ಭಜನ - ಪ್ರವಚನ - ಸಂಕೀರ್ತನ ಆಯೋಜನೆ : ಟಿ ಟಿ ಡಿ ಹೆಚ್.ಡಿ.ಪಿ.ಪಿ
ಬೆಂಗಳೂರು : ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಯಲಹಂಕ ಉಪನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಸೆಪ್ಟೆಂಬರ್ 2 ರಿಂದ 5ರ ವರೆಗೆ ಧಾರ್ಮಿಕ/ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅವುಗಳ ವಿವರಗಳು ಈ ರೀತಿ ಇವೆ
ಭಜನಾ ಕಾರ್ಯಕ್ರಮ (ಪ್ರತಿದಿನ ಸಂಜೆ 6-00 ರಿಂದ 7-00) ಸೆಪ್ಟೆಂಬರ್ 2-ಯಲಹಂಕದ ವೈಷ್ಣವಿ ಭಜನಾ ಮಂಡಳಿ, ಸೆಪ್ಟೆಂಬರ್ 3-ಮತ್ತಿಕೆರೆಯ ಶ್ರೀ ಲಕ್ಷ್ಮೀ ವೆಂಕಟೇಶ್ವರ ಭಜನಾ ಮಂಡಳಿ, ಸೆಪ್ಟೆಂಬರ್ 4-ಯಲಹಂಕದ ಹನುಮಾನ್ ಕೀ ಜೈ ಭಜನಾ ಮಂಡಳಿ.
ಪ್ರವಚನ ಕಾರ್ಯಕ್ರಮ : ಸೆಪ್ಟೆಂಬರ್ 2 ರಿಂದ 4ರ ವರೆಗೆ (ಪ್ರತಿದಿನ ಸಂಜೆ 7-00 ರಿಂದ 8-00). ಶ್ರೀ ಕಂಬಾಲೂರು ವಿಜಯವಿಠಲಾಚಾರ್ಯರಿಂದ "ಪ್ರೋಷ್ಪಪದಿ ಭಾಗವತ" ವಿಷಯವಾಗಿ ಧಾರ್ಮಿಕ ಪ್ರವಚನ.
ಹರಿನಾಮ ಸಂಕೀರ್ತನೆ : ಸೆಪ್ಟೆಂಬರ್ 5, ಶುಕ್ರವಾರ, ಸಂಜೆ 6-30 ರಿಂದ 8-00ರ ವರೆಗೆ "ಹರಿನಾಮ ಸಂಕೀರ್ತನೆ". ಗಾಯನ : ಶ್ರೀಮತಿ ಚಾಂದನಿ ಗರ್ತಿಗರೆ, ಮೃದಂಗ : ಶ್ರೀ ಶ್ರೀನಿವಾಸ್ ಅನಂತರಾಮಯ್ಯ, ಪಿಟೀಲು : ಶ್ರೀ ಅರ್ಜುನ್ ಎನ್.
ಕಾರ್ಯಕ್ರಮ ನಡೆಯುವ ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಯಲಹಂಕ ಉಪನಗರ, ಬೆಂಗಳೂರು-560064. ಹೆಚ್ಚಿನ ಮಾಹಿತಿಗಾಗಿ : ಡಾ|| ಪಿ. ಭುಜಂಗರಾವ್, ಮೊಬೈಲ್ 7760505503 / 9035760790
What's Your Reaction?
Like
3
Dislike
0
Love
0
Funny
0
Angry
0
Sad
0
Wow
0
