ವಾಹನದಲ್ಲಿ ತುಂಬಿಕೊಂಡು ಹೋದ ಗಂಗನಹಳ್ಳಿ ಹಾಗೂ ಕಳ್ಳನಕೆರೆ ಗ್ರಾಮಸ್ಥರು..
ಹೇಮಾವತಿ ಜಲಾಶಯ ಯೋಜನಾ ವ್ಯಾಪ್ತಿಯ ಕೃಷ್ಣರಾಜಪೇಟೆ ತಾಲೂಕಿನ ಶೀಥಪೀಡಿತ ಗ್ರಾಮಗಳಾದ ಕಳ್ಳನಕೆರೆ ಹಾಗೂ ಗಂಗನಹಳ್ಳಿ ಗ್ರಾಮಗಳ ರೈತರಿಗೆ ರಾಜ್ಯ ಸರ್ಕಾರವು ಸೂಕ್ತ ಪರಿಹಾರವನ್ನು ನೀಡದೆ ಬೇಜವಾಬ್ದಾರಿತನವನ್ನು ಪ್ರದರ್ಶಿಸಿದ ಹಿನ್ನೆಲೆಯಲ್ಲಿ ಕೆ.ಆರ್.ಪೇಟೆ ಸಿವಿಲ್ ನ್ಯಾಯಾಲಯವು ನಂ.03 ಕಾರ್ಯಪಾಲಕ ಅಭಯಂತರರ ಕಛೇರಿಯ ಪೀಠೋಪಕರಣಗಳು ಕಂಪ್ಯೂಟರ್ ಸೇರಿದಂತೆ ಕಛೇರಿಯ ಸಾಮಗ್ರಿಗಳನ್ನು ಜಪ್ತಿ ಮಾಡಿ ಆದೇಶ ಹೊರಡಿಸಿದೆ.
ಶ್ರೀರಂಗಪಟ್ಟಣದ ಖ್ಯಾತ ವಕೀಲರಾದ ಪುಟ್ಟೇಗೌಡರ ನೇತೃತ್ವದಲ್ಲಿ ರಾಜ್ಯ ಸರ್ಕಾರದ ನೀರಾವರಿ ಇಲಾಖೆಯ ವಿರುದ್ಧ ಕೆ.ಆರ್.ಪೇಟೆ ಸಿವಿಲ್ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿ ಪರಿಹಾರಕ್ಕಾಗಿ 1986 ರಿಂದಲೂ ನ್ಯಾಯಾಲಯಕ್ಕೆ ಅಲೆಯುತ್ತಿದ್ದರೂ, ನೀರಾವರಿ ಇಲಾಖೆಯು ಸೂಕ್ತ ಪರಿಹಾರ ನೀಡಿ, ಗ್ರಾಮಸ್ಥರಿಗೆ ಪುನರ್ವಸತಿ ಕಲ್ಪಿಸಿಕೊಡಲು ಬೇಜವಾಬ್ದಾರಿತನವನ್ನು ಪ್ರದರ್ಶಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯವು ಹೇಮಾವತಿ ಜಲಾಶಯ ಯೋಜನೆಯ ನಂ. 03 ವಿಭಾಗ ಕಛೇರಿಯ ಕಾರ್ಯಪಾಲಕ ಅಭಯಂತರರ ಕಚೇರಿಯ ಪೀಠೋಪಕರಣ ಗಳನ್ನು ಜಪ್ತಿ ಮಾಡಿ ಆದೇಶ ನೀಡಿದ ಹಿನ್ನೆಲೆಯಲ್ಲಿ ಇಂದು ನ್ಯಾಯಾಲಯದ ಸಿಬ್ಬಂದಿಗಳೊಂದಿಗೆ ನೀರಾವರಿ ಇಲಾಖೆಯ ಕಛೇರಿಗೆ ಆಗಮಿಸಿದ ಕಳ್ಳನಕೆರೆ ಹಾಗೂ ಗಂಗನಹಳ್ಳಿಯ ಗ್ರಾಮಸ್ಥರು ಪೀಠೋಪಕರಣಗಳನ್ನು ತಮ್ಮ ವಾಹನಗಳಿಗೆ ತುಂಬಿಕೊಂಡು ತೆರಳಿದರು.
ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ನೀರಾವರಿ ಇಲಾಖೆಯ ನಂ.03 ವಿಭಾಗ ಕಛೇರಿಯ ಕಾರ್ಯಪಾಲಕ ಎಂಜಿನಿಯರ್ ಜಯರಾಮ್ ಸರ್ಕಾರವು ನಮ್ಮ ಯೋಜನಾ ವ್ಯಾಪ್ತಿಯ ಶೀಥಪೀಡಿತ ಗ್ರಾಮಗಳ ಪುನರ್ವಸತಿಗೆ ಹಣ ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ ಪರಿಹಾರ ನೀಡಲು ವಿಳಂಬವಾಗಿದೆ ಆದಷ್ಟು ಶೀಘ್ರವೇ, ನೊಂದಿರುವ ರೈತ ಬಾಂಧವರಿಗೆ ಪರಿಹಾರವನ್ನು ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಹೇಮಾವತಿ ಜಲಾಶಯ ಯೋಜನೆಯ ಸಹಾಯಕ ಕಾರ್ಯಪಾಲಕ ಅಭಿಯಂತರರುಗಳಾದ ಆನಂದ್, ವಿಶ್ವನಾಥ್ ಚಂದ್ರೇಗೌಡ ಹಾಗೂ ಕಛೇರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
