"ನೃತ್ಯ ವೈಭವ" ಹಾಗೂ "ಅತ್ತ್ಯುತ್ತಮ ಶಿಕ್ಷಕಿ" ಪ್ರಶಸ್ತಿ ಪ್ರದಾನ ಸಮಾರಂಭ
ಬೆಂಗಳೂರು: ಭರತನಾಟ್ಯ ಕಲಾವಿದೆ ಹಾಗೂ ನಗರದ ಪ್ರತಿಷ್ಠಿತ ಕಾನೂನು ವಿದ್ಯಾಲಯದಲ್ಲಿ ಉಪನ್ಯಾಸಕಿಯೂ ಆಗಿರುವ ವಿದುಷಿ ಶ್ರೀಮತಿ ಎಲ್.ಎಸ್. ವಾಸವಿ ಅವರ ಭರತನಾಟ್ಯ ಪ್ರದರ್ಶನವು ಸೆಪ್ಟೆಂಬರ್ 10, ಬುಧವಾರ ಸಂಜೆ 5-00ಕ್ಕೆ ಬಸವನಗುಡಿಯ ಬಿ.ಪಿ. ವಾಡಿಯಾ ರಸ್ತೆಯಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ಜರುಗಲಿದೆ.
ಇದೇ ಸಂದರ್ಭದಲ್ಲಿ ಕಲಾವಿದೆ ಮತ್ತು ಶಿಕ್ಷಕಿ ವಿದುಷಿ ಶ್ರೀಮತಿ ವಾಸವಿ ಅವರಿಗೆ "ಅತ್ಯುತ್ತಮ ಶಿಕ್ಷಕಿ" ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಕರ್ನಾಟಕ ಆರ್ಯ ವೈಶ್ಯ ಮಹಾಸಭಾದ ಅಧ್ಯಕ್ಷರಾದ ಶ್ರೀ ಆರ್.ಪಿ. ರವಿಶಂಕರ್ ಉಪಸ್ಥಿತರಿರುತ್ತಾರೆ.
ಈ ಕಾರ್ಯಕ್ರಮವನ್ನು ಆರ್ಯ ವೈಶ್ಯ ಆಫೀಸರ್ಸ್ ಮತ್ತು ಪ್ರೊಫೆಷನಲ್ ಅಸೋಸಿಯೇಷನ್ ಹಾಗೂ ಅವೋಪ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಇವರು ಏರ್ಪಡಿಸಿರುತ್ತಾರೆ.
ಈ ವಿಶೇಷ ಕಾರ್ಯಕ್ರಮದಲ್ಲಿ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ಸಂಸ್ಥೆಯವರು ವಿನಂತಿಸಿದ್ದಾರೆ.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
