ಬಾಣಸವಾಡಿ ಸೇನಾ ಗ್ಯಾರಿಸನ್‌ನಲ್ಲಿ ಸೈನಿಕರೊಂದಿಗೆ ರಕ್ಷಾ ಬಂಧನ ಆಚರಿಸಿದ ವಿದ್ಯಾರ್ಥಿಗಳು 

Aug 13, 2025 - 12:03
 0  3
ಬಾಣಸವಾಡಿ ಸೇನಾ ಗ್ಯಾರಿಸನ್‌ನಲ್ಲಿ ಸೈನಿಕರೊಂದಿಗೆ ರಕ್ಷಾ ಬಂಧನ ಆಚರಿಸಿದ ವಿದ್ಯಾರ್ಥಿಗಳು 

ಬೆಂಗಳೂರು: ನ್ಯೂ ಹೊರೈಜನ್ ಪಬ್ಲಿಕ್ ಸ್ಕೂಲ್ ಮತ್ತು ಕೈರಳೀ ನಿಕೇತನ್ ಶಾಲೆಯ ವಿದ್ಯಾರ್ಥಿಗಳು ಬಾಣಸವಾಡಿ ಮಿಲಿಟರಿ ಗ್ಯಾರಿಸನ್‌ನಲ್ಲಿರುವ ಗೂರ್ಖಾ ಆಂಫಿಬಿಯನ್ಸಿನ ಬೈಸನ್ ವಿಭಾಗಕ್ಕೆ ಭೇಟಿ ನೀಡಿ, ರಕ್ಷಾ ಬಂಧನ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಸೈನಿಕರ ದೈನಂದಿನ ದಿನಚರಿಯನ್ನು ಪರಿಚಯಿಸುವ ಮತ್ತು ರಾಷ್ಟ್ರದ ರಕ್ಷಕರೊಂದಿಗೆ ಶುಭ ರಕ್ಷಾ ಬಂಧನ ಹಬ್ಬವನ್ನು ಆಚರಿಸುವ ಈ ಕಾರ್ಯಕ್ರಮವು ಗ್ಯಾರಿಸನ್ ನ ಕಮಾಂಡರ್ ಕರ್ನಲ್ ಯಶ್ ಅಗರ್ವಾಲ್ ಅವರು ಯುವ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸುವ ಮೂಲಕ ಪ್ರಾರಂಭಗೊಂಡಿತು. 

    ಯುವ ಸಂದರ್ಶಕರು ಸೈನಿಕರಿಗೆ ರಾಖಿಗಳನ್ನು ಕಟ್ಟಿದರು, ರಾಷ್ಟ್ರವನ್ನು ರಕ್ಷಿಸುವಲ್ಲಿ ಅವರ ಸಮರ್ಪಣೆ ಮತ್ತು ತ್ಯಾಗಕ್ಕೆ ಕೃತಜ್ಞತೆ ಸಲ್ಲಿಸಿದರು. ಪ್ರತಿಯಾಗಿ ಸೈನಿಕರು ವಿದ್ಯಾರ್ಥಿಗಳನ್ನು ಆಶೀರ್ವದಿಸಿದರು ಮತ್ತು ದೇಶಭಕ್ತಿಯ ಮನೋಭಾವವನ್ನು ಬೆಳೆಸುವ ಅವರ ಸೇವೆಯ ಸ್ಪೂರ್ತಿದಾಯಕ ಕಥೆಗಳನ್ನು ಹಂಚಿಕೊಂಡರು.

     ನಂತರ ವಿದ್ಯಾರ್ಥಿಗಳು  ಯುದ್ಧ ಗೌರವಗಳು ಮತ್ತು ರೆಜಿಮೆಂಟಲ್ ಸಂಪ್ರದಾಯಗಳ ಬಗ್ಗೆಗಿನ ಶ್ರೀಮಂತ ಇತಿಹಾಸವನ್ನು ತಿಳಿದುಕೊಳ್ಳುವುದರೊಂದಿಗೆ,   ವೈಶಿಷ್ಟ್ಯಪೂರ್ಣವಾದ ದೃಷ್ಟಿಕೋನದಿಂದ ವಿಶಿಷ್ಟ ಅನುಭೂತಿಯನ್ನು ಗಳಿಸಿದರು ಮತ್ತು ಒಬ್ಬ ಸೈನಿಕನ ದೈನಂದಿನ ಜೀವನದ ಅನುಭವ ಪಡೆದರು. 

   ಇವರೆಲ್ಲರ ಈ ಭೇಟಿಯು  ಹೃದಯಸ್ಪರ್ಶಿ ರಕ್ಷಾ ಬಂಧನ ಆಚರಣೆಗೆ ಸಾಕ್ಷಿಯಾಯಿತು.
ಈ ಆಚರಣೆಯು ಸೈನಿಕರು ವಿದ್ಯಾರ್ಥಿಗಳೊಂದಿಗೆ ಗುಂಪು ಛಾಯಾಚಿತ್ರ ತೆಗೆಸಿಕೊಂಡು ಹಾಗೂ ಉಪಹಾರದೊಂದಿಗೆ ಮುಕ್ತಾಯಗೊಂಡಿತು. ಇದು ಸಶಸ್ತ್ರ ಪಡೆಗಳು ಮತ್ತು ಅವರು ಸೇವೆ ಸಲ್ಲಿಸುತ್ತಿರುವ ನಾಗರಿಕರ ನಡುವಿನ ಪ್ರೀತಿಯ ನೆನಪುಗಳನ್ನು ಮತ್ತು ಈರ್ವರ ನಡುವಿನ ಬಲವಾದ ಬಾಂಧವ್ಯಕ್ಕೆ ಸಾಕ್ಷಿಯಾಯಿತು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456